ಶುಕ್ರವಾರ, 28 ನವೆಂಬರ್ 2025
×
ADVERTISEMENT
ADVERTISEMENT

ಇತಿಹಾಸಕ್ಕೆ ಕನ್ನಡಿಯಾದ ‘ದಾಖಲೆ ಪ್ರದರ್ಶನ’:ಮನಸೆಳೆದ ಮೈಸೂರು ಅರಸರ ಛಾಯಾಚಿತ್ರಗಳು

Published : 28 ನವೆಂಬರ್ 2025, 4:57 IST
Last Updated : 28 ನವೆಂಬರ್ 2025, 4:57 IST
ಫಾಲೋ ಮಾಡಿ
Comments
ಪ್ರೊ.ಕೆ. ಶಿವಚಿತ್ತಪ್ಪ 
ಪ್ರೊ.ಕೆ. ಶಿವಚಿತ್ತಪ್ಪ 
ಇತಿಹಾಸ ಕೇವಲ ಮರಣ ಹೊಂದಿದವರ ಕಥೆಯೆಂದು ಭಾವಿಸದೆ ಜೀವಂತ ಪ್ರವಾಸ ಎಂದು ತಿಳಿಯಿರಿ. ದಾಖಲೆ ಕಳೆದುಕೊಂಡರೆ ಇತಿಹಾಸ ಕಳೆದುಕೊಂಡಂತೆ ಗವಿಸಿದ್ದಯ್ಯ.
ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ನಿರ್ದೇಶಕ
‘ಇತಿಹಾಸವನ್ನು ಉಳಿಸಲು ದಾಖಲೆಗಳು ಬಹಳ
‘ದಾಖಲೆಗಳು ಇತಿಹಾಸದ ಮೂಲಾಧಾರ’ ಮುಖ್ಯವಾಗಿದ್ದು ದಾಖಲೆಗಳು ಇಲ್ಲವಾದರೆ ಇತಿಹಾಸವನ್ನು ತಿಳಿಯಲು ಸಾಧ್ಯವಾಗುವುದಿಲ್ಲ’ ಎಂದು ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ. ಶಿವಚಿತ್ತಪ್ಪ ಹೇಳಿದರು. ಭಾರತ ದೇಶದ ಸಂಸ್ಕೃತಿ ಇತಿಹಾಸ ಸಂಪ್ರದಾಯ ಬಹಳ ವಿಶಿಷ್ಟವಾದದ್ದು ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ಸಂಸ್ಕೃತಿಯಲ್ಲಿ ಮೈಸೂರಿನ ಸಂಸ್ಕೃತಿ ಪ್ರಸಿದ್ಧವಾದದ್ದು. ಆದರೆ ಪ್ರಸ್ತುತ ಪೀಳಿಗೆಗಳು ತಮ್ಮ ದೇಶದ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿ ಆಚಾರ-ವಿಚಾರದ ಕಡೆಗೆ ಗಮನ ಗಮನ ಹರಿಸುತ್ತಿರುವುದು ನಿಜಕ್ಕೂ ವಿಪರ್ಯಾಸ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರದರ್ಶನದಲ್ಲೂ ಟೋಲ್‌ ಸದ್ದು!
ಕೆಆರ್‌ಎಸ್‌ ಬೃಂದಾನವಕ್ಕೆ ಹೋಗುವ ಪ್ರವಾಸಿಗರಿಂದ ಅಕ್ರಮವಾಗಿ ಟೋಲ್‌ ಸಂಗ್ರಹಿಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ವಿಶೇಷವೆಂದರೆ 1934ರಲ್ಲೇ ಟೋಲ್‌ ಗೇಟ್‌ ದರ ಹೆಚ್ಚಿಸಿರುವ ಸಂಬಂಧದ ಆದೇಶ ಪ್ರತಿ ಪ್ರದರ್ಶನದಲ್ಲಿ ಕಂಡುಬಂದಿತು.  ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಬ್ರಿಡ್ಜ್‌ ನಲ್ಲಿ ಪ್ರಯಾಣಿಸುವ ವಾಹನಗಳಿಗೆ 1929ರಲ್ಲೇ ಟೋಲ್‌ ದರ ನಿಗದಿಪಡಿಸಿದ್ದ ದಾಖಲೆಯೂ ಈ ಸರ್ಕಾರಿ ಮಹಿಳಾ ಕಾಲೇಜಿನ ಪ್ರದರ್ಶನದಲ್ಲಿ ಇರುವುದು ಮತ್ತೊಂದು ವಿಶೇಷ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT