ಚಲನಚಿತ್ರ ತಂಡ ಕಲ್ಯಾಣಿಯ ಸುತ್ತ ರಂಗೋಲಿ ಬಿಡಿಸಿ, ಸಾಲು ಮಂಟಪಗಳಿಗೆ ಹೂವಿನ ಅಲಂಕಾರ ಮಾಡಿತ್ತು. ಅಲ್ಲಿ ಹಾಕಿದ್ದ ರಂಗೋಲಿಯ ಬಣ್ಣಗಳು ಕಲ್ಯಾಣಿಗೆ ಸೇರುವ ಅಪಾಯವಿತ್ತು. ದೇವಾಲಯದ ಆಡಳಿತ ರಾಜಮುಡಿ ಉತ್ಸವ ಮುಕ್ತಾಯವಾಗಿ ಕಲ್ಯಾಣಿಯಿಂದ ಸ್ವಾಮಿಯ ಉತ್ಸವ ದೇವಾಲಯಕ್ಕೆ ಸೇರುವವರೆಗೆ ಚಿತ್ರೀಕರಣ ತಂಡಕ್ಕೆ ನಿರ್ಬಂಧ ವಿಧಿಸಬೇಕಿತ್ತು ಎಂದು ಭಕ್ತರು ಬೇಸರ ಪ್ರತಿಕ್ರಿಯಿಸಿದರು.