<p><strong>ಮದ್ದೂರು (ಮಂಡ್ಯ):</strong> ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಸ್ಟ್ ಪಾಸ್ ಆಗಿ ಬಂದಿದ್ದೀರಿ. ಬೇರೆಯವರ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಟ್ಟು ಜಿಲ್ಲೆಯ ಅಭಿವೃದ್ಧಿಯತ್ತ ಗಮನ ಕೊಡಿ’ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ತಿರುಗೇಟು ನೀಡಿದರು. </p><p>‘ಮಾಜಿ ಶಾಸಕ ಅನ್ನದಾನಿ ಹಾಗೂ ಮಾಜಿ ಸಚಿವ ಪುಟ್ಟರಾಜು ಅವರ ಮಾತಿಗೆ ಉತ್ತರ ಕೊಡಬೇಕೇನ್ರಿ’ ಎಂಬ ಚಲುವರಾಯಸ್ವಾಮಿ ಹೇಳಿಕೆಗೆ ಪುಟ್ಟರಾಜು ಸಿಡಿಮಿಡಿಗೊಂಡರು. </p><p>‘ಇದೆಲ್ಲಾ ತುಂಬಾ ದಿನ ನಡೆಯಲ್ಲ, ರಾಜಕಾರಣದಲ್ಲಿ ನಾನೂ ಅಧಿಕಾರ ಅನುಭವಿಸಿದ್ದೇನೆ. ಗೌರವಯುತವಾಗಿ ಮಾತನಾಡುವುದನ್ನು ಕಲಿಯಬೇಕು. ಇದನ್ನು ಕೊನೆ ಮಾಡ್ಲಿಲ್ಲ ಅಂದ್ರೆ ನಾವು ಮಾತನಾಡಬೇಕಾಗುತ್ತದೆ’ ಎಂದು ಖಾರವಾಗಿ ನುಡಿದರು. </p><p>‘ನಾವು ಇವರ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಾರ ಕಡೆ ಇರುಬೇಕು ಅಂತ ಗೊಂದಲದಲ್ಲಿ ಇಲ್ಲ. ನಾವು ಎಲ್ಲೇ ಇದ್ದರೂ ಕಡೆಗೆ ದೇವೇಗೌಡರ ಕೊಟ್ಟಿಗೆಗೇ ಬರ್ತೀವಿ’ ಎಂದರು.</p><p>‘ನಮ್ಮಿಂದಲೇ ನಿಖಿಲ್ ಸೋತಿದ್ದಾರೆ ಅನ್ನೋ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್– ಜೆಡಿಎಸ್ ಮೈತ್ರಿ ಇದ್ದಾಗ ನಿಖಿಲ್ ಚುನಾವಣೆಯಲ್ಲಿ ಇವ್ರೇನು ಮಾಡಿದ್ರು. ಜಿಲ್ಲೆಯ ಜನತೆ ಆಗ ಅಂಬರೀಷ್ ಅವರ ಅಭಿಮಾನದಿಂದ ಅಂದು ಸುಮಲತಾ ಅವರಿಗೆ ಮತ ನೀಡಿದ್ರು. ಈ ರೀತಿಯ ಆಟಗಳನ್ನು ಆಡಿದ್ರೆ ನಮಗೂ ಮಾತನಾಡೋಕೆ ಬರುತ್ತೆ’ ಎಂದು ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.</p>.ಜನ್ಮದಿನ | ಎಚ್.ಡಿ. ಕುಮಾರಸ್ವಾಮಿ ಅಭಿನಂದನಾ ಸಮಾರಂಭ ಮುಂದೂಡಿಕೆ: ಪುಟ್ಟರಾಜು.‘ಬಾಡೂಟ ಯಾಕಿಲ್ಲ ಸ್ವಾಮಿ?’: ಪರಿಷತ್ತಿನ ನಿಯಮದ ಕುರಿತು ಪರ–ವಿರೋಧ ಚರ್ಚೆ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು (ಮಂಡ್ಯ):</strong> ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಸ್ಟ್ ಪಾಸ್ ಆಗಿ ಬಂದಿದ್ದೀರಿ. ಬೇರೆಯವರ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಟ್ಟು ಜಿಲ್ಲೆಯ ಅಭಿವೃದ್ಧಿಯತ್ತ ಗಮನ ಕೊಡಿ’ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ತಿರುಗೇಟು ನೀಡಿದರು. </p><p>‘ಮಾಜಿ ಶಾಸಕ ಅನ್ನದಾನಿ ಹಾಗೂ ಮಾಜಿ ಸಚಿವ ಪುಟ್ಟರಾಜು ಅವರ ಮಾತಿಗೆ ಉತ್ತರ ಕೊಡಬೇಕೇನ್ರಿ’ ಎಂಬ ಚಲುವರಾಯಸ್ವಾಮಿ ಹೇಳಿಕೆಗೆ ಪುಟ್ಟರಾಜು ಸಿಡಿಮಿಡಿಗೊಂಡರು. </p><p>‘ಇದೆಲ್ಲಾ ತುಂಬಾ ದಿನ ನಡೆಯಲ್ಲ, ರಾಜಕಾರಣದಲ್ಲಿ ನಾನೂ ಅಧಿಕಾರ ಅನುಭವಿಸಿದ್ದೇನೆ. ಗೌರವಯುತವಾಗಿ ಮಾತನಾಡುವುದನ್ನು ಕಲಿಯಬೇಕು. ಇದನ್ನು ಕೊನೆ ಮಾಡ್ಲಿಲ್ಲ ಅಂದ್ರೆ ನಾವು ಮಾತನಾಡಬೇಕಾಗುತ್ತದೆ’ ಎಂದು ಖಾರವಾಗಿ ನುಡಿದರು. </p><p>‘ನಾವು ಇವರ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಾರ ಕಡೆ ಇರುಬೇಕು ಅಂತ ಗೊಂದಲದಲ್ಲಿ ಇಲ್ಲ. ನಾವು ಎಲ್ಲೇ ಇದ್ದರೂ ಕಡೆಗೆ ದೇವೇಗೌಡರ ಕೊಟ್ಟಿಗೆಗೇ ಬರ್ತೀವಿ’ ಎಂದರು.</p><p>‘ನಮ್ಮಿಂದಲೇ ನಿಖಿಲ್ ಸೋತಿದ್ದಾರೆ ಅನ್ನೋ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್– ಜೆಡಿಎಸ್ ಮೈತ್ರಿ ಇದ್ದಾಗ ನಿಖಿಲ್ ಚುನಾವಣೆಯಲ್ಲಿ ಇವ್ರೇನು ಮಾಡಿದ್ರು. ಜಿಲ್ಲೆಯ ಜನತೆ ಆಗ ಅಂಬರೀಷ್ ಅವರ ಅಭಿಮಾನದಿಂದ ಅಂದು ಸುಮಲತಾ ಅವರಿಗೆ ಮತ ನೀಡಿದ್ರು. ಈ ರೀತಿಯ ಆಟಗಳನ್ನು ಆಡಿದ್ರೆ ನಮಗೂ ಮಾತನಾಡೋಕೆ ಬರುತ್ತೆ’ ಎಂದು ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.</p>.ಜನ್ಮದಿನ | ಎಚ್.ಡಿ. ಕುಮಾರಸ್ವಾಮಿ ಅಭಿನಂದನಾ ಸಮಾರಂಭ ಮುಂದೂಡಿಕೆ: ಪುಟ್ಟರಾಜು.‘ಬಾಡೂಟ ಯಾಕಿಲ್ಲ ಸ್ವಾಮಿ?’: ಪರಿಷತ್ತಿನ ನಿಯಮದ ಕುರಿತು ಪರ–ವಿರೋಧ ಚರ್ಚೆ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>