<p><strong>ಕೇಂದ್ರದ ಹುದ್ದೆಗಳಿಗೆ ಸೇರಲು ತ್ರಿಭಾಷಾ ಜ್ಞಾನ<br /> ಬೆಂಗಳೂರು, ಮಾ. 28– </strong>ಮೂರು ಮತ್ತು ಅದಕ್ಕಿಂತ ಮೇಲಿನ ದರ್ಜೆಯ ಕೇಂದ್ರದ ನೌಕರಿಗೆ ಸೇರಬಯಸುವವರಿಗೆ 3 ಭಾಷೆಗಳಲ್ಲಿ ಜ್ಞಾನವಿರಬೇಕೆಂದು ಗೊತ್ತು ಮಾಡಬೇಕೆಂದು ರಾಜ್ಯ ಸರಕಾರ ಕೇಂದ್ರಕ್ಕೆ ತಿಳಿಸಲಿದೆ.</p>.<p><strong>ಅಂಕ್ಟಾಡ್ ವಿಫಲ<br /> ನವದೆಹಲಿ, ಮಾ. 28– </strong>ದ್ವಿತೀಯ ‘ಅಂಕ್ಟಾಡ್’ ಸಮ್ಮೇಳನ ಬಹಳ ಪರಿಮಿತ ಪ್ರಗತಿ ಸಾಧಿಸಿದ್ದರೂ ಅದು ‘ವಿಫಲ’ಗೊಂಡಿದೆಯೆಂದು ಬ್ರೆಜಿಲ್ ನಿಯೋಗದ ನಾಯಕ ಹಾಗೂ 77 ರಾಷ್ಟ್ರಗಳ ತಂಡದ ಅಧ್ಯಕ್ಷ ಸಿಲ್ವೇರಾ ಇಂದು ಹೇಳಿದರು.</p>.<p><strong>ರಾಜ್ಯಸಭೆಗೆ ಮಲ್ಲಪ್ಪ, ಪುಟ್ಟಪ್ಪ, ಕೆಂಪರಾಜ್ ಮತ್ತು ಲಕ್ಷ್ಮಣಗೌಡ<br /> ಬೆಂಗಳೂರು, ಮಾ. 28–</strong> ಕಾಂಗ್ರೆಸ್ ಸ್ಪರ್ಧಿಗಳಾದ ಸರ್ವಶ್ರೀ ಕೊಲ್ಲೂರು ಮಲ್ಲಪ್ಪ, ಪಾಟೀಲ ಪುಟಪ್ಪ ಮತ್ತು ಜಿ.ಟಿ. ಕೆಂಪರಾಜ್ ಹಾಗೂ ವಿರೋಧ ಪಕ್ಷಗಳ ಬೆಂಬಲ ಪಡೆದಿದ್ದ ಶ್ರೀ ಯು.ಕೆ. ಲಕ್ಷ್ಮಣಗೌಡ ಅವರುಗಳು ರಾಜ್ಯಸಭೆಗೆ ಚುನಾಯಿತರಾಗಿದ್ದಾರೆ.</p>.<p>ವಿಧಾನಸಭಾ ಕ್ಷೇತ್ರದಿಂದ ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ಇಂದು ಮತದಾನ ನಡೆಯಿತು.</p>.<p><strong>ವಿಮಾನ ಅಪಘಾತ: ಪ್ರಥಮ ಗಗನಯಾತ್ರಿ ಗಗಾರಿನ್ ಸಾವು<br /> ಮಾಸ್ಕೋ, ಮಾ. 28– </strong>ಪ್ರಪಂಚದ ಪ್ರಥಮ ಗಗನಯಾತ್ರಿ ಯೂರಿ ಗಗಾರಿನ್ ಅವರು ನಿನ್ನೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವಿಗೀಡಾದರೆಂದು ಮಾಸ್ಕೋ ರೇಡಿಯೋ ಇಂದು ಪ್ರಕಟಿಸಿತು. ಎಂಜಿನಿಯರ್–ಕರ್ನಲ್ ವ್ಲಾಡಿಮಿರ್ ಸೆರ್ಜೆವಿಕ್ ಸೆಯೊಗಿನ್ ಎಂಬುವರ ಜೊತೆ ಹೊಸ ವಿಮಾನವೊಂದರ ಪ್ರಯೋಗಾರ್ಥ ಹಾರಾಟ ನಡೆಸುತ್ತಿದ್ದಾಗ ಅಪಘಾತ ಸಂಭವಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೇಂದ್ರದ ಹುದ್ದೆಗಳಿಗೆ ಸೇರಲು ತ್ರಿಭಾಷಾ ಜ್ಞಾನ<br /> ಬೆಂಗಳೂರು, ಮಾ. 28– </strong>ಮೂರು ಮತ್ತು ಅದಕ್ಕಿಂತ ಮೇಲಿನ ದರ್ಜೆಯ ಕೇಂದ್ರದ ನೌಕರಿಗೆ ಸೇರಬಯಸುವವರಿಗೆ 3 ಭಾಷೆಗಳಲ್ಲಿ ಜ್ಞಾನವಿರಬೇಕೆಂದು ಗೊತ್ತು ಮಾಡಬೇಕೆಂದು ರಾಜ್ಯ ಸರಕಾರ ಕೇಂದ್ರಕ್ಕೆ ತಿಳಿಸಲಿದೆ.</p>.<p><strong>ಅಂಕ್ಟಾಡ್ ವಿಫಲ<br /> ನವದೆಹಲಿ, ಮಾ. 28– </strong>ದ್ವಿತೀಯ ‘ಅಂಕ್ಟಾಡ್’ ಸಮ್ಮೇಳನ ಬಹಳ ಪರಿಮಿತ ಪ್ರಗತಿ ಸಾಧಿಸಿದ್ದರೂ ಅದು ‘ವಿಫಲ’ಗೊಂಡಿದೆಯೆಂದು ಬ್ರೆಜಿಲ್ ನಿಯೋಗದ ನಾಯಕ ಹಾಗೂ 77 ರಾಷ್ಟ್ರಗಳ ತಂಡದ ಅಧ್ಯಕ್ಷ ಸಿಲ್ವೇರಾ ಇಂದು ಹೇಳಿದರು.</p>.<p><strong>ರಾಜ್ಯಸಭೆಗೆ ಮಲ್ಲಪ್ಪ, ಪುಟ್ಟಪ್ಪ, ಕೆಂಪರಾಜ್ ಮತ್ತು ಲಕ್ಷ್ಮಣಗೌಡ<br /> ಬೆಂಗಳೂರು, ಮಾ. 28–</strong> ಕಾಂಗ್ರೆಸ್ ಸ್ಪರ್ಧಿಗಳಾದ ಸರ್ವಶ್ರೀ ಕೊಲ್ಲೂರು ಮಲ್ಲಪ್ಪ, ಪಾಟೀಲ ಪುಟಪ್ಪ ಮತ್ತು ಜಿ.ಟಿ. ಕೆಂಪರಾಜ್ ಹಾಗೂ ವಿರೋಧ ಪಕ್ಷಗಳ ಬೆಂಬಲ ಪಡೆದಿದ್ದ ಶ್ರೀ ಯು.ಕೆ. ಲಕ್ಷ್ಮಣಗೌಡ ಅವರುಗಳು ರಾಜ್ಯಸಭೆಗೆ ಚುನಾಯಿತರಾಗಿದ್ದಾರೆ.</p>.<p>ವಿಧಾನಸಭಾ ಕ್ಷೇತ್ರದಿಂದ ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ಇಂದು ಮತದಾನ ನಡೆಯಿತು.</p>.<p><strong>ವಿಮಾನ ಅಪಘಾತ: ಪ್ರಥಮ ಗಗನಯಾತ್ರಿ ಗಗಾರಿನ್ ಸಾವು<br /> ಮಾಸ್ಕೋ, ಮಾ. 28– </strong>ಪ್ರಪಂಚದ ಪ್ರಥಮ ಗಗನಯಾತ್ರಿ ಯೂರಿ ಗಗಾರಿನ್ ಅವರು ನಿನ್ನೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವಿಗೀಡಾದರೆಂದು ಮಾಸ್ಕೋ ರೇಡಿಯೋ ಇಂದು ಪ್ರಕಟಿಸಿತು. ಎಂಜಿನಿಯರ್–ಕರ್ನಲ್ ವ್ಲಾಡಿಮಿರ್ ಸೆರ್ಜೆವಿಕ್ ಸೆಯೊಗಿನ್ ಎಂಬುವರ ಜೊತೆ ಹೊಸ ವಿಮಾನವೊಂದರ ಪ್ರಯೋಗಾರ್ಥ ಹಾರಾಟ ನಡೆಸುತ್ತಿದ್ದಾಗ ಅಪಘಾತ ಸಂಭವಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>