<p><strong>ಗಂಗಾವತಿ: </strong>ಗಂಗಾವತಿ ಜನತೆಯ ಬಹು ದಿನದ ಕನಸಾದ ಗಿಣಿಗೇರಾ- ರಾಯಚೂರು ಮಾರ್ಗದ ರೈಲ್ವೆ ಕಾಮಗಾರಿ ಶೇ70ರಷ್ಟು ಮುಕ್ತಾಯವಾಗಿದ್ದು, ಗುರುವಾರ ಗಿಣಿಗೇರಾದಿಂದ ತಾಲ್ಲೂಕಿನ ಚಿಕ್ಕಬೆಣಕಲ್ ಗ್ರಾಮದವರೆಗೆ ಪರೀಕ್ಷಾರ್ಥ ರೈಲು ಸಂಚಾರ ಕೈಗೊಳ್ಳಲಾಯಿತು.<br /> <br /> ಬೆಳಗ್ಗೆ 11ಕ್ಕೆ ಗಿಣಿಗೇರಾದಿಂದ ಹೊರಟ ಪರೀಕ್ಷಾರ್ಥ ರೈಲ್ವೆ ಎಂಜಿನ್, ಮುಕ್ಕುಂಪಿ ಮಾರ್ಗವಾಗಿ 27 ಕಿ.ಮೀ. ಅಂತರದ ಚಿಕ್ಕಬೆಣಕಲ್ ಗ್ರಾಮಕ್ಕೆ ಒಂದು ಗಂಟೆಯಲ್ಲಿ ತಲುಪಿತು. ಪರೀಕ್ಷಾರ್ಥವಾಗಿದ್ದರಿಂದ ವಾಹನದ ವೇಗದ ಮಿತಿಯನ್ನು ಗಂಟೆಗೆ 30 ಕಿ.ಮೀ. ಮಾತ್ರ ಸೀಮಿತಮಾಡಲಾಗಿತ್ತು.<br /> <br /> ದಕ್ಷಿಣ–ಪಶ್ಚಿಮ ನೈರುತ್ಯ ರೈಲ್ವೆ ವಲಯಕ್ಕೊಳಪಡುವ ಈ ಮಾರ್ಗದಲ್ಲಿ ಗುರುವಾರ ನಡೆದ ಪರೀಕ್ಷಾರ್ಥ ಸಂಚಾರದಲ್ಲಿ ಇಲಾಖೆಯ ಉಪ ಮುಖ್ಯ ಎಂಜಿನಿಯರ್ ವಿಷ್ಣುಭೂಷಣ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಕುಮಾರ ಮೊದಲಾದವರು ಇದ್ದರು.<br /> <br /> ‘ಮೊದಲ ಬಾರಿಗೆ ರೈಲ್ವೆ ಎಂಜಿನ್ ಮುಕ್ಕುಂಪಿ ಗ್ರಾಮ ಸೀಮೆಗೆ ಪ್ರವೇಶ ಪಡೆದ ಕಾರಣ ಗ್ರಾಮಸ್ಥರು ಅಧಿಕಾರಿಗಳಿಗೆ ಹೂವಿನ ಹಾರಹಾಕಿ ಸಂಭ್ರಮ ವ್ಯಕ್ತಪಡಿಸಿದರು. ಯುವಕರು ಹಾಗೂ ಮಕ್ಕಳ ಸಂಭ್ರಮ ಮುಗಿಲ ಮುಟ್ಟಿತ್ತು’ ಎಂದು ಗ್ರಾಮದ ಹನುಮಂತ ಮುಕ್ಕುಂಪಿ ತಿಳಿಸಿದರು.<br /> <br /> ‘ಚಿಕ್ಕಬೆಣಕಲ್ ಗ್ರಾಮದಿಂದ ಗಂಗಾವತಿ ನಗರಕ್ಕೆ ಕೇವಲ 12 ಕಿ.ಮೀ. ಅಂತರವಿದ್ದು, ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಮುಗಿಯುವ ನಿರೀಕ್ಷೆಯಿದೆ. ಆ ಬಳಿಕ 2016ರ ಡಿಸಂಬರ್ ಅಂತ್ಯಕ್ಕೆ ಗಂಗಾವತಿ ಗಿಣಿಗೇರಾ ಮಾರ್ಗದಲ್ಲಿ ರೈಲು ಓಡಿಸುವ ಗುರಿ ಇದೆ ಎಂದು ಅಧಿಕಾರಿಗಳು ’ಪ್ರಜಾವಾಣಿ’ಗೆ ತಿಳಿಸಿದರು.<br /> <br /> ‘ರೈಲ್ವೆ ಕಾಮಗಾರಿಯ ಪ್ರತಿ ಕಿ.ಮೀ.ಗೆ ₹8.80 ಕೋಟಿ ವ್ಯಯಿಸಲಾಗುತ್ತಿದ್ದು, ಈಗಾಗಲೆ ನಗರದಲ್ಲಿ ಬಹುತೇಕ ಭಾಗದಲ್ಲಿ ಕಾಮಗಾರಿಯ ಶೇ 90ರಷ್ಟು ಪೂರ್ಣಗೊಂಡಿದೆ. ವಿದ್ಯಾನಗರದ ಬಳಿ ಸೇತುವೆ ಮತ್ತು ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.<br /> <br /> <strong>***<br /> <em>ಕಾಮಗಾರಿಯ ಗುಣಮಟ್ಟ ಪರೀ ಕ್ಷಾರ್ಥ ಸಂಚಾರ ಯಶಸ್ವಿಯಾಗಿದೆ. ಡಿಸೆಂಬರ್ ಅಂತ್ಯಕ್ಕೆ ಗಂಗಾವತಿಯಿಂದ ಗಿಣಿಗೇರಾ ಮಾರ್ಗವಾಗಿ ಕೊಪ್ಪಳಕ್ಕೆ ರೈಲು ಓಡಿಸಲಾಗುವುದು.</em><br /> -ಶಿವಕುಮಾರ,</strong> ಕಾರ್ಯ ನಿರ್ವಾಹಕ ಎಂಜಿನಿಯರ್ ನೈರುತ್ಯ ರೈಲ್ವೆ ವಲಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ಗಂಗಾವತಿ ಜನತೆಯ ಬಹು ದಿನದ ಕನಸಾದ ಗಿಣಿಗೇರಾ- ರಾಯಚೂರು ಮಾರ್ಗದ ರೈಲ್ವೆ ಕಾಮಗಾರಿ ಶೇ70ರಷ್ಟು ಮುಕ್ತಾಯವಾಗಿದ್ದು, ಗುರುವಾರ ಗಿಣಿಗೇರಾದಿಂದ ತಾಲ್ಲೂಕಿನ ಚಿಕ್ಕಬೆಣಕಲ್ ಗ್ರಾಮದವರೆಗೆ ಪರೀಕ್ಷಾರ್ಥ ರೈಲು ಸಂಚಾರ ಕೈಗೊಳ್ಳಲಾಯಿತು.<br /> <br /> ಬೆಳಗ್ಗೆ 11ಕ್ಕೆ ಗಿಣಿಗೇರಾದಿಂದ ಹೊರಟ ಪರೀಕ್ಷಾರ್ಥ ರೈಲ್ವೆ ಎಂಜಿನ್, ಮುಕ್ಕುಂಪಿ ಮಾರ್ಗವಾಗಿ 27 ಕಿ.ಮೀ. ಅಂತರದ ಚಿಕ್ಕಬೆಣಕಲ್ ಗ್ರಾಮಕ್ಕೆ ಒಂದು ಗಂಟೆಯಲ್ಲಿ ತಲುಪಿತು. ಪರೀಕ್ಷಾರ್ಥವಾಗಿದ್ದರಿಂದ ವಾಹನದ ವೇಗದ ಮಿತಿಯನ್ನು ಗಂಟೆಗೆ 30 ಕಿ.ಮೀ. ಮಾತ್ರ ಸೀಮಿತಮಾಡಲಾಗಿತ್ತು.<br /> <br /> ದಕ್ಷಿಣ–ಪಶ್ಚಿಮ ನೈರುತ್ಯ ರೈಲ್ವೆ ವಲಯಕ್ಕೊಳಪಡುವ ಈ ಮಾರ್ಗದಲ್ಲಿ ಗುರುವಾರ ನಡೆದ ಪರೀಕ್ಷಾರ್ಥ ಸಂಚಾರದಲ್ಲಿ ಇಲಾಖೆಯ ಉಪ ಮುಖ್ಯ ಎಂಜಿನಿಯರ್ ವಿಷ್ಣುಭೂಷಣ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಕುಮಾರ ಮೊದಲಾದವರು ಇದ್ದರು.<br /> <br /> ‘ಮೊದಲ ಬಾರಿಗೆ ರೈಲ್ವೆ ಎಂಜಿನ್ ಮುಕ್ಕುಂಪಿ ಗ್ರಾಮ ಸೀಮೆಗೆ ಪ್ರವೇಶ ಪಡೆದ ಕಾರಣ ಗ್ರಾಮಸ್ಥರು ಅಧಿಕಾರಿಗಳಿಗೆ ಹೂವಿನ ಹಾರಹಾಕಿ ಸಂಭ್ರಮ ವ್ಯಕ್ತಪಡಿಸಿದರು. ಯುವಕರು ಹಾಗೂ ಮಕ್ಕಳ ಸಂಭ್ರಮ ಮುಗಿಲ ಮುಟ್ಟಿತ್ತು’ ಎಂದು ಗ್ರಾಮದ ಹನುಮಂತ ಮುಕ್ಕುಂಪಿ ತಿಳಿಸಿದರು.<br /> <br /> ‘ಚಿಕ್ಕಬೆಣಕಲ್ ಗ್ರಾಮದಿಂದ ಗಂಗಾವತಿ ನಗರಕ್ಕೆ ಕೇವಲ 12 ಕಿ.ಮೀ. ಅಂತರವಿದ್ದು, ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಮುಗಿಯುವ ನಿರೀಕ್ಷೆಯಿದೆ. ಆ ಬಳಿಕ 2016ರ ಡಿಸಂಬರ್ ಅಂತ್ಯಕ್ಕೆ ಗಂಗಾವತಿ ಗಿಣಿಗೇರಾ ಮಾರ್ಗದಲ್ಲಿ ರೈಲು ಓಡಿಸುವ ಗುರಿ ಇದೆ ಎಂದು ಅಧಿಕಾರಿಗಳು ’ಪ್ರಜಾವಾಣಿ’ಗೆ ತಿಳಿಸಿದರು.<br /> <br /> ‘ರೈಲ್ವೆ ಕಾಮಗಾರಿಯ ಪ್ರತಿ ಕಿ.ಮೀ.ಗೆ ₹8.80 ಕೋಟಿ ವ್ಯಯಿಸಲಾಗುತ್ತಿದ್ದು, ಈಗಾಗಲೆ ನಗರದಲ್ಲಿ ಬಹುತೇಕ ಭಾಗದಲ್ಲಿ ಕಾಮಗಾರಿಯ ಶೇ 90ರಷ್ಟು ಪೂರ್ಣಗೊಂಡಿದೆ. ವಿದ್ಯಾನಗರದ ಬಳಿ ಸೇತುವೆ ಮತ್ತು ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.<br /> <br /> <strong>***<br /> <em>ಕಾಮಗಾರಿಯ ಗುಣಮಟ್ಟ ಪರೀ ಕ್ಷಾರ್ಥ ಸಂಚಾರ ಯಶಸ್ವಿಯಾಗಿದೆ. ಡಿಸೆಂಬರ್ ಅಂತ್ಯಕ್ಕೆ ಗಂಗಾವತಿಯಿಂದ ಗಿಣಿಗೇರಾ ಮಾರ್ಗವಾಗಿ ಕೊಪ್ಪಳಕ್ಕೆ ರೈಲು ಓಡಿಸಲಾಗುವುದು.</em><br /> -ಶಿವಕುಮಾರ,</strong> ಕಾರ್ಯ ನಿರ್ವಾಹಕ ಎಂಜಿನಿಯರ್ ನೈರುತ್ಯ ರೈಲ್ವೆ ವಲಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>