<p>ಬೆಳಕವಾಡಿ: ಸಮೀಪದ ಕಿರಗಸೂರು ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ 7.7 ಅಡಿ ಎತ್ತರದ ಹುಲಿವಾಹನ ಸಮೇತ ಮಹದೇಶ್ವರಸ್ವಾಮಿ ವಿಗ್ರಹ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಪೂಜೆ ಕೈಂಕರ್ಯಗಳು ಸೋಮವಾರ ಜರುಗಿದವು.</p>.<p>ಬೆಳಿಗ್ಗೆ ದೇಗುಲದಲ್ಲಿ ಮಹಾಗಣಪತಿ ಪೂಜೆ, ಸ್ವಸ್ತಿವಾಚನ, ಪುಣ್ಯಾಹ, ಸ್ಥಳ ಶುದ್ದಿ, ಗಂಗಾ ಪೂಜೆ, ಗಣಪತಿ ಹೋಮ, ವಾಸ್ತುಹೋಮ, ನವಗ್ರಹ ಹೋಮ, ಹವನ, ಲಿಂಗನ್ಯಾಸ ಮತ್ತು ಕಾವೇರಿ ನದಿ ತೀರದಿಂದ ಹಾಲರವಿ ಸೇವೆಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು.</p>.<p>ನಂತರ ಹುಲಿವಾಹನ ಸಮೇತ ಮಹದೇಶ್ವರಸ್ವಾಮಿ ದೇವರ ಮೂರ್ತಿ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ. ವಿವಿಧ ಹೂವುಗಳಿಂದ ಅಲಂಕಾರ, ಧೂಪ, ದೀಪ, ನೈವೇದ್ಯ, ಮಹಾಮಂಗಳಾರತಿ ಪೂಜೆ ಕೈಂಕರ್ಯಗಳನ್ನು ಮಂಡ್ಯದ ವೇದಮೂರ್ತಿ ಕೃಷ್ಣಾಚಾರ್ಯ ಹಾಗೂ ತಂಡದವರು ನೆರವೇರಿಸಿದರು.</p>.<p>ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ತೀರ್ಥ ಪ್ರಸಾದ ವಿನಿಯೋಗವನ್ನು ಅರ್ಚಕ ದೇವರಾಜು ಮಾಡಿದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಗ್ರಾಮಸ್ಥರು, ಮುಖಂಡರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳಕವಾಡಿ: ಸಮೀಪದ ಕಿರಗಸೂರು ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ 7.7 ಅಡಿ ಎತ್ತರದ ಹುಲಿವಾಹನ ಸಮೇತ ಮಹದೇಶ್ವರಸ್ವಾಮಿ ವಿಗ್ರಹ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಪೂಜೆ ಕೈಂಕರ್ಯಗಳು ಸೋಮವಾರ ಜರುಗಿದವು.</p>.<p>ಬೆಳಿಗ್ಗೆ ದೇಗುಲದಲ್ಲಿ ಮಹಾಗಣಪತಿ ಪೂಜೆ, ಸ್ವಸ್ತಿವಾಚನ, ಪುಣ್ಯಾಹ, ಸ್ಥಳ ಶುದ್ದಿ, ಗಂಗಾ ಪೂಜೆ, ಗಣಪತಿ ಹೋಮ, ವಾಸ್ತುಹೋಮ, ನವಗ್ರಹ ಹೋಮ, ಹವನ, ಲಿಂಗನ್ಯಾಸ ಮತ್ತು ಕಾವೇರಿ ನದಿ ತೀರದಿಂದ ಹಾಲರವಿ ಸೇವೆಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು.</p>.<p>ನಂತರ ಹುಲಿವಾಹನ ಸಮೇತ ಮಹದೇಶ್ವರಸ್ವಾಮಿ ದೇವರ ಮೂರ್ತಿ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ. ವಿವಿಧ ಹೂವುಗಳಿಂದ ಅಲಂಕಾರ, ಧೂಪ, ದೀಪ, ನೈವೇದ್ಯ, ಮಹಾಮಂಗಳಾರತಿ ಪೂಜೆ ಕೈಂಕರ್ಯಗಳನ್ನು ಮಂಡ್ಯದ ವೇದಮೂರ್ತಿ ಕೃಷ್ಣಾಚಾರ್ಯ ಹಾಗೂ ತಂಡದವರು ನೆರವೇರಿಸಿದರು.</p>.<p>ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ತೀರ್ಥ ಪ್ರಸಾದ ವಿನಿಯೋಗವನ್ನು ಅರ್ಚಕ ದೇವರಾಜು ಮಾಡಿದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಗ್ರಾಮಸ್ಥರು, ಮುಖಂಡರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>