ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರತಿ ಉಕ್ಕಡದಲ್ಲಿ ಡಿಕೆಶಿ ಪೂಜೆ

Last Updated 2 ಮಾರ್ಚ್ 2020, 12:36 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಆರತಿ ಉಕ್ಕಡಕ್ಕೆ ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ಭಾನುವಾರ ಭೇಟಿ ನೀಡಿ ಅಹಲ್ಯಾದೇವಿಗೆ (ಮಾರಮ್ಮ) ವಿಶೇಷ ಪೂಜೆ ಸಲ್ಲಿಸಿದರು.

ದೋಷ ಪರಿಹಾರಕ್ಕಾಗಿ ಪಕ್ಕದ ಕಲ್ಯಾಣಿಯಲ್ಲಿ ತಡೆ ಮತ್ತು ಕಟ್ಟೆ ಒಡೆಸಿದರು. ಸುಮಾರು 15 ನಿಮಿಷ ದೇವಾಲಯದಲ್ಲಿದ್ದ ಅವರು, ಪೂಜಾ ವಿಧಿ, ವಿಧಾನಗಳನ್ನು ಕೇಳಿ ತಿಳಿದುಕೊಂಡರು.

ಅಹಲ್ಯಾದೇವಿ ಮಾರಮ್ಮ ದೇವಾಲಯ ಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಎಂ.ಚಂದ್ರು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಕಾಂಗ್ರೆಸ್‌ ಮುಖಂಡ ಡಾ.ರವೀಂದ್ರ, ಶ್ಯಾದನಹಳ್ಳಿ ಬಾಬು, ಹರಳಹಳ್ಳಿ ದಯಾನಂದ್‌ ಜತೆಗಿದ್ದರು.

’ಮೈಸೂರಿಗೆ ಬಂದಿದ್ದ ಶಿವಕುಮಾರ್‌ ಆರತಿ ಉಕ್ಕಡದ ಅಹಲ್ಯಾದೇವಿ ಮಹಿಮೆ ತಿಳಿದು ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ’ ಎಂದು ಅವರ ಜತೆಗಿದ್ದವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT