‘ಹೊಟ್ಟೆಕಿಚ್ಚಿನಿಂದ ತೋಟಕ್ಕೆ ಬೆಂಕಿ ಹಾಕಿದ್ದು, ಸುಮಾರು 18 ವರ್ಷದ 48 ತೆಂಗಿನಮರಗಳು ಬೆಂಕಿಗೆ ಸುಟ್ಟು ಹೋಗಿವೆ. ಅಲ್ಲದೇ ಈ ತೋಟವು ಜೀವನಾಧಾರವಾಗಿದ್ದು, ಪ್ರತಿ ವರ್ಷವೂ ₹3 ಲಕ್ಷ ಆದಾಯ ಬರುತ್ತಿತ್ತು. ಕಳೆದ ಎರಡು ಮೂರು ತಿಂಗಳ ಹಿಂದೆ ಕೊಳವೆ ಬಾವಿಯೂ ಬತ್ತಿಹೋಗಿದ್ದು, ತೋಟಕ್ಕೆ ನೀರು ಹಾಯಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಸ್ವಲ್ಪ ಕಳೆಯು ಒಣಗಿದ್ದು, ಬೆಂಕಿ ಆವರಿಸಿ ತೋಟಕ್ಕೆ ಹಾನಿಯಾಗಿದ್ದು, ದಿಕ್ಕು ತೋಚದಂತಾಗಿದೆ’ ಎಂದು ತೋಟದ ಮಾಲೀಕ ಡಿ.ಆರ್.ಮಲ್ಲಿಕಾರ್ಜುನ ಅವರು ಕಣ್ಣೀರಿಟ್ಟರು.