ಡಾ.ಭಾನುಪ್ರಕಾಶ್ ಶರ್ಮಾ ಮಾತನಾಡಿ, ‘ಕೋವಿಡ್ ಕಾರಣದಿಂದ ರಾಜ್ಯ, ಹೊರ ರಾಜ್ಯದ ಸಾಕಷ್ಟು ಜನರು ಈ ಬಾರಿ ಇಲ್ಲಿಗೆ ಬರಲು ಆಗಿಲ್ಲ. ತಮ್ಮ ಪಿತೃಗಳಿಗೆ ಶ್ರಾದ್ಧ ನೆರವೇರಿಸುವಂತೆ ಫೋನ್ ಮೂಲಕ ಸಂಪರ್ಕಿಸಿದ್ದರು. ಅವರ ಅಪೇಕ್ಷೆಯನ್ನು ಈಡೇರಿಸಿದ್ದೇವೆ. ಅನಿವಾಸಿ ಭಾರತೀಯರು ಕೂಡ ತಮ್ಮ ಪಿತೃಗಳ ಹೆಸರಿನಲ್ಲಿ, ಆನ್ಲೈನ್ನಲ್ಲೇ ಶ್ರಾದ್ಧ ಕಾರ್ಯ ಪೂರೈಸಿದ್ದಾರೆ. ಐದಾರು ದಿನಗಳಿಂದ ಆನ್ಲೈನ್ನಲ್ಲಿ ಪಿಂಡ ಪ್ರದಾನ, ತಿಲ ತರ್ಪಣ ಇತರ ಪಿತೃಪಕ್ಷದ ಸಾಂಪ್ರದಾಯಿಕ ಪೂಜೆಗಳು ನಡೆದಿವೆ’ ಎಂದು ತಿಳಿಸಿದರು.