<p><strong>ಮೇಲುಕೋಟೆ</strong>: ಬೆಂಗಳೂರಿನಿಂದ ಊರಿಗೆ ಬಂದು ನಾಪತ್ತೆಯಾಗಿದ್ದ ವೃದ್ಧರೊಬ್ಬರ ಶವ ಇಲ್ಲಿನ ದಳವಾಯಿ ಕೆರೆಯಲ್ಲಿ ಪತ್ತೆಯಾಗಿದೆ.</p>.<p>ಮೃತರನ್ನು ಬೆಂಗಳೂರಿನ ಬನ್ನೇರಘಟ್ಟ ನಿವಾಸಿ ರಂಗಸ್ವಾಮಿ (58) ಎಂದು ಗುರುತಿಸಲಾಗಿದೆ. ತಂದೆ– ತಾಯಿ ಹುಟ್ಟೂರಾದ ಮೇಲುಕೋಟೆಗೆ ಮೂರು ದಿನದ ಹಿಂದೆ ಬಂದಿದ್ದರು. ಆದರೆ, ಅತ್ತ ಬೆಂಗಳೂರಿಗೂ ಹೋಗದೆ ಇಲ್ಲಿನ ಸಂಬಂಧಿಕರ ಮನೆಗೂ ಬಾರದೆ ಕಾಣೆಯಾಗಿದ್ದರು.</p>.<p>ಈ ಕುರಿತು ಅವರ ಮಗ ಮಿಥುನ್ ರಾಜ್ ಮೇಲುಕೋಟೆ ಠಾಣೆಯಲ್ಲಿ ತಂದೆ ಕಾಣೆಯಾಗಿದ್ದಾರೆ ಎಂದು ಪ್ರಕರಣ ದಾಖಲಿಸಿದರು.</p>.<p>ಇಲ್ಲಿನ ಪ್ರಸಿದ್ಧ ದಳವಾಯಿ ಕೆರೆಯ ಮಂಟಪದ ಬಳಿ ಈ ವ್ಯಕ್ತಿಯ ಬಟ್ಟೆ ಚಪ್ಪಲಿ ಪತ್ತೆಯಾಗಿದ್ದರಿಂದ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿದಾಗ ಬಳಿಕ ಕೆರೆಯಲ್ಲಿ ಶವ ಪತ್ತೆಯಾಗಿದೆ.</p>.<p>ಈ ಸಂಬಂಧ ಮೇಲುಕೋಟೆ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೇಲುಕೋಟೆ</strong>: ಬೆಂಗಳೂರಿನಿಂದ ಊರಿಗೆ ಬಂದು ನಾಪತ್ತೆಯಾಗಿದ್ದ ವೃದ್ಧರೊಬ್ಬರ ಶವ ಇಲ್ಲಿನ ದಳವಾಯಿ ಕೆರೆಯಲ್ಲಿ ಪತ್ತೆಯಾಗಿದೆ.</p>.<p>ಮೃತರನ್ನು ಬೆಂಗಳೂರಿನ ಬನ್ನೇರಘಟ್ಟ ನಿವಾಸಿ ರಂಗಸ್ವಾಮಿ (58) ಎಂದು ಗುರುತಿಸಲಾಗಿದೆ. ತಂದೆ– ತಾಯಿ ಹುಟ್ಟೂರಾದ ಮೇಲುಕೋಟೆಗೆ ಮೂರು ದಿನದ ಹಿಂದೆ ಬಂದಿದ್ದರು. ಆದರೆ, ಅತ್ತ ಬೆಂಗಳೂರಿಗೂ ಹೋಗದೆ ಇಲ್ಲಿನ ಸಂಬಂಧಿಕರ ಮನೆಗೂ ಬಾರದೆ ಕಾಣೆಯಾಗಿದ್ದರು.</p>.<p>ಈ ಕುರಿತು ಅವರ ಮಗ ಮಿಥುನ್ ರಾಜ್ ಮೇಲುಕೋಟೆ ಠಾಣೆಯಲ್ಲಿ ತಂದೆ ಕಾಣೆಯಾಗಿದ್ದಾರೆ ಎಂದು ಪ್ರಕರಣ ದಾಖಲಿಸಿದರು.</p>.<p>ಇಲ್ಲಿನ ಪ್ರಸಿದ್ಧ ದಳವಾಯಿ ಕೆರೆಯ ಮಂಟಪದ ಬಳಿ ಈ ವ್ಯಕ್ತಿಯ ಬಟ್ಟೆ ಚಪ್ಪಲಿ ಪತ್ತೆಯಾಗಿದ್ದರಿಂದ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿದಾಗ ಬಳಿಕ ಕೆರೆಯಲ್ಲಿ ಶವ ಪತ್ತೆಯಾಗಿದೆ.</p>.<p>ಈ ಸಂಬಂಧ ಮೇಲುಕೋಟೆ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>