‘ನೀಲನಕೊಪ್ಪಲು ಸರ್ಕಾರಿ ಶಾಲೆಯ ಕಟ್ಟಡಕ್ಕೆ ಇತ್ತೀಚೆಗೆ ಯಾರೋ ಬಂದು ಬಣ್ಣ ಬಳಿದು ಹೋದರು. ಅವರ ಹೆಸರು ಗೊತ್ತಿಲ್ಲ. ಯಾವ ಬಾಬ್ತಿನ ಅನುದಾನದಲ್ಲಿ ಬಣ್ಣ ಬಳಿದಿದ್ದಾರೆ ಎಂಬುದೂ ತಿಳಿದಿಲ್ಲ. ನಮಗೆ ಅವರು ಹೇಳಲೂ ಇಲ್ಲ; ನಾವು ಕೇಳಲೂ ಇಲ್ಲ. ಗೋಡೆ, ಕಿಟಕಿ, ಬಾಗಿಲುಗಳು ಶಿಥಿಲವಾಗಿದ್ದು ದುರಸ್ತಿ ಮಾಡಿಸುವ ಬದಲು ಬಣ್ಣ ಬಳಿದು ಹೋಗಿದ್ದಾರೆ. ಈ ಬಗ್ಗೆ ಊರಿನವರನ್ನೇ ಕೇಳಿ’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಯಾಸ್ಮಿನ್ ತಾಜ್ ಹೇಳುತ್ತಾರೆ.