ಜನಜಂಗುಳಿ: ಮಸೀದಿ ಬಳಿ ಇರುವ ಕೊಳಾಯಿಯಲ್ಲಿ ಕುಡಿಯುವ ನೀರು ದೊರೆಯುವುದರಿಂದ ಗ್ರಾಮದ ಎಲ್ಲ ಮನೆಗಳ ಜನರು ಅಲ್ಲಿಗೇ ಬರುವುದರಿಂದ ಜನಜಂಗುಳಿ ನೆರೆದಿರುತ್ತದೆ. ಕೋವಿಡ್ ಸೋಂಕು ಹರಡುವುದನ್ನು ತಡೆಯುವುದಕ್ಕೆ ಜನರು ಅಂತರ ಕಾಯ್ದುಕೊಳ್ಳಬೇಕಿದ್ದರೂ ಇಲ್ಲಿ ನೀರಿನ ಸಲುವಾಗಿ ಅದಕ್ಕೆ ಅವಕಾಶವೇ ಇಲ್ಲ, ಮಹಿಳೆಯರು, ಪುರುಷರು, ಮಕ್ಕಳು ಒಂದೇ ಕಡೆ ನೆರೆದಿರುತ್ತಾರೆ ಎಂದು ತಿಳಿಸಲಾಗಿದೆ.