ಮಂಡ್ಯ: ಇಂದು ಮೇಲುಕೋಟೆಯಲ್ಲಿ ಸರಳ ವೈರಮುಡಿ ಉತ್ಸವ ನಡೆಯಲಿದ್ದು, ಅದಕ್ಕೂ ಮುನ್ನ ತಿರುವಾಭರಣ ಪೆಟ್ಟಿಗೆಗೆ ಮಂಡ್ಯದ ಲಕ್ಷ್ಮಿಜನಾರ್ಧನ ದೇವಾಲಯದಲ್ಲಿ ಪೂಜೆ ನೆರವೇರಿಸಲಾಯಿತು.
ಜಿಲ್ಲಾ ಖಜಾನೆಯಲ್ಲಿದ್ದ ಪೆಟ್ಟಿಗೆಯನ್ನು ಮೆರವಣಿಗೆ ಮೂಲಕ ಮೇಲುಕೋಟಿಗೆ ಕೊಂಡೊಯ್ಯಲಾಗುತ್ತದೆ. ಮಾರ್ಗದಲ್ಲಿ ಸಿಗುವ ವೈರಮುಡಿ ಮಂಟಪಗಳಲ್ಲಿ ಪೆಟ್ಟಿಗೆ ಇಟ್ಟು ಪೂಜೆ ಸಲ್ಲಿಸಲಾಗುತ್ತದೆ.
ಸ್ಥಳೀಯ ಗ್ರಾಮಸ್ಥರು ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಬಿಗಿ ಪೊಲೀಸ್ ಭದ್ರತೆ ನಡುವೆ ವಜ್ರಖಚಿತ ಕಿರೀಟದ ಆಭರಣ ಪೆಟ್ಟಿಗೆ ಕೊಂಡೊಯ್ಯಲಾಗುತ್ತಿದೆ.
ಸಂಜೆ ಮೇಲುಕೋಟೆ ತಲುಪಿದ ನಂತರ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ತಿರುವಾಭರಣ ಪೆಟ್ಟಿಗೆ ತೆರೆದು ಕಿರೀಟ ಸಿದ್ಧಗೊಳಿಸಿ ಚೆಲುವನಾರಾಯಣಸ್ವಾಮಿ ಉತ್ಸವ ಮೂರ್ತಿಗೆ ತೊಡಿಸಲಾಗುತ್ತದೆ.