ಹೊಯ್ಸಳರ ಕಾಲದ ದೇಗುಲದ ಗೋಡೆಗಳ ಮೇಲೆ ಸುಂದರ ಕೆತ್ತನೆಯ ಮೂರ್ತಿಗಳಿದ್ದವು. ಗೋಡೆ ಕುಸಿದ ಕಾರಣ ಶಿಲ್ಪಕಲಾ ಮೂರ್ತಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಪಂಜರ ಕೋಷ್ಟಕದಲ್ಲಿದ್ದ ನರಸಿಂಹ, ಗೋಪಾಲಕೃಷ್ಣ, ಮಹಿಷಮರ್ಧಿನಿ, ಕಾಳಿಂಗ ಮರ್ಧನ, ಯೋಗನರಸಿಂಹ, ವಿಷ್ಣು, ಶಿವ, ಗಣೇಶ ಮೂರ್ತಿಗಳು ಹಾಳಾಗಿವೆ.