ಪ್ರತಿಭಟನಾ ಸ್ಥಳಕ್ಕೆ ಎಇಇ ಭೇಟಿ
ಬಿಸರಹಳ್ಳಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಎಇಇ ವಿಲಾಸ್ ಬೋಸ್ಲೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಬಳಿಕ ಮಾತನಾಡಿದ ಅವರು ಜೆಜೆಎಂ ಕಾಮಗಾರಿ ಸರಿಪಡಿಸಿ ಪೈಪ್ಲೈನ್ ದುರಸ್ತಿ ಮಾಡಿ ಯಾವುದೇ ರೀತಿ ಜನರಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಗೊಳಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ಆಗ ಗ್ರಾಮಸ್ಥರು ಧರಣಿ ಸತ್ಯಾಗ್ರಹ ಹಿಂಪಡೆದರು. ಈ ವೇಳೆ ಕಂದಾಯ ನೀರೀಕ್ಷಕ ಸುರೇಶ ಪಿಎಸ್ಐ ಅಬ್ಬಾಸ್ ಪಿಡಿಒ ಬಸವರಾಜ ಕೀರ್ದಿ ಗ್ರಾಮ ಆಡಳಿತ ಅಧಿಕಾರಿ ಸುಪ್ರೀತಾ ಶ್ವೇತಾ ಪೊಲೀಸ್ ಇಲಾಖೆಯ ಜಂದಿಪೀರ ಮಲ್ಲೇಶ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ರವೀಂದ್ರಗೌಡ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.