<p><strong>ಮಂಡ್ಯ:</strong> ವಾಟರ್ ಮೀಟರ್ ಪರಿಶೀಲನೆ ನೆಪ ಹೇಳಿ ವಂಚಿಸಿ ಕಳ್ಳತನ ಮಾಡುತ್ತಿದ್ದ ಅಂತರ ರಾಜ್ಯ ಕಳ್ಳನನ್ನ ಬಂಧಿಸಿರುವ ಮಂಡ್ಯ ಪೊಲೀಸರು, ₹10 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ಅನ್ನು ವಶ ಪಡಿಸಿಕೊಂಡಿದ್ದಾರೆ.</p>.<p>ತಮಿಳುನಾಡು ಮೂಲದ ರವಿ (29) ಬಂಧಿತ ಆರೋಪಿ. ಜೂನ್ 26ರಂದು ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಪುಷ್ಪವತಿ ಅವರ ಮನೆಗೆ ಧಾವಿಸಿದ ರವಿ ಸೇರಿ ಮೂವರು ಆರೋಪಿಗಳು, ವಾಟರ್ ಮೀಟರ್ ಪರಿಶೀಲನೆಗೆ ಬಂದಿದ್ದು, ತೋರಿಸುವಂತೆ ತಿಳಿಸಿದ್ದಾರೆ.</p>.<p>ಆರೋಪಿಗಳಲ್ಲಿ ಇಬ್ಬರು ವ್ಯಕ್ತಿಗಳು ಮನೆಯ ಮೇಲೆ ತೆರಳಿ ಟ್ಯಾಂಕ್ ಪರಿಶೀಲನೆಗೆ ತೊಡಗಿದರೆ, ಮತ್ತೊಬ್ಬ ಮನೆಯೊಳಗೆ ತೆರಳಿ ಕೊಠಡಿಯಲ್ಲಿದ್ದ ₹50 ಸಾವಿರ, 180 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.</p>.<p>ಪ್ರಕರಣ ದಾಖಲಿಸಿಕೊಂಡ ಮಂಡ್ಯ ಪೂರ್ವ ಠಾಣೆ ಪೊಲೀಸರು ತನಿಖೆ ನಡೆಸಿ ಬೆಂಗಳೂರಿನ ಅತ್ತಿಬೆಲೆಯಲ್ಲಿ ಆರೋಪಿ ರವಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ವೇಳೆ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.</p>.<p>ಆರೋಪಿಯ ವಿರುದ್ಧ ರಾಜಸ್ಥಾನ, ಜೋಧ್ಪುರ ಹಾಗೂ ಮುಂಬೈಗಳಲ್ಲಿ ಪ್ರಕರಣಗಳು ದಾಖಲಾಗಿವೆ.</p>.<p>ಪೂರ್ವ ಠಾಣೆ ಪಿಎಸ್ಐ ಶೇಷಾದ್ರಿಕುಮಾರ್, ಸಿಬ್ಬಂದಿ ಲಿಂಗರಾಜು, ಮಹೇಶ್, ಅನಿಲ್ಕುಮಾರ್, ಉಮರ್ ಅಹಮ್ಮದ್ ಫಾರೂಕಿ, ಮಂಜುನಾಥ, ಶ್ರೀನಿವಾಸ ಇತರರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ವಾಟರ್ ಮೀಟರ್ ಪರಿಶೀಲನೆ ನೆಪ ಹೇಳಿ ವಂಚಿಸಿ ಕಳ್ಳತನ ಮಾಡುತ್ತಿದ್ದ ಅಂತರ ರಾಜ್ಯ ಕಳ್ಳನನ್ನ ಬಂಧಿಸಿರುವ ಮಂಡ್ಯ ಪೊಲೀಸರು, ₹10 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ಅನ್ನು ವಶ ಪಡಿಸಿಕೊಂಡಿದ್ದಾರೆ.</p>.<p>ತಮಿಳುನಾಡು ಮೂಲದ ರವಿ (29) ಬಂಧಿತ ಆರೋಪಿ. ಜೂನ್ 26ರಂದು ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಪುಷ್ಪವತಿ ಅವರ ಮನೆಗೆ ಧಾವಿಸಿದ ರವಿ ಸೇರಿ ಮೂವರು ಆರೋಪಿಗಳು, ವಾಟರ್ ಮೀಟರ್ ಪರಿಶೀಲನೆಗೆ ಬಂದಿದ್ದು, ತೋರಿಸುವಂತೆ ತಿಳಿಸಿದ್ದಾರೆ.</p>.<p>ಆರೋಪಿಗಳಲ್ಲಿ ಇಬ್ಬರು ವ್ಯಕ್ತಿಗಳು ಮನೆಯ ಮೇಲೆ ತೆರಳಿ ಟ್ಯಾಂಕ್ ಪರಿಶೀಲನೆಗೆ ತೊಡಗಿದರೆ, ಮತ್ತೊಬ್ಬ ಮನೆಯೊಳಗೆ ತೆರಳಿ ಕೊಠಡಿಯಲ್ಲಿದ್ದ ₹50 ಸಾವಿರ, 180 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.</p>.<p>ಪ್ರಕರಣ ದಾಖಲಿಸಿಕೊಂಡ ಮಂಡ್ಯ ಪೂರ್ವ ಠಾಣೆ ಪೊಲೀಸರು ತನಿಖೆ ನಡೆಸಿ ಬೆಂಗಳೂರಿನ ಅತ್ತಿಬೆಲೆಯಲ್ಲಿ ಆರೋಪಿ ರವಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ವೇಳೆ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.</p>.<p>ಆರೋಪಿಯ ವಿರುದ್ಧ ರಾಜಸ್ಥಾನ, ಜೋಧ್ಪುರ ಹಾಗೂ ಮುಂಬೈಗಳಲ್ಲಿ ಪ್ರಕರಣಗಳು ದಾಖಲಾಗಿವೆ.</p>.<p>ಪೂರ್ವ ಠಾಣೆ ಪಿಎಸ್ಐ ಶೇಷಾದ್ರಿಕುಮಾರ್, ಸಿಬ್ಬಂದಿ ಲಿಂಗರಾಜು, ಮಹೇಶ್, ಅನಿಲ್ಕುಮಾರ್, ಉಮರ್ ಅಹಮ್ಮದ್ ಫಾರೂಕಿ, ಮಂಜುನಾಥ, ಶ್ರೀನಿವಾಸ ಇತರರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>