ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮಂಡ್ಯ | ಟಿವಿ, ಬೆಡ್‌ಕವರ್‌ ಖರೀದಿಯಲ್ಲಿ ಅವ್ಯವಹಾರ: ಲಕ್ಷಾಂತರ ರೂಪಾಯಿ ಗುಳುಂ

ಹಾಸ್ಟೆಲ್‌ ನಿರ್ವಹಣೆಯಲ್ಲಿ ಲಕ್ಷಾಂತರ ರೂಪಾಯಿ ಗುಳುಂ: ತನಿಖಾ ವರದಿಯಲ್ಲಿ ಬಹಿರಂಗ
Published : 28 ಮಾರ್ಚ್ 2025, 3:27 IST
Last Updated : 28 ಮಾರ್ಚ್ 2025, 3:27 IST
ಫಾಲೋ ಮಾಡಿ
Comments
ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ  ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಪದೇ ಪದೇ ರಿಪೇರಿ ಹೆಸರಿನಲ್ಲಿ ಹಣ ವ್ಯಯ
ತನಿಖೆಯಲ್ಲಿ ಅವ್ಯವಹಾರ ಸಾಬೀತಾಗಿರುವುದರಿಂದ ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಮತ್ತು ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟವನ್ನು ವಸೂಲಾತಿ ಮಾಡಬೇಕು
– ಎಂ.ಡಿ.ಕೇಶವಮೂರ್ತಿ ಆರ್‌ಟಿಐ ಕಾರ್ಯಕರ್ತ ಟಿ.ಮಲ್ಲಿಗೆರೆ
ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ವೆಚ್ಚ
ತಾಲ್ಲೂಕಿನ ವಿದ್ಯಾರ್ಥಿನಿಲಯಗಳಿಗೆ ತಲಾ ₹93440 ದರದಂತೆ ಒಟ್ಟು ₹7.47 ಲಕ್ಷ ಭರಿಸಿ 8 ಟಿ.ವಿ.ಗಳನ್ನು ಖರೀದಿ ಮಾಡಲಾಗಿದೆ. ಆದರೆ 43 ಇಂಚಿನ ಎಲ್‌ಇಡಿ ಟಿ.ವಿ.ಯ ಮಾರುಕಟ್ಟೆ ದರ ₹47999 ಇದೆ. ಅಂದರೆ ಮಾರುಕಟ್ಟೆ ದರಕ್ಕಿಂತ ₹3.63 ಲಕ್ಷ ಮೊತ್ತವನ್ನು ಟಿ.ವಿ ಸಂಸ್ಥೆಗಳ ಜೊತೆ ಭಾಗಿಯಾಗಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತನಿಖಾ ವರದಿಯಲ್ಲಿ ನಮೂದಿಸಲಾಗಿದೆ. 
ನೀರಿನ ಉಪಕರಣದಲ್ಲೂ ಭ್ರಷ್ಟಾಚಾರ
ಮಂಡ್ಯ ತಾಲ್ಲೂಕು ವ್ಯಾಪ್ತಿಯ 3 ವಿದ್ಯಾರ್ಥಿ ನಿಲಯಗಳಲ್ಲಿ ಈಗಾಗಲೇ ವಾಟರ್‌ ಪ್ಯೂರಿಫೈಯರ್‌ ಇದ್ದರೂ ಅನಗತ್ಯವಾಗಿ 3 ಉಪಕರಣಗಳನ್ನು ಡಿ.ಸಿ. ಬಿಲ್ಲುಗಳ ಮೂಲಕ ಖಜಾನೆಯಿಂದ ನಿಯಮ ಬಾಹಿರವಾಗಿ ₹4.43 ಲಕ್ಷ ಹಣ ಸೆಳದಿದ್ದಾರೆ. ಇದರಿಂದ ಸರ್ಕಾರಕ್ಕೆ ಹೆಚ್ಚುವರಿ ಹೊರೆ ಉಂಟು ಮಾಡಿದ್ದಾರೆ ಎಂಬ ಅಂಶವನ್ನು ತನಿಖಾಧಿಕಾರಿ ಎತ್ತಿ ಹಿಡಿದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT