<p><strong>ಕೊಪ್ಪ:</strong> ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ಹಳ್ಳಿಗಳಲ್ಲಿ ರಂಗೇರುತ್ತಿದೆ. ಪದವೀಧರರು ಮತ್ತು ಯುವಕರು ಹೊಸ ಆಶಯದೊಂದಿಗೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ.</p>.<p>ಕೊಪ್ಪ ಹೋಬಳಿಯ 12 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾ.ಪಂನಲ್ಲಿ 2– 3 ಮಂದಿ ಪದವಿ ಮತ್ತು ಸ್ನಾತಕೋತ್ತರ ಪದವೀಧರರು ಕಣದಲ್ಲಿದ್ದಾರೆ. ಹೊಸ ಭರವಸೆ ಈಡೇರಿಸುವ ಮತ್ತು ಬದಲಾವಣೆ ತರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಗ್ರಾ.ಪಂ.ಗಳಿಗೆ ವಿದ್ಯಾವಂತರು ಆಯ್ಕೆಯಾಗಿ ಹೋದರೆ ವ್ಯವಸ್ಥೆ ಸರಿಹೋಗಬಹುದು ಎಂಬ ಭರವಸೆ ಹಳ್ಳಿಗರಲ್ಲಿದೆ.</p>.<p>ನಿಲುವಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದಿಗೆರೆ ಗ್ರಾಮದ ಎಂ.ಎಲ್.ಸುನೀಲ್ ಕುಮಾರ್ ಅವರು ಬಿಇ ಪದವೀಧರ. ಮನೆಯಲ್ಲಿದ್ದುಕೊಂಡು ಖಾಸಗಿ ಉದ್ಯೋಗ ಮಾಡಿಕೊಂಡಿದ್ದಾರೆ. ತಗ್ಗಹಳ್ಳಿ, ಮರಳಿಗ ಮತ್ತು ಬೆಸಗರಹಳ್ಳಿ ಮೊದಲಾದ ಗ್ರಾಮಗಳ ಚುನಾವಣಾ ಕಣದಲ್ಲಿ ಸ್ನಾತಕೋತ್ತರ ಪದವೀಧರರು, ಉದ್ಯೋಗ ಅರಸುತ್ತಿರುವವರೂ ಇದ್ದಾರೆ. ಈ ಬಾರಿ ಪದವಿ ಪಡೆದಿರುವ ಮಹಿಳಾ ಅಭ್ಯರ್ಥಿಗಳೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಜನ ಸೇವೆ ಮಾಡಬೇಕು, ಗ್ರಾಮಾಭಿವೃದ್ಧಿಗೆ ಶ್ರಮಿಸಬೇಕು ಎಂಬ ಹಂಬಲವೂ ಹಲವರಲ್ಲಿದೆ.</p>.<p>ಯುವ ಸಮುದಾಯದಿಂದ ಗ್ರಾಮಗಳ ಅಭಿವೃದ್ಧಿಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ ಎನ್ನುತ್ತಾರೆ ನಿವೃತ್ತ ಪ್ರಾಂಶುಪಾಲ ಯಧುಶೈಲ ಸಂಪತ್.</p>.<p>ಪದವೀಧರರು ಚುನಾವಣಾ ಕಣದಲ್ಲಿರುವುದು ಉತ್ತಮ ಬೆಳವಣಿಗೆ. ಸರ್ಕಾರದ ಯೋಜನೆಗಳು ಮತ್ತು ಅವುಗಳ ಅನುಷ್ಠಾನಕ್ಕೆ, ಗ್ರಾಮಗಳ ಪ್ರಗತಿಗೆ ಸಾಕಾರವಾಗುತ್ತದೆ. ಆದರೂ ಕಡಿಮೆ ಶಿಕ್ಷಣ ಹೊಂದಿರು ವವರನ್ನೂ ಕಡೆಗಣಿಸುವಂತಿಲ್ಲ ಎನ್ನುತ್ತಾರೆ ತಹಶೀಲ್ದಾರ್ ವಿಜಯ್ ಕುಮಾರ್.</p>.<p>ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ನೇರವಾಗಿ ಜನರಿಗೆ ತಲುಪಿಸುವ ಮತ್ತು ಮದ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ನರೇಗಾ ಯೋಜನೆಯನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಮುದಿಗೆರೆಯಎಂ.ಎಲ್.ಸುನೀಲ್ ಕುಮಾರ್ ಹೇಳಿದರು.</p>.<p>ಲಂಚರಹಿತವಾಗಿ, ಪಾರದರ್ಶ ಕವಾಗಿ ಆಡಳಿತ ನೀಡುವ ಸಲುವಾಗಿ ಮತ್ತು ಜನ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಳ್ಳಲು ರಾಜಕೀಯ ಹಾದಿಯನ್ನು ಹಿಡಿದಿದ್ದೇನೆ ಎನ್ನುವುದು ಬೆಸಗರಹಳ್ಳಿಯ ಅಭಿಲಾಷ್ ಅವರ ಅಭಿಲಾಷೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪ:</strong> ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ಹಳ್ಳಿಗಳಲ್ಲಿ ರಂಗೇರುತ್ತಿದೆ. ಪದವೀಧರರು ಮತ್ತು ಯುವಕರು ಹೊಸ ಆಶಯದೊಂದಿಗೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ.</p>.<p>ಕೊಪ್ಪ ಹೋಬಳಿಯ 12 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾ.ಪಂನಲ್ಲಿ 2– 3 ಮಂದಿ ಪದವಿ ಮತ್ತು ಸ್ನಾತಕೋತ್ತರ ಪದವೀಧರರು ಕಣದಲ್ಲಿದ್ದಾರೆ. ಹೊಸ ಭರವಸೆ ಈಡೇರಿಸುವ ಮತ್ತು ಬದಲಾವಣೆ ತರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಗ್ರಾ.ಪಂ.ಗಳಿಗೆ ವಿದ್ಯಾವಂತರು ಆಯ್ಕೆಯಾಗಿ ಹೋದರೆ ವ್ಯವಸ್ಥೆ ಸರಿಹೋಗಬಹುದು ಎಂಬ ಭರವಸೆ ಹಳ್ಳಿಗರಲ್ಲಿದೆ.</p>.<p>ನಿಲುವಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದಿಗೆರೆ ಗ್ರಾಮದ ಎಂ.ಎಲ್.ಸುನೀಲ್ ಕುಮಾರ್ ಅವರು ಬಿಇ ಪದವೀಧರ. ಮನೆಯಲ್ಲಿದ್ದುಕೊಂಡು ಖಾಸಗಿ ಉದ್ಯೋಗ ಮಾಡಿಕೊಂಡಿದ್ದಾರೆ. ತಗ್ಗಹಳ್ಳಿ, ಮರಳಿಗ ಮತ್ತು ಬೆಸಗರಹಳ್ಳಿ ಮೊದಲಾದ ಗ್ರಾಮಗಳ ಚುನಾವಣಾ ಕಣದಲ್ಲಿ ಸ್ನಾತಕೋತ್ತರ ಪದವೀಧರರು, ಉದ್ಯೋಗ ಅರಸುತ್ತಿರುವವರೂ ಇದ್ದಾರೆ. ಈ ಬಾರಿ ಪದವಿ ಪಡೆದಿರುವ ಮಹಿಳಾ ಅಭ್ಯರ್ಥಿಗಳೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಜನ ಸೇವೆ ಮಾಡಬೇಕು, ಗ್ರಾಮಾಭಿವೃದ್ಧಿಗೆ ಶ್ರಮಿಸಬೇಕು ಎಂಬ ಹಂಬಲವೂ ಹಲವರಲ್ಲಿದೆ.</p>.<p>ಯುವ ಸಮುದಾಯದಿಂದ ಗ್ರಾಮಗಳ ಅಭಿವೃದ್ಧಿಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ ಎನ್ನುತ್ತಾರೆ ನಿವೃತ್ತ ಪ್ರಾಂಶುಪಾಲ ಯಧುಶೈಲ ಸಂಪತ್.</p>.<p>ಪದವೀಧರರು ಚುನಾವಣಾ ಕಣದಲ್ಲಿರುವುದು ಉತ್ತಮ ಬೆಳವಣಿಗೆ. ಸರ್ಕಾರದ ಯೋಜನೆಗಳು ಮತ್ತು ಅವುಗಳ ಅನುಷ್ಠಾನಕ್ಕೆ, ಗ್ರಾಮಗಳ ಪ್ರಗತಿಗೆ ಸಾಕಾರವಾಗುತ್ತದೆ. ಆದರೂ ಕಡಿಮೆ ಶಿಕ್ಷಣ ಹೊಂದಿರು ವವರನ್ನೂ ಕಡೆಗಣಿಸುವಂತಿಲ್ಲ ಎನ್ನುತ್ತಾರೆ ತಹಶೀಲ್ದಾರ್ ವಿಜಯ್ ಕುಮಾರ್.</p>.<p>ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ನೇರವಾಗಿ ಜನರಿಗೆ ತಲುಪಿಸುವ ಮತ್ತು ಮದ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ನರೇಗಾ ಯೋಜನೆಯನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಮುದಿಗೆರೆಯಎಂ.ಎಲ್.ಸುನೀಲ್ ಕುಮಾರ್ ಹೇಳಿದರು.</p>.<p>ಲಂಚರಹಿತವಾಗಿ, ಪಾರದರ್ಶ ಕವಾಗಿ ಆಡಳಿತ ನೀಡುವ ಸಲುವಾಗಿ ಮತ್ತು ಜನ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಳ್ಳಲು ರಾಜಕೀಯ ಹಾದಿಯನ್ನು ಹಿಡಿದಿದ್ದೇನೆ ಎನ್ನುವುದು ಬೆಸಗರಹಳ್ಳಿಯ ಅಭಿಲಾಷ್ ಅವರ ಅಭಿಲಾಷೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>