ಶ್ರೀರಂಗಪಟ್ಟಣ: ತಾಲ್ಲೂಕಿನ ಪೀಹಳ್ಳಿ ಗ್ರಾಮದಲ್ಲಿ, ದೊಳ್ಳಯ್ಯ (85) ಎಂಬುವವರ ಶವ ಸಂಸ್ಕಾರದ ವೇಳೆ ಶುಕ್ರವಾರ ಹೆಜ್ಜೇನು ದಾಳಿ ನಡೆಸಿದೆ. ಜೇನುಗಳ ಅನಿರೀಕ್ಷಿತ ದಾಳಿಯಿಂದ, ಶವ ಸಂಸ್ಕಾರಕ್ಕೆ ಬಂದಿದ್ದ ನೂರಾರು ಮಂದಿ ದಿಕ್ಕಾಪಾಲಾಗಿ ಓಡಿದ್ದಾರೆ. ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಶವವನ್ನು ಸ್ಥಳದಲ್ಲೇ ಬಿಟ್ಟು ಓಡಿಹೋಗಿದ್ದಾರೆ. ಇದರಿಂದಾಗಿ, ಮಧ್ಯಾಹ್ನ 12ರಿಂದ ಸಂಜೆ 5.30ರವರೆಗೆ ಉಂತೂರಮ್ಮ ದೇವಾಲಯದ ಬಳಿ ದೊಳ್ಳಯ್ಯ ಅವರ ಶವ ಅನಾಥವಾಗಿ ಬಿದ್ದಿತ್ತು.