ಹೆದ್ದಾರಿ ಕಾಮಗಾರಿ ನಡೆಸಲಾಗು ತ್ತಿದೆ. ಜನರಿಗೆ ಯಾವುದೇ ಸೂಚನೆ ನೀಡದೇ ಚರಂಡಿ ಮತ್ತು ಒಳಚರಂಡಿಯನ್ನು ಮುಚ್ಚಲಾಗಿದೆ. ಒಂದು ವಾರದಿಂದ ಕೊಳಚೆ ನೀರು ಸಂಗ್ರಹಗೊಳ್ಳುತ್ತಿದೆ. ನೀರು ದುರ್ವಾಸನೆ ಬೀರುತ್ತಿದ್ದು, ಜನರು ಮೂಗು ಮುಚ್ಚಿ ಕೊಂಡು ಓಡಾಗುತ್ತಿದ್ದಾರೆ. ಅಲ್ಲದೆ, ಸ್ಥಳೀಯರು ರೋಗಗಳ ಭೀತಿಯಲ್ಲಿ ಬದುಕುಂತಾಗಿದೆ. ಈ ಕೊಳಚೆ ನೀರು ಕೆಲ ಅಂಗಡಿಗಳಿಗೆ ನುಗ್ಗಿದೆ. ಇದರಿಂದ ಅಲ್ಲಿ ಕೆಲಸ ಮಾಡುವ ಕೆಲಸಗಾರರು ಪರದಾಡುವಂತಾಗಿದೆ.