<p><strong>ಮಂಡ್ಯ</strong>: ತಾಲ್ಲೂಕಿನ ಸಾತನೂರು ಗ್ರಾಮದ ಇತಿಹಾಸ ಪ್ರಸಿದ್ಧ ಕಂಬದ ನರಸಿಂಹಸ್ವಾಮಿ ಬ್ರಹ್ಮರಥೋತ್ಸವವು ಸಾವಿರಾರು ಭಕ್ತರ ನಡುವೆ ಭಾನುವಾರ ನಡೆಯಿತು.</p>.<p>ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತರು ದೇವಾಲಯದ ಎದುರು ಇರುವ ನರಸಿಂಹಸ್ವಾಮಿಯ ಪಾದಕ್ಕೆ ನಮಿಸಿ ನಂತರ ಸ್ವಾಮಿಯ ದರ್ಶನ ಪಡೆದರು. ಮೊದಲ ಬಾರಿಗೆ ಬ್ರಹ್ಮರಥೋತ್ಸವ ನಡೆಯುತ್ತಿರುವ ಕಾರಣ ದನಗಳ ಜಾತ್ರೆ ಮನಸೂರೆಗೊಳಿಸಿತು.</p>.<p>ರಥವನ್ನು ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. ಉಮ್ಮಡಹಳ್ಳಿ, ಸಾತನೂರು, ಚಿಕ್ಕಮಂಡ್ಯ, ಹುಲಿವಾನ, ಗೋಪಾಪುರ, ಕೊಮ್ಮೇರಹಳ್ಳಿ, ಚಿಂದಗಿರಿದೊಡ್ಡಿ, ಬೆಳ್ಳೂಂಡಗೆರೆ, ಶ್ರೀನಿವಾಸಪುರ ಸೇರಿದಂತೆ ವಿವಿಧೆಡೆಯ ಭಕ್ತರು ಬಂದಿದ್ದರು.</p>.<p>ಭಕ್ತರಿಗೆ ಹೋಳಿಗೆ ಊಟವನ್ನು ಪ್ರಸಾದ ರೂಪದಲ್ಲಿ ನೀಡಲಾಯಿತು. ಹರಕೆ ತೀರಿಸಿದ ಭಕ್ತರು ಹಣ್ಣುಜವನ ಎಸೆದರು.</p>.<p>ದೇವಾಲಯದ ಆವರಣದಲ್ಲಿ ದನಗಳ ಜಾತ್ರೆಯೂ ನಡೆಯಿತು. ವಿವಿಧ ಗ್ರಾಮಗಳಿಂದ ಬಂದಿದ್ದ ಜೋಡೆತ್ತುಗಳಿಗಾಗಿ ಶಾಮಿಯಾನ ಸೇರಿಂತೆ ನೆರಳಿಗೆ ವಿಶೇಷ ಶೆಡ್ಗಳನ್ನು ದನಗಳ ಮಾಲೀಕರು ಮಾಡಿಸಿಕೊಂಡಿದ್ದರು. ಬೆಲೆ ಬಾಳುವ ರಾಸುಗಳು ಗಮನ ಸೆಳೆದವು.</p>.<p>ಜಾತ್ರೆಯಲ್ಲಿ ಗೃಹಪಯೋಗಿ ವಸ್ತುಗಳು ಸೇರಿದಂತೆ ಮಕ್ಕಳ ಆಟಿಕೆಯ ಸಾಮಗ್ರಿಗಳು ಹಾಗೂ ತಿನಿಸುಗಳ ಅಂಗಡಿಗಳೂ ಇದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ತಾಲ್ಲೂಕಿನ ಸಾತನೂರು ಗ್ರಾಮದ ಇತಿಹಾಸ ಪ್ರಸಿದ್ಧ ಕಂಬದ ನರಸಿಂಹಸ್ವಾಮಿ ಬ್ರಹ್ಮರಥೋತ್ಸವವು ಸಾವಿರಾರು ಭಕ್ತರ ನಡುವೆ ಭಾನುವಾರ ನಡೆಯಿತು.</p>.<p>ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತರು ದೇವಾಲಯದ ಎದುರು ಇರುವ ನರಸಿಂಹಸ್ವಾಮಿಯ ಪಾದಕ್ಕೆ ನಮಿಸಿ ನಂತರ ಸ್ವಾಮಿಯ ದರ್ಶನ ಪಡೆದರು. ಮೊದಲ ಬಾರಿಗೆ ಬ್ರಹ್ಮರಥೋತ್ಸವ ನಡೆಯುತ್ತಿರುವ ಕಾರಣ ದನಗಳ ಜಾತ್ರೆ ಮನಸೂರೆಗೊಳಿಸಿತು.</p>.<p>ರಥವನ್ನು ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. ಉಮ್ಮಡಹಳ್ಳಿ, ಸಾತನೂರು, ಚಿಕ್ಕಮಂಡ್ಯ, ಹುಲಿವಾನ, ಗೋಪಾಪುರ, ಕೊಮ್ಮೇರಹಳ್ಳಿ, ಚಿಂದಗಿರಿದೊಡ್ಡಿ, ಬೆಳ್ಳೂಂಡಗೆರೆ, ಶ್ರೀನಿವಾಸಪುರ ಸೇರಿದಂತೆ ವಿವಿಧೆಡೆಯ ಭಕ್ತರು ಬಂದಿದ್ದರು.</p>.<p>ಭಕ್ತರಿಗೆ ಹೋಳಿಗೆ ಊಟವನ್ನು ಪ್ರಸಾದ ರೂಪದಲ್ಲಿ ನೀಡಲಾಯಿತು. ಹರಕೆ ತೀರಿಸಿದ ಭಕ್ತರು ಹಣ್ಣುಜವನ ಎಸೆದರು.</p>.<p>ದೇವಾಲಯದ ಆವರಣದಲ್ಲಿ ದನಗಳ ಜಾತ್ರೆಯೂ ನಡೆಯಿತು. ವಿವಿಧ ಗ್ರಾಮಗಳಿಂದ ಬಂದಿದ್ದ ಜೋಡೆತ್ತುಗಳಿಗಾಗಿ ಶಾಮಿಯಾನ ಸೇರಿಂತೆ ನೆರಳಿಗೆ ವಿಶೇಷ ಶೆಡ್ಗಳನ್ನು ದನಗಳ ಮಾಲೀಕರು ಮಾಡಿಸಿಕೊಂಡಿದ್ದರು. ಬೆಲೆ ಬಾಳುವ ರಾಸುಗಳು ಗಮನ ಸೆಳೆದವು.</p>.<p>ಜಾತ್ರೆಯಲ್ಲಿ ಗೃಹಪಯೋಗಿ ವಸ್ತುಗಳು ಸೇರಿದಂತೆ ಮಕ್ಕಳ ಆಟಿಕೆಯ ಸಾಮಗ್ರಿಗಳು ಹಾಗೂ ತಿನಿಸುಗಳ ಅಂಗಡಿಗಳೂ ಇದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>