ಪಾಲಹಳ್ಳಿ ಗ್ರಾಮದಲ್ಲಿ ಜಬೀನಾ ಎಂಬವರ ಮನೆಯ ಮೇಲೆ ಶನಿವಾರ ರಾತ್ರಿ ತೆಂಗಿನ ಮರ ಬಿದ್ದು, ಮನೆಯ ಚಾವಣಿಗೆ ಹಾನಿಯಾಗಿದೆ. ಮರ ಬಿದ್ದ ರಭಸಕ್ಕೆ ತೆಂಗಿನ ಕಾಯಿಗಳು ಮನೆಯ ಒಳಗೂ ಚೆಲ್ಲಾಡಿವೆ. ಮನೆಯ ಒಳಗಿದ್ದ ಪಾತ್ರೆ, ಬಟ್ಟೆ ಇತರ ವಸ್ತುಗಳು ಹಾಳಾಗಿವೆ. ಮಹದೇವಪುರ ತೋಟದ ಸರ್ಕಲ್ ಬಳಿ ಬೃಹತ್ ಅರಳಿ ಮರವೊಂದು ಶನಿವಾರ ರಾತ್ರಿ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದರಿಂದ ಭಾನುವಾರ ಶ್ರೀರಂಗಪಟ್ಟಣ– ಬನ್ನೂರು ಮಾರ್ಗದ ಸಂಚಾರ ಅಸ್ತವ್ಯಸ್ತಗೊಂಡಿತ್ತು.