<p><strong>ಕೆ.ಆರ್.ಪೇಟೆ:</strong> ಪಟ್ಟಣದಲ್ಲಿ ಹೊರವಲಯದ ಬಂಡ ಬೋಯನಹಳ್ಳಿ ಗ್ರಾಮದಲ್ಲಿರುವ ಮಲೆ ಮಹದೇಶ್ವರ ಸ್ವಾಮಿಯವರ ಶಿವ ಪಾರ್ವತಿ ಹೂವಿನ ಪಲ್ಲಕ್ಕಿ ರಥೋತ್ಸವವು ಮಹಾಶಿವರಾತ್ರಿಯ ಅಂಗವಾಗಿ ಜಾನಪದ ಕಲಾ ತಂಡಗಳ ಮೆರವಣಿಗೆ ಯೊಂದಿಗೆ ರಾಜಬೀದಿಗಳಲ್ಲಿ ಸಂಭ್ರಮದಿಂದ ನಡೆಯಿತು.</p>.<p>ಭಕ್ತರಿಗೆ ದಾಸೋಹಕ್ಕಾಗಿ ಸಂಪ್ರದಾಯದಂತೆ ಕ್ಷೇತ್ರದ ಮುಖ್ಯಸ್ಥ ಪ್ರಕಾಶ್ ಗುರೂಜಿ ಮನೆ ಮನೆಗಳಿಗೆ ತೆರಳಿ ದವಸ ಧಾನ್ಯಗಳನ್ನು ಸಂಗ್ರಹಿಸಿ ಮಾತನಾಡಿ, ‘ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಲು ಸಾಧ್ಯವಾಗದ ಭಕ್ತರು ಕ್ಷೇತ್ರಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ಸಂಕಲ್ಪ ಮಾಡಿದರೆ ಕಷ್ಟ ಕಾರ್ಪಣ್ಯಗಳು ಸಂಪೂರ್ಣವಾಗಿ ಬಗೆಹರಿಯಲಿದೆ’ ಎಂದರು. ಇದೇ ಸಂದರ್ಭದಲ್ಲಿ ಹಲವು ಮಕ್ಕಳಿಗೆ ಹೆಸರಿಟ್ಟು ಆಶೀರ್ವದಿಸಲಾಯಿತು ನೂರಾರು ಭಕ್ತರು ಭಾಗವಹಿಸಿದ್ದರು.</p>
<p><strong>ಕೆ.ಆರ್.ಪೇಟೆ:</strong> ಪಟ್ಟಣದಲ್ಲಿ ಹೊರವಲಯದ ಬಂಡ ಬೋಯನಹಳ್ಳಿ ಗ್ರಾಮದಲ್ಲಿರುವ ಮಲೆ ಮಹದೇಶ್ವರ ಸ್ವಾಮಿಯವರ ಶಿವ ಪಾರ್ವತಿ ಹೂವಿನ ಪಲ್ಲಕ್ಕಿ ರಥೋತ್ಸವವು ಮಹಾಶಿವರಾತ್ರಿಯ ಅಂಗವಾಗಿ ಜಾನಪದ ಕಲಾ ತಂಡಗಳ ಮೆರವಣಿಗೆ ಯೊಂದಿಗೆ ರಾಜಬೀದಿಗಳಲ್ಲಿ ಸಂಭ್ರಮದಿಂದ ನಡೆಯಿತು.</p>.<p>ಭಕ್ತರಿಗೆ ದಾಸೋಹಕ್ಕಾಗಿ ಸಂಪ್ರದಾಯದಂತೆ ಕ್ಷೇತ್ರದ ಮುಖ್ಯಸ್ಥ ಪ್ರಕಾಶ್ ಗುರೂಜಿ ಮನೆ ಮನೆಗಳಿಗೆ ತೆರಳಿ ದವಸ ಧಾನ್ಯಗಳನ್ನು ಸಂಗ್ರಹಿಸಿ ಮಾತನಾಡಿ, ‘ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಲು ಸಾಧ್ಯವಾಗದ ಭಕ್ತರು ಕ್ಷೇತ್ರಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ಸಂಕಲ್ಪ ಮಾಡಿದರೆ ಕಷ್ಟ ಕಾರ್ಪಣ್ಯಗಳು ಸಂಪೂರ್ಣವಾಗಿ ಬಗೆಹರಿಯಲಿದೆ’ ಎಂದರು. ಇದೇ ಸಂದರ್ಭದಲ್ಲಿ ಹಲವು ಮಕ್ಕಳಿಗೆ ಹೆಸರಿಟ್ಟು ಆಶೀರ್ವದಿಸಲಾಯಿತು ನೂರಾರು ಭಕ್ತರು ಭಾಗವಹಿಸಿದ್ದರು.</p>