<p><strong>ಕಾರಟಗಿ</strong>: ವೈಕುಂಠ ಏಕಾದಶಿ ದಿನವನ್ನು ಶ್ರದ್ದಾ, ಭಕ್ತಿ, ಸಂಭ್ರಮದೊಂದಿಗೆ ಮಂಗಳವಾರ ಆಚರಿಸಲಾಯಿತು.</p>.<p>ಪಟ್ಟಣದ ಪುರಾತನ ದೇವಾಲಯವಾಗಿರುವ ವೆಂಕಟೇಶ್ವರ ದೇವಾಲಯವನ್ನು ಯುವಕರು 2 ದಿನದಿಂದ ಸ್ವಚ್ಛಗೊಳಿಸಿದ್ದರು. ದೇವಾಲಯದ ಮಹಾದ್ವಾರದಿಂದ ದೇವಾಲಯದ ಒಳಗಿನವರೆಗೂ ಹೂವು, ಬಾಳೆಗೊನೆ, ಟೆಂಗಿನಗರಿ, ಮಾವಿನ ಎಲೆಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಮುಂಭಾಗದಲ್ಲಿ ಮಹಿಳೆಯರು ಸ್ವಪ್ರೇರಣೆಯಿಂದ ಸೆಗಣಿ ನೀರು ಹಾಕಿ ಬಣ್ಣ, ಬಣ್ಣದ ರಂಗೋಲಿಯನ್ನು ಬಿಡಿಸಿ ಕಳೆ ಹೆಚ್ಚಿಸಿದ್ದರು.</p>.<p>ಅರ್ಚಕ ಭೋಗೇಶಾಚಾರ್ಯ ಇನಾಮದಾರ ನೇತೃತ್ವದಲ್ಲಿ ವಿಶೇಷ ಪೂಜೆ, ಅಲಂಕಾರ, ಪಂಚಾಮೃತಾಭಿಷೇಕ, ತುಳಸಿ ಅರ್ಚನೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.</p>.<p>ನಾಗರಿಕರು, ಮಹಿಳೆಯರು ಕುಟುಂಬ ಪರಿವಾರದೊಂದಿಗೆ ನಸುಕಿನ ಜಾವದಿಂದ ರಾತ್ರಿಯವರೆಗೂ ಆಗಮಿಸಿ ದರ್ಶನ ಪಡೆದರು. ಬೆಳಿಗ್ಗೆ ನೂರಾರು ನಾಗರಿಕರು, ಮಹಿಳೆಯರು ಸಾಲಾಗಿ ನಿಂತು ದರ್ಶನ ಪಡೆದರು. ಆಗಮಿಸಿದ್ದ ಭಕ್ತರು ಪೂಜೆ ಸಲ್ಲಿಸಿ, ತೀರ್ಥ, ಪ್ರಸಾದ ಸ್ವೀಕರಿಸಿ, ಭಕ್ತಿಯನ್ನು ಸಮರ್ಪಿಸಿ ಧನ್ಯತಾಭಾವ ಮೆರೆದರು.</p>.<p>ಆಗಮಿಸಿದ್ದ ಭಕ್ತರಿಗೆ ದೇವಸ್ಥಾನ ಸೇವಾ ಸಮಿತಿಯ ಯುವಕರು ಪ್ರಸಾದ ವಿತರಿಸಿದರು.</p>.<p>ಅರ್ಚಕ ಭೋಗೇಶಾರ್ಯ ಇನಾಮದಾರ ಮಾತನಾಡಿ,‘ವರ್ಷದಲ್ಲೇ ಅತ್ಯಂತ ಪವಿತ್ರ ದಿನವೆಂದು ವೈಕುಂಠ ಏಕಾದಶಿ ದಿನವನ್ನು ಆಚರಿಸಲಾಗುತ್ತಿದೆ. ಅದರಲ್ಲೂ ವೆಂಕಟೇಶ್ವರ ದರ್ಶನ ಪಡೆಯುವುದು, ಉಪವಾಸ ಮಾಡುವುದು ಇನ್ನೂ ಶ್ರೇಷ್ಠ. ಇದರ ಮಹತ್ವದಿಂದಲೇ ಇಂದು ನೂರಾರು ಭಕ್ತರು ಆಗಮಿಸಿ, ದರ್ಶನ ಪಡೆದರು. ಈ ಸಂಪ್ರದಾಯ ಅನೇಕ ದಶಕಗಳಿಂದ ನಡೆದುಕೊಂಡು ಬಂದಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರಟಗಿ</strong>: ವೈಕುಂಠ ಏಕಾದಶಿ ದಿನವನ್ನು ಶ್ರದ್ದಾ, ಭಕ್ತಿ, ಸಂಭ್ರಮದೊಂದಿಗೆ ಮಂಗಳವಾರ ಆಚರಿಸಲಾಯಿತು.</p>.<p>ಪಟ್ಟಣದ ಪುರಾತನ ದೇವಾಲಯವಾಗಿರುವ ವೆಂಕಟೇಶ್ವರ ದೇವಾಲಯವನ್ನು ಯುವಕರು 2 ದಿನದಿಂದ ಸ್ವಚ್ಛಗೊಳಿಸಿದ್ದರು. ದೇವಾಲಯದ ಮಹಾದ್ವಾರದಿಂದ ದೇವಾಲಯದ ಒಳಗಿನವರೆಗೂ ಹೂವು, ಬಾಳೆಗೊನೆ, ಟೆಂಗಿನಗರಿ, ಮಾವಿನ ಎಲೆಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಮುಂಭಾಗದಲ್ಲಿ ಮಹಿಳೆಯರು ಸ್ವಪ್ರೇರಣೆಯಿಂದ ಸೆಗಣಿ ನೀರು ಹಾಕಿ ಬಣ್ಣ, ಬಣ್ಣದ ರಂಗೋಲಿಯನ್ನು ಬಿಡಿಸಿ ಕಳೆ ಹೆಚ್ಚಿಸಿದ್ದರು.</p>.<p>ಅರ್ಚಕ ಭೋಗೇಶಾಚಾರ್ಯ ಇನಾಮದಾರ ನೇತೃತ್ವದಲ್ಲಿ ವಿಶೇಷ ಪೂಜೆ, ಅಲಂಕಾರ, ಪಂಚಾಮೃತಾಭಿಷೇಕ, ತುಳಸಿ ಅರ್ಚನೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.</p>.<p>ನಾಗರಿಕರು, ಮಹಿಳೆಯರು ಕುಟುಂಬ ಪರಿವಾರದೊಂದಿಗೆ ನಸುಕಿನ ಜಾವದಿಂದ ರಾತ್ರಿಯವರೆಗೂ ಆಗಮಿಸಿ ದರ್ಶನ ಪಡೆದರು. ಬೆಳಿಗ್ಗೆ ನೂರಾರು ನಾಗರಿಕರು, ಮಹಿಳೆಯರು ಸಾಲಾಗಿ ನಿಂತು ದರ್ಶನ ಪಡೆದರು. ಆಗಮಿಸಿದ್ದ ಭಕ್ತರು ಪೂಜೆ ಸಲ್ಲಿಸಿ, ತೀರ್ಥ, ಪ್ರಸಾದ ಸ್ವೀಕರಿಸಿ, ಭಕ್ತಿಯನ್ನು ಸಮರ್ಪಿಸಿ ಧನ್ಯತಾಭಾವ ಮೆರೆದರು.</p>.<p>ಆಗಮಿಸಿದ್ದ ಭಕ್ತರಿಗೆ ದೇವಸ್ಥಾನ ಸೇವಾ ಸಮಿತಿಯ ಯುವಕರು ಪ್ರಸಾದ ವಿತರಿಸಿದರು.</p>.<p>ಅರ್ಚಕ ಭೋಗೇಶಾರ್ಯ ಇನಾಮದಾರ ಮಾತನಾಡಿ,‘ವರ್ಷದಲ್ಲೇ ಅತ್ಯಂತ ಪವಿತ್ರ ದಿನವೆಂದು ವೈಕುಂಠ ಏಕಾದಶಿ ದಿನವನ್ನು ಆಚರಿಸಲಾಗುತ್ತಿದೆ. ಅದರಲ್ಲೂ ವೆಂಕಟೇಶ್ವರ ದರ್ಶನ ಪಡೆಯುವುದು, ಉಪವಾಸ ಮಾಡುವುದು ಇನ್ನೂ ಶ್ರೇಷ್ಠ. ಇದರ ಮಹತ್ವದಿಂದಲೇ ಇಂದು ನೂರಾರು ಭಕ್ತರು ಆಗಮಿಸಿ, ದರ್ಶನ ಪಡೆದರು. ಈ ಸಂಪ್ರದಾಯ ಅನೇಕ ದಶಕಗಳಿಂದ ನಡೆದುಕೊಂಡು ಬಂದಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>