ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ದೇಶದ ಎಲ್ಲಾ ವರ್ಗದ ಜನರು ₹ 1, ₹ 10ರಿಂದ ಲಕ್ಷಾಂತರ, ಕೋಟ್ಯಂತರ ರೂಪಾಯಿ ಕೊಟ್ಟಿದ್ದಾರೆ. ದೇವಾಲಯ ನಿರ್ಮಾಣವಾಗುತ್ತದೆ ಎಂಬ ಉದ್ದೇಶದಿಂದ ದೇಣಿಗೆ ಕೊಟ್ಟಿದ್ದಾರೆ. ರಾಮಜನ್ಮ ಭೂಮಿಯಲ್ಲಿ ವಹಿವಾಟು ನಡೆಸಲು ಜನರು ಹಣ ಕೊಟ್ಟಿಲ್ಲ. ಅವ್ಯಹಾರದ ಮೂಲಕ ಜನರ ನಂಬಿಕೆ, ದೇವರಿಗೆ ಅವಮಾನ ಮಾಡಲಾಗಿದೆ’ ಎಂದು ಆರೋಪಿಸಿದರು.