‘ತಾಲ್ಲೂಕಿನ ಬಲಮುರಿ, ದೊಡ್ಡಪಾಳ್ಯ, ಚಿಕ್ಕಪಾಳ್ಯ, ಮಹದೇವಪುರ ಇತರೆಡೆ ನದಿ ತೀರದಲ್ಲಿ ಇರುವ ಜನರ ಬಗ್ಗೆ ನಿಗಾ ವಹಿಸಲಾಗಿದೆ. ಸ್ಥಳೀಯ ಸರ್ಕಾರಿ ಶಾಲೆಗಳಲ್ಲಿ ಪರಿಹಾರ ಕೇಂದ್ರ ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಬಿಸಿಯೂಟದ ಅಡುಗೆಯವರನ್ನು ಸನ್ನದ್ಧರಾಗಿ ಇರಿಸುವಂತೆ ಬಿಇಒಗೆ ತಿಳಿಸಲಾಗಿದೆ’ ಎಂದು ತಹಶೀಲ್ದಾರ್ ಎಂ.ವಿ. ರೂಪಾ ಹೇಳಿದರು.