ಹೋರಾಟಗಾರರೂ ಆಗಿದ್ದ ಜಿ.ಮಾದೇಗೌಡರು ಶಾಸಕರಾಗಿ, ಸಂಸದರಾಗಿ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಮೃತಪಟ್ಟ ನಂತರ ಶಿವರಾಮೇಗೌಡರು ಅವರ ವಿರುದ್ಧ ಕೆಟ್ಟ ಭಾಷೆ ಬಳಸಿ ಅಗೌರವ ತೋರಿಸಿದ್ದಾರೆ. ಒಮ್ಮೆ ಅವರನ್ನು ಕೊಲೆ ಮಾಡಲು ಯತ್ನಿಸಿದ್ದಾಗಿಯೂ, 20 ವರ್ಷದ ಹಿಂದೆಯೇ ಮಾದೇಗೌಡರು ಸಾಯಬೇಕಾಗಿತ್ತು ಎಂಬುದಾಗಿಯೂ ಮಾತನಾಡಿದ್ದಾರೆ. ಈ ಕುರಿತ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.