<p><strong>ಮಂಡ್ಯ</strong>: ಅನಾಥ ಮಕ್ಕಳಿಗೆ ಮೂಲ ಸೌಲಭ್ಯದ ಜೊತೆಗೆ ಶಿಕ್ಷಣ ಮುಖ್ಯವಾಗಿ ಸಿಗುವಂತಾಗಬೇಕಿದೆ ಎಂದು ಅಂತರ ರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.</p>.<p>ನಗರದ ಕ್ಯಾತುಂಗೆರೆ ವಿಕಸನ ಜೋಗುಳ, ದತ್ತು ಕೇಂದ್ರದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ ವತಿಯಿಂದ ಬುಧವಾರ ನಡೆದ ಅನಾಥ ಮಕ್ಕಳಿಗೆ ಉಡುಪು, ಬೆಡ್ಶೀಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಅಂಗವಿಕಲ ಮಕ್ಕಳಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಅವರಿಗೂ ಪ್ರೋತ್ಸಹ ಹಾಗೂ ಸಹಕಾರ ಸಿಗಬೇಕು. ಆ ನಿಟ್ಟಿನಲ್ಲಿ ನಮ್ಮ ಅಲಯನ್ಸ್ ಸಂಸ್ಥೆಗಳು ಮುಖ್ಯಧ್ಯೇಯವೆಂದು ಪರಿಗಣಿಸಿ ಸೇವೆಯಲ್ಲಿ ನಿರತವಾಗಿವೆ. ಇಲ್ಲಿ ಚಿಕಿತ್ಸೆಯ ನೆರವು ಮತ್ತು ಮಾರಕ ರೋಗಗಳಾದ ಕ್ಯಾನ್ಸರ್ ತಡೆಗಟ್ಟಲು ಅಭಿಯಾನದ ಶಿಬಿರಗಳು ಹೆಚ್ಚು ನಡೆಯಬೇಕು ಎಂದು ಸಲಹೆ ನೀಡಿದರು.</p>.<p>ಅನಾಥ ಎನ್ನವು ಭಾವನೆ ಈ ಮಕ್ಕಳಿಗೆ ಕಾಣಬಾರದು, ಅಲ್ಲದೇ ಅಂಗವಿಕಲತೆ ಎನ್ನುವುದು ಶಾಪವಲ್ಲ ಎನ್ನುವ ಧೈರ್ಯ ತುಂಬಬೇಕು. ಆ ಮೂಲಕ ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ನೆರವಾಗಬೇಕು. ಸಮಾಜದಲ್ಲಿ ವೃದ್ಧರು ಸೇರಿದಂತೆ ಆಸರೆ ಇಲ್ಲದವರಿಗೆ ಸಹಕರಿಸುವ ಮನಸುಗಳು ಹೆಚ್ಚಬೇಕು ಎಂದು ಮನವಿ ಮಾಡಿದರು.</p>.<p>ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರಗುರು ಮಾತನಾಡಿ, ಶಕ್ತಿ ಇರದವರಿಗೆ ಶಕ್ತಿ ತುಂಬುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕು. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಶ್ರೀಮಂತರು, ಸೇವಾಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.</p>.<p>ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಕುಮಾರ್, ಅಲಯನ್ಸ್ ಸಂಸ್ಥೆ 2ನೇ ಗೌವರ್ನರ್ ಚಂದ್ರಶೇಖರ್, ಕೃಷಿಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ಮೋಹನ್ ಕುಮಾರ್, ಮುಖಂಡರಾದ ದರಸಗುಪ್ಪೆ ಧನಂಜಯ, ಪ್ರತಿಭಾಂಜಲಿ ಡೇವಿಡ್ ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ಅನಾಥ ಮಕ್ಕಳಿಗೆ ಮೂಲ ಸೌಲಭ್ಯದ ಜೊತೆಗೆ ಶಿಕ್ಷಣ ಮುಖ್ಯವಾಗಿ ಸಿಗುವಂತಾಗಬೇಕಿದೆ ಎಂದು ಅಂತರ ರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.</p>.<p>ನಗರದ ಕ್ಯಾತುಂಗೆರೆ ವಿಕಸನ ಜೋಗುಳ, ದತ್ತು ಕೇಂದ್ರದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ ವತಿಯಿಂದ ಬುಧವಾರ ನಡೆದ ಅನಾಥ ಮಕ್ಕಳಿಗೆ ಉಡುಪು, ಬೆಡ್ಶೀಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಅಂಗವಿಕಲ ಮಕ್ಕಳಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಅವರಿಗೂ ಪ್ರೋತ್ಸಹ ಹಾಗೂ ಸಹಕಾರ ಸಿಗಬೇಕು. ಆ ನಿಟ್ಟಿನಲ್ಲಿ ನಮ್ಮ ಅಲಯನ್ಸ್ ಸಂಸ್ಥೆಗಳು ಮುಖ್ಯಧ್ಯೇಯವೆಂದು ಪರಿಗಣಿಸಿ ಸೇವೆಯಲ್ಲಿ ನಿರತವಾಗಿವೆ. ಇಲ್ಲಿ ಚಿಕಿತ್ಸೆಯ ನೆರವು ಮತ್ತು ಮಾರಕ ರೋಗಗಳಾದ ಕ್ಯಾನ್ಸರ್ ತಡೆಗಟ್ಟಲು ಅಭಿಯಾನದ ಶಿಬಿರಗಳು ಹೆಚ್ಚು ನಡೆಯಬೇಕು ಎಂದು ಸಲಹೆ ನೀಡಿದರು.</p>.<p>ಅನಾಥ ಎನ್ನವು ಭಾವನೆ ಈ ಮಕ್ಕಳಿಗೆ ಕಾಣಬಾರದು, ಅಲ್ಲದೇ ಅಂಗವಿಕಲತೆ ಎನ್ನುವುದು ಶಾಪವಲ್ಲ ಎನ್ನುವ ಧೈರ್ಯ ತುಂಬಬೇಕು. ಆ ಮೂಲಕ ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ನೆರವಾಗಬೇಕು. ಸಮಾಜದಲ್ಲಿ ವೃದ್ಧರು ಸೇರಿದಂತೆ ಆಸರೆ ಇಲ್ಲದವರಿಗೆ ಸಹಕರಿಸುವ ಮನಸುಗಳು ಹೆಚ್ಚಬೇಕು ಎಂದು ಮನವಿ ಮಾಡಿದರು.</p>.<p>ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರಗುರು ಮಾತನಾಡಿ, ಶಕ್ತಿ ಇರದವರಿಗೆ ಶಕ್ತಿ ತುಂಬುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕು. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಶ್ರೀಮಂತರು, ಸೇವಾಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.</p>.<p>ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಕುಮಾರ್, ಅಲಯನ್ಸ್ ಸಂಸ್ಥೆ 2ನೇ ಗೌವರ್ನರ್ ಚಂದ್ರಶೇಖರ್, ಕೃಷಿಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ಮೋಹನ್ ಕುಮಾರ್, ಮುಖಂಡರಾದ ದರಸಗುಪ್ಪೆ ಧನಂಜಯ, ಪ್ರತಿಭಾಂಜಲಿ ಡೇವಿಡ್ ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>