<p><strong>ಪಾಂಡವಪುರ: </strong>ಸಹಕಾರಿ ಕ್ಷೇತ್ರದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್ಎಸ್ಕೆ) ಯನ್ನು ಸರ್ಕಾರ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಅವರ ಮಾಲೀಕತ್ವದ ನಿರಾಣಿ ಶುಗರ್ಸ್ಗೆ ವಹಿಸಿದೆ.</p>.<p>ಪಿಎಸ್ಎಸ್ಕೆಯನ್ನು ಖಾಸಗೀಕರಣ ಮಾಡುವ ಕುರಿತು ಈಚೆಗೆ ಟೆಂಡರ್ ಆಹ್ವಾನಿಸಲಾಗಿತ್ತು. ಜೂನ್ 5ರಂದು ನಡೆದ ಬಿಡ್ನಲ್ಲಿ ನಿರಾಣಿ ಶುಗರ್ಸ್ಗೆ ಕಾರ್ಖಾನೆಯ ಮಾಲೀಕತ್ವ ದೊರೆತಿದೆ.</p>.<p>ಸಕ್ಕರೆ ಉತ್ಪಾದನೆಯಲ್ಲಿ ರಾಜ್ಯದಲ್ಲಿಯೇ ಹೆಸರು ಮಾಡಿದ್ದ ಪಿಎಸ್ಎಸ್ಕೆಯನ್ನು 2006ರಲ್ಲಿ ಕೊಠಾರಿ ಶುಗರ್ಸ್ಗೆ ವಹಿಸಲಾಗಿತ್ತು. ಒಂದೆರಡು ವರ್ಷದ ನಂತರ ಸ್ಥಗಿತಗೊಂಡಿತು. 2010ರಲ್ಲಿ ಕಾರ್ಖಾನೆಯನ್ನು ಮಂಡ್ಯದ ಮೈಷುಗರ್ ಕಂಪನಿಗೆ ವಹಿಸಲಾಗಿತ್ತು. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಖಾನೆಯ ಪುನಶ್ವೇತನಕ್ಕೆ ₹ 50 ಕೋಟಿ ಹಣ ನೀಡಿದ್ದರು. ಮೂರು ವರ್ಷ ನಡೆದ ಕಾರ್ಖಾನೆ ಮತ್ತೆ ಸ್ಥಗಿತೊಂಡಿತು.</p>.<p>2014ರಲ್ಲಿ ಪಿಎಸ್ಎಸ್ಕೆ ಮತ್ತೆ ಸಹಕಾರಿ ಆಡಳಿತ ಮಂಡಳಿಗೆ ಒಳಪಟ್ಟಿತು. ಮೂರು ವರ್ಷ ನಡೆದ ಕಾರ್ಖಾನೆ ಸಾಲದ ಸುಳಿಯಲ್ಲಿ ಸಿಲುಕಿ ಬಂದ್ ಆಯಿತು. 2019ರ ಜನವರಿಯಲ್ಲಿ ನಡೆದ ಷೇರುದಾರರ ಸಭೆಯಲ್ಲಿ ಕಾರ್ಖಾನೆಯನ್ನು ಖಾಸಗಿ ಮಾಲೀಕತ್ವಕ್ಕೆ ನೀಡಲು ನಿರ್ಧಾರ ಕೈಗೊಳ್ಳಲಾಗಿತ್ತು.</p>.<p>‘ನಿರಾಣಿ ಶುಗರ್ಸ್ ಆಡಳಿತ ಮಂಡಳಿ ಅತೀ ಹೆಚ್ಚು ಹಣಕ್ಕೆ ಬಿಡ್ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರ ಅವರಿಗೆ ಮಾಲೀಕತ್ವ ನೀಡಿದೆ. ಇದೇ ಹಂಗಾಮಿನಲ್ಲಿ ಕಾರ್ಖಾನೆ ಆರಂಭಿಸಲು ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಂಡವಪುರ: </strong>ಸಹಕಾರಿ ಕ್ಷೇತ್ರದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್ಎಸ್ಕೆ) ಯನ್ನು ಸರ್ಕಾರ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಅವರ ಮಾಲೀಕತ್ವದ ನಿರಾಣಿ ಶುಗರ್ಸ್ಗೆ ವಹಿಸಿದೆ.</p>.<p>ಪಿಎಸ್ಎಸ್ಕೆಯನ್ನು ಖಾಸಗೀಕರಣ ಮಾಡುವ ಕುರಿತು ಈಚೆಗೆ ಟೆಂಡರ್ ಆಹ್ವಾನಿಸಲಾಗಿತ್ತು. ಜೂನ್ 5ರಂದು ನಡೆದ ಬಿಡ್ನಲ್ಲಿ ನಿರಾಣಿ ಶುಗರ್ಸ್ಗೆ ಕಾರ್ಖಾನೆಯ ಮಾಲೀಕತ್ವ ದೊರೆತಿದೆ.</p>.<p>ಸಕ್ಕರೆ ಉತ್ಪಾದನೆಯಲ್ಲಿ ರಾಜ್ಯದಲ್ಲಿಯೇ ಹೆಸರು ಮಾಡಿದ್ದ ಪಿಎಸ್ಎಸ್ಕೆಯನ್ನು 2006ರಲ್ಲಿ ಕೊಠಾರಿ ಶುಗರ್ಸ್ಗೆ ವಹಿಸಲಾಗಿತ್ತು. ಒಂದೆರಡು ವರ್ಷದ ನಂತರ ಸ್ಥಗಿತಗೊಂಡಿತು. 2010ರಲ್ಲಿ ಕಾರ್ಖಾನೆಯನ್ನು ಮಂಡ್ಯದ ಮೈಷುಗರ್ ಕಂಪನಿಗೆ ವಹಿಸಲಾಗಿತ್ತು. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಖಾನೆಯ ಪುನಶ್ವೇತನಕ್ಕೆ ₹ 50 ಕೋಟಿ ಹಣ ನೀಡಿದ್ದರು. ಮೂರು ವರ್ಷ ನಡೆದ ಕಾರ್ಖಾನೆ ಮತ್ತೆ ಸ್ಥಗಿತೊಂಡಿತು.</p>.<p>2014ರಲ್ಲಿ ಪಿಎಸ್ಎಸ್ಕೆ ಮತ್ತೆ ಸಹಕಾರಿ ಆಡಳಿತ ಮಂಡಳಿಗೆ ಒಳಪಟ್ಟಿತು. ಮೂರು ವರ್ಷ ನಡೆದ ಕಾರ್ಖಾನೆ ಸಾಲದ ಸುಳಿಯಲ್ಲಿ ಸಿಲುಕಿ ಬಂದ್ ಆಯಿತು. 2019ರ ಜನವರಿಯಲ್ಲಿ ನಡೆದ ಷೇರುದಾರರ ಸಭೆಯಲ್ಲಿ ಕಾರ್ಖಾನೆಯನ್ನು ಖಾಸಗಿ ಮಾಲೀಕತ್ವಕ್ಕೆ ನೀಡಲು ನಿರ್ಧಾರ ಕೈಗೊಳ್ಳಲಾಗಿತ್ತು.</p>.<p>‘ನಿರಾಣಿ ಶುಗರ್ಸ್ ಆಡಳಿತ ಮಂಡಳಿ ಅತೀ ಹೆಚ್ಚು ಹಣಕ್ಕೆ ಬಿಡ್ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರ ಅವರಿಗೆ ಮಾಲೀಕತ್ವ ನೀಡಿದೆ. ಇದೇ ಹಂಗಾಮಿನಲ್ಲಿ ಕಾರ್ಖಾನೆ ಆರಂಭಿಸಲು ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>