<p><strong>ಶ್ರೀರಂಗಪಟ್ಟಣ:</strong> ತಾಲ್ಲೂಕಿನ ಕರಿಘಟ್ಟ ಪ್ರಕೃತಿ ತಾಣದ ಶಿಖರದಲ್ಲಿ ನೀಲಾಚಲ ಗೆಳೆಯರ ಬಳಗದ ಸದಸ್ಯರು ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಒಂದು ದಿನ ಬಾಕಿ ಇರುವಾಗಲೇ ಕನ್ನಡ ಬಾವುಟವನ್ನು ಹಾರಿಸಿದ್ದಾರೆ.</p>.<p>ಸಮುದ್ರ ಮಟ್ಟದಿಂದ ಸುಮಾರು 4 ಸಾವಿರ ಅಡಿಗಳಷ್ಟು ಎತ್ತರದಲ್ಲಿರುವ ಕರಿಘಟ್ಟದ ಶಿಖರದ ತುತ್ತ ತುದಿಯಲ್ಲಿ ಕನ್ನಡ ಬಾವುಟವನ್ನು ಹಾರಿಸಲಾಗಿದೆ. ಶಿಖರದ ತುತ್ತ ತುದಿಯಲ್ಲಿ 30 ಅಡಿ ಎತ್ತರದ ಕಬ್ಬಿಣ ಕಂಬಿ ನೆಟ್ಟು ಅದರ ಮೇಲೆ ಬಾವುಟ ಹಾರಾಡು<br />ವಂತೆ ಮಾಡಿದ್ದಾರೆ. ಸುಮಾರು 5 ಗಜ ಅಗಲದ ಕನ್ನಡ ಬಾವುಟ ಹಾರಾಡುತ್ತಿದೆ. ಕರಿಘಟ್ಟದ ಆಸುಪಾಸಿನ ಹತ್ತಾರು ಹಳ್ಳಿಗಳಿಗೂ ಈ<br />ಬಾವುಟ ಕಾಣುತ್ತಿದೆ.</p>.<p>ಕರಿಘಟ್ಟದಲ್ಲಿ ಪ್ರತಿದಿನ ವಿಹಾರ ನಡೆಸುವ ನೀಲಾಚಲ ಗೆಳೆಯರ ಬಳಗ ಕನ್ನಡ ಬಾವುಟ ಹಾರಿಸುವ ಉದ್ದೇಶದಿಂದ ಮೂರು ದಿನಗಳ ಹಿಂದೆಯೇ ಶಿಖರದಲ್ಲಿ ಕಬ್ಬಿಣದ ಕಂಬಿ ನೆಟ್ಟಿತ್ತು. ಸಿಮೆಂಟ್,ಜಲ್ಲಿ, ಎಂ–ಸ್ಯಾಂಡ್ ಅನ್ನು ಮರದ ತುಂಡುಗಳ ಸಹಾಯದಿಂದ ಮೇಲಕ್ಕೆ ಹೊತ್ತೊಯ್ದು ಭದ್ರಪಡಿಸಿತ್ತು.</p>.<p>ನೀಲಾಚಲ ಗೆಳೆಯರ ಬಳಗದಅಧ್ಯಕ್ಷ ಲಕ್ಷ್ಮೀನಾರಾಯಣಅವರ ನೇತೃತ್ವದಲ್ಲಿ ಮೂರುತಾಸು ಕೆಲಸ ಮಾಡಿ ಧ್ವಜಸ್ತಂಭವನ್ನು ಸ್ಥಾಪಿಸಿದ್ದಾರೆ.</p>.<p>ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್.ಸಂದೇಶ್, ಪರಿಸರ ಪ್ರೇಮಿ ದೀಪು, ಜಯರಾಮು, ಶಿಕ್ಷಕ ಗುರುಸಿದ್ದಪ್ಪ, ವಿಜೇಂದ್ರು, ಶಿವು ಇತರರ ಇಚ್ಛೆಯ ಫಲವಾಗಿ ಕರಿಘಟ್ಟ ಶಿಖರದಲ್ಲಿ ಕನ್ನಡ ಬಾವುಟ ಹಾರಾಡುತ್ತಿದೆ. ನ.1ರ ಸೋಮವಾರ ಇಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸುವುದಾಗಿ ನೀಲಾಚಲ ಗೆಳೆಯರ ಬಳಗದ ಸದಸ್ಯರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ:</strong> ತಾಲ್ಲೂಕಿನ ಕರಿಘಟ್ಟ ಪ್ರಕೃತಿ ತಾಣದ ಶಿಖರದಲ್ಲಿ ನೀಲಾಚಲ ಗೆಳೆಯರ ಬಳಗದ ಸದಸ್ಯರು ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಒಂದು ದಿನ ಬಾಕಿ ಇರುವಾಗಲೇ ಕನ್ನಡ ಬಾವುಟವನ್ನು ಹಾರಿಸಿದ್ದಾರೆ.</p>.<p>ಸಮುದ್ರ ಮಟ್ಟದಿಂದ ಸುಮಾರು 4 ಸಾವಿರ ಅಡಿಗಳಷ್ಟು ಎತ್ತರದಲ್ಲಿರುವ ಕರಿಘಟ್ಟದ ಶಿಖರದ ತುತ್ತ ತುದಿಯಲ್ಲಿ ಕನ್ನಡ ಬಾವುಟವನ್ನು ಹಾರಿಸಲಾಗಿದೆ. ಶಿಖರದ ತುತ್ತ ತುದಿಯಲ್ಲಿ 30 ಅಡಿ ಎತ್ತರದ ಕಬ್ಬಿಣ ಕಂಬಿ ನೆಟ್ಟು ಅದರ ಮೇಲೆ ಬಾವುಟ ಹಾರಾಡು<br />ವಂತೆ ಮಾಡಿದ್ದಾರೆ. ಸುಮಾರು 5 ಗಜ ಅಗಲದ ಕನ್ನಡ ಬಾವುಟ ಹಾರಾಡುತ್ತಿದೆ. ಕರಿಘಟ್ಟದ ಆಸುಪಾಸಿನ ಹತ್ತಾರು ಹಳ್ಳಿಗಳಿಗೂ ಈ<br />ಬಾವುಟ ಕಾಣುತ್ತಿದೆ.</p>.<p>ಕರಿಘಟ್ಟದಲ್ಲಿ ಪ್ರತಿದಿನ ವಿಹಾರ ನಡೆಸುವ ನೀಲಾಚಲ ಗೆಳೆಯರ ಬಳಗ ಕನ್ನಡ ಬಾವುಟ ಹಾರಿಸುವ ಉದ್ದೇಶದಿಂದ ಮೂರು ದಿನಗಳ ಹಿಂದೆಯೇ ಶಿಖರದಲ್ಲಿ ಕಬ್ಬಿಣದ ಕಂಬಿ ನೆಟ್ಟಿತ್ತು. ಸಿಮೆಂಟ್,ಜಲ್ಲಿ, ಎಂ–ಸ್ಯಾಂಡ್ ಅನ್ನು ಮರದ ತುಂಡುಗಳ ಸಹಾಯದಿಂದ ಮೇಲಕ್ಕೆ ಹೊತ್ತೊಯ್ದು ಭದ್ರಪಡಿಸಿತ್ತು.</p>.<p>ನೀಲಾಚಲ ಗೆಳೆಯರ ಬಳಗದಅಧ್ಯಕ್ಷ ಲಕ್ಷ್ಮೀನಾರಾಯಣಅವರ ನೇತೃತ್ವದಲ್ಲಿ ಮೂರುತಾಸು ಕೆಲಸ ಮಾಡಿ ಧ್ವಜಸ್ತಂಭವನ್ನು ಸ್ಥಾಪಿಸಿದ್ದಾರೆ.</p>.<p>ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್.ಸಂದೇಶ್, ಪರಿಸರ ಪ್ರೇಮಿ ದೀಪು, ಜಯರಾಮು, ಶಿಕ್ಷಕ ಗುರುಸಿದ್ದಪ್ಪ, ವಿಜೇಂದ್ರು, ಶಿವು ಇತರರ ಇಚ್ಛೆಯ ಫಲವಾಗಿ ಕರಿಘಟ್ಟ ಶಿಖರದಲ್ಲಿ ಕನ್ನಡ ಬಾವುಟ ಹಾರಾಡುತ್ತಿದೆ. ನ.1ರ ಸೋಮವಾರ ಇಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸುವುದಾಗಿ ನೀಲಾಚಲ ಗೆಳೆಯರ ಬಳಗದ ಸದಸ್ಯರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>