<p><strong>ಹನುಮಸಾಗರ:</strong> ಕಳೆದ ಮೂರು ವರ್ಷಗಳಿಂದ ಬಸವಳಿದು ನಿಂತಿದ್ದ ಕಬ್ಬರಗಿ ಸಮೀಪದ ಕಪ್ಪಲೆಪ್ಪ ಜಲಪಾತಕ್ಕೆ ಈಚೆಗೆ ಬಿದ್ದ ಸ್ವಲ್ಪ ಪ್ರಮಾಣದ ಮಳೆಗೆ ನಾಲ್ಕು ದಿನ ಕೊಂಚ ಜೋರಾಗಿಯೇ ನೀರು ಸುರಿದರೆ ಈಗ ಜಲಪಾತದ ನೀರು ದಾರದ ಆಕಾರಕ್ಕೆ ಬಂದಿದೆ. <br /> <br /> ಆದರೆ ಸುತ್ತಮುತ್ತಲಿನ ಪ್ರವಾಸಿಗರು ಮಾತ್ರ ಇಲ್ಲಿಗೆ ತಂಡೋಪತಂಡವಾಗಿ ಬಂದು ದಾರದ ಆಕಾರದಲ್ಲಿ ಬೀಳುತ್ತಿರುವ ಈ ನೀರಿಗೆ ಮೈಯೊಡ್ಡುವಲ್ಲಿ ಪೈಪೋಟಿ ನಡೆಸುತ್ತಿರುವುದು ಕಂಡು ಬರುತ್ತಿದೆ.<br /> <br /> ನಮಗೆ ಆಸರಕಿ, ಬ್ಯಾಸರಕಿ ಕಳೆದುಕೊಳ್ಳೋಕೆ ನಮ್ಮ ಸುತ್ತಮುತ್ತ ಇರುವುದು ಇದೊಂದೆ ಜಲಪಾತ, ಅದು ದಾರದ್ಹಾಂಗರ ಬೀಳಲಿ ಹನಿ ಹನಿಯಾಗಿಯಾದ್ರೂ ಬೀಳಲಿ ಅದೇ ನಮಗ ಹಿತ ಎಂದು ಹನುಮಸಾಗರದ ಯುವಕ ಪ್ರವೀಣ ಪಾಟೀಲ ಹೇಳುತ್ತಾರೆ.<br /> <br /> ಕಪ್ಪಲೆಪ್ಪ, ಕಪೀಲತೀರ್ಥ, ಕಬ್ಬರಗಿದಿಡಗ ಎಂದೆಲ್ಲ ಕರೆಸಿಕೊಳ್ಳುವ ಈ ಜಲಪಾತ ಬರುಡು ನೆಲದ್ಲ್ಲಲೊಂದು ಚಿಲುಮೆಯಾಗಿದೆ. ಮಳೆಗಾಲದಲ್ಲಿ ಜೀವಕಳೆ ತುಂಬಿಕೊಂಡಿದ್ದರೆ ಉಳಿದ ದಿನಗಳಲ್ಲಿ ಬರುಡಾಗಿ ನಿಂತಿರುತ್ತದೆ. ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ತಮ್ಮ ದಣಿವು ಕಳೆದುಕೊಳ್ಳುವುದಕ್ಕಾಗಿ ವರ್ಷದಲ್ಲಿ ಒಂದು ದಿನ ಈ ಜಲಪಾತಕ್ಕೆ ಬಂದು ಮೈ-ಮನ ಹಗುರ ಮಾಡಿಕೊಂಡು ಹೋಗುತ್ತಾರೆ. ಆದರೆ ಇತ್ತೀಚೆಗೆ ಸರಿಯಾಗಿ ಮಳೆಯೇ ಆಗುತ್ತಿಲ್ಲದ ಕಾರಣವಾಗಿ ಜಲಪಾತಕ್ಕೆ ನೀರೇ ಬರುತ್ತಿಲ್ಲ. ಇದು ಕಪ್ಪಲೆಪ್ಪ ಪ್ರಿಯರಿಗೆ ನೋವು ತಂದಿದೆ. <br /> <br /> ಕಡಿಮೆ ಪ್ರಮಾಣದಲ್ಲಿ ನೀರು ಬೀಳುತ್ತಿದ್ದರೂ ಜಲಪಾತಕ್ಕೆ ಬಂದು ನೀರಿಗೆ ಮೈಯೊಡ್ಡಿ ದಣಿವು ಕಳೆದುಕೊಳ್ಳುವಲ್ಲಿ ಪ್ರವಾಸಿಗರು ಪೈಪೋಟಿ ನಡೆಸುತ್ತಿರುವುದು ಇಲ್ಲಿ ಕಂಡು ಬರುತ್ತಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನುಮಸಾಗರ:</strong> ಕಳೆದ ಮೂರು ವರ್ಷಗಳಿಂದ ಬಸವಳಿದು ನಿಂತಿದ್ದ ಕಬ್ಬರಗಿ ಸಮೀಪದ ಕಪ್ಪಲೆಪ್ಪ ಜಲಪಾತಕ್ಕೆ ಈಚೆಗೆ ಬಿದ್ದ ಸ್ವಲ್ಪ ಪ್ರಮಾಣದ ಮಳೆಗೆ ನಾಲ್ಕು ದಿನ ಕೊಂಚ ಜೋರಾಗಿಯೇ ನೀರು ಸುರಿದರೆ ಈಗ ಜಲಪಾತದ ನೀರು ದಾರದ ಆಕಾರಕ್ಕೆ ಬಂದಿದೆ. <br /> <br /> ಆದರೆ ಸುತ್ತಮುತ್ತಲಿನ ಪ್ರವಾಸಿಗರು ಮಾತ್ರ ಇಲ್ಲಿಗೆ ತಂಡೋಪತಂಡವಾಗಿ ಬಂದು ದಾರದ ಆಕಾರದಲ್ಲಿ ಬೀಳುತ್ತಿರುವ ಈ ನೀರಿಗೆ ಮೈಯೊಡ್ಡುವಲ್ಲಿ ಪೈಪೋಟಿ ನಡೆಸುತ್ತಿರುವುದು ಕಂಡು ಬರುತ್ತಿದೆ.<br /> <br /> ನಮಗೆ ಆಸರಕಿ, ಬ್ಯಾಸರಕಿ ಕಳೆದುಕೊಳ್ಳೋಕೆ ನಮ್ಮ ಸುತ್ತಮುತ್ತ ಇರುವುದು ಇದೊಂದೆ ಜಲಪಾತ, ಅದು ದಾರದ್ಹಾಂಗರ ಬೀಳಲಿ ಹನಿ ಹನಿಯಾಗಿಯಾದ್ರೂ ಬೀಳಲಿ ಅದೇ ನಮಗ ಹಿತ ಎಂದು ಹನುಮಸಾಗರದ ಯುವಕ ಪ್ರವೀಣ ಪಾಟೀಲ ಹೇಳುತ್ತಾರೆ.<br /> <br /> ಕಪ್ಪಲೆಪ್ಪ, ಕಪೀಲತೀರ್ಥ, ಕಬ್ಬರಗಿದಿಡಗ ಎಂದೆಲ್ಲ ಕರೆಸಿಕೊಳ್ಳುವ ಈ ಜಲಪಾತ ಬರುಡು ನೆಲದ್ಲ್ಲಲೊಂದು ಚಿಲುಮೆಯಾಗಿದೆ. ಮಳೆಗಾಲದಲ್ಲಿ ಜೀವಕಳೆ ತುಂಬಿಕೊಂಡಿದ್ದರೆ ಉಳಿದ ದಿನಗಳಲ್ಲಿ ಬರುಡಾಗಿ ನಿಂತಿರುತ್ತದೆ. ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ತಮ್ಮ ದಣಿವು ಕಳೆದುಕೊಳ್ಳುವುದಕ್ಕಾಗಿ ವರ್ಷದಲ್ಲಿ ಒಂದು ದಿನ ಈ ಜಲಪಾತಕ್ಕೆ ಬಂದು ಮೈ-ಮನ ಹಗುರ ಮಾಡಿಕೊಂಡು ಹೋಗುತ್ತಾರೆ. ಆದರೆ ಇತ್ತೀಚೆಗೆ ಸರಿಯಾಗಿ ಮಳೆಯೇ ಆಗುತ್ತಿಲ್ಲದ ಕಾರಣವಾಗಿ ಜಲಪಾತಕ್ಕೆ ನೀರೇ ಬರುತ್ತಿಲ್ಲ. ಇದು ಕಪ್ಪಲೆಪ್ಪ ಪ್ರಿಯರಿಗೆ ನೋವು ತಂದಿದೆ. <br /> <br /> ಕಡಿಮೆ ಪ್ರಮಾಣದಲ್ಲಿ ನೀರು ಬೀಳುತ್ತಿದ್ದರೂ ಜಲಪಾತಕ್ಕೆ ಬಂದು ನೀರಿಗೆ ಮೈಯೊಡ್ಡಿ ದಣಿವು ಕಳೆದುಕೊಳ್ಳುವಲ್ಲಿ ಪ್ರವಾಸಿಗರು ಪೈಪೋಟಿ ನಡೆಸುತ್ತಿರುವುದು ಇಲ್ಲಿ ಕಂಡು ಬರುತ್ತಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>