<p><strong>ಶೃಂಗೇರಿ:</strong> ಇಲ್ಲಿನ ಪವಿತ್ರ ಧಾರ್ಮಿಕ ಕ್ಷೇತ್ರ ಶೃಂಗೇರಿಯ ಜೀವನದಿ ತುಂಗಾ ನದಿಗೆ ಪಟ್ಟಣದಿಂದ ತ್ಯಾಜ್ಯದ ನೀರು ಮಿಶ್ರಣಗೊಂಡು ಕಲುಷಿತವಾಗುತ್ತಿದೆ. ಕಸವನ್ನು ನದಿಯ ಬಳಿ ಬಿಸಾಡುತ್ತಿರುವುದರಿಂದ ಕಲುಷಿತಗೊಳ್ಳುತ್ತಿದೆ.</p>.<p>ವರ್ಷಕ್ಕೆ ಸುಮಾರು 30 ರಿಂದ 40 ಲಕ್ಷದಷ್ಟು ಪ್ರವಾಸಿಗರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು, ತುಂಗೆ ಹೊಳೆಯಲ್ಲಿ ಗಮನ ಸೆಳೆಯುವ ಮೀನುಗಳಿಗೆ ಮಂಡಕ್ಕಿ ಚೆಲ್ಲಿ ಅದರ ಪ್ಲಾಸ್ಟಿಕ್ ಕವರ್ ಅನ್ನು ಅಲ್ಲಿಯೇ ಬಿಟ್ಟು ಹೋಗುತ್ತಿರುವುದರಿಂದ ನದಿ ಮಲಿನಗೊಳ್ಳುತ್ತಿದೆ. ಈ ಕುರಿತು ಶಾರದ ಮಠ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದರೂ ಏನು ಪ್ರಯೋಜನವಾಗಿಲ್ಲ.</p>.<p>ಶಾರದ ಮಠದ ಹಾಗೂ ಪಟ್ಟಣ ಪಂಚಾಯಿತಿಯಿಂದ ₹5.75 ಲಕ್ಷ ವೆಚ್ಚದಲ್ಲಿ ಸುಲಭ ಶೌಚಾಲಯ ಹಾಗೂ ಸ್ನಾನಘಟ್ಟಗಳನ್ನು ನಿರ್ಮಿಸಿದ್ದರೂ ಭಾರತೀತೀರ್ಥ ಸೇತುವೆಯಲ್ಲಿ ಬಟ್ಟೆ ಒಣಗಿಸುವ, ತಲೆಬಾಚಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಆದರೆ ಸ್ಥಳೀಯ ಆಡಳಿತ ಇವುಗಳನ್ನು ನಿಯಂತ್ರಿಸುವ ಕೆಲಸ ಮಾಡಿಲ್ಲ. ಎಂಬುದು ಸ್ಥಳೀಯರ ಆರೋಪ.</p>.<p>ಗಾಂಧೀ ಮೈದಾನದಲ್ಲಿ ‘ಕಸವನ್ನು ಹಾಕಬೇಡಿ’ ಎಂದರೂ ಪ್ರತಿನಿತ್ಯ ಕಸ ಬೀಳುತ್ತಲೇ ಇದೆ. ಮಲೆನಾಡಿನಲ್ಲಿ ಕೂಲಿ ಕಾರ್ಮಿಕರ ಕೊರತೆ ಇದ್ದು, ಬಯಲು ಸೀಮೆಯಿಂದ ಶೃಂಗೇರಿಗೆ ಕಾರ್ಮಿಕರು ಬರುತ್ತಿದ್ದು, ಬಾಡಿಗೆ ಮನೆಯಲ್ಲಿ ಇಲ್ಲೆ ನೆರೆಯೂರಿದ್ದಾರೆ. ತುಂಗಾನದಿಯ ಸಮೀಪವಿರುವ ಬಯಲಿನಲ್ಲಿಯೇ ಮಲ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.</p>.<p>ಪಟ್ಟಣ ಪಂಚಾಯಿತಿ ಹಲವು ಬಾರಿ ಪೋಲಿಸರ ಸಹಾಯ ಪಡೆದು ಅವರಿಗೆ ಎಚ್ಚರಿಕೆ ನೀಡಿದರೂ ಪ್ರಯೋಜನವಿಲ್ಲ. ಬಾಡಿಗೆ ನೀಡಿದವರ ಮನೆಯಲ್ಲಿ ಶೌಚಾಲಯ ವ್ಯವಸ್ಥೆ ಇದ್ದರೂ ಅದನ್ನು ಬಳಸುತ್ತಿಲ್ಲ. ಗಾಂಧೀ ಮೈದಾನದಲ್ಲಿ ಸುಲಭ ಶೌಚಾಲಯವಿದ್ದರೂ ಯಾರೂ ಬರುವುದಿಲ್ಲ ಎಂಬುದು ಸ್ಥಳೀಯರ ದೂರು.</p>.<p>‘ಪಟ್ಟಣ ಪಂಚಾಯಿತಿ ವತಿಯಿಂದ ಇಂತಹವರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆಗ ತುಂಗೆ ಯಾವ ಗೊಂದಲವಿಲ್ಲದೇ ಪ್ರಶಾಂತಳಾಗಿ ಹರಿಯಬಲ್ಲಳು’ ಎಂಬುದು ಪ್ರಜ್ಞಾವಂತ ನಾಗರೀಕರ ಅನಿಸಿಕೆ.</p>.<p><strong>ಅಂಕಿ ಅಂಶ</strong></p>.<p>2.30 ಲಕ್ಷ ಗ್ಯಾಲನ್ ನೀರನ್ನು ಶೃಂಗೇರಿಗೆ ಪ್ರತಿನಿತ್ಯ ಪೂರೈಕೆ ಮಾಡಲಾಗುತ್ತಿದೆ.</p>.<p>135 ಲೀಟರ್</p>.<p>ಒಂದು ಮನೆಗೆ ಬೇಕಾಗುವ ನೀರಿನ ಪ್ರಮಾಣ.</p>.<p><em><strong>ರಾಘವೇಂದ್ರ</strong></em></p>.<p><strong>ರಾಜ್ಯ ಸರ್ಕಾರದಲ್ಲಿ ಅನುದಾನದ ಕೊರತೆ</strong></p>.<p>ತುಂಗಾನದಿಗೆ ಕೊಳಚೆ ನೀರು ಹೋಗದಂತೆ ಎಸ್.ಟಿ.ಪಿ ಮಾದರಿಯಲ್ಲಿ ನಾಲ್ಕಾರು ಸಣ್ಣ ಘಟಕವನ್ನು ನಿರ್ಮಿಸಿ ತುಂಗಾನದಿಯ ನೀರನ್ನು ಶುದ್ಧೀಕರಿಸುವ ಯೋಜನೆಗೆ ಅತೀ ಶೀಘ್ರದಲ್ಲಿ ಚಾಲನೆಗೆ ಸರ್ವೆ ಪೂರ್ಣಗೊಂಡಿದ್ದು , ರಾಜ್ಯ ಸರ್ಕಾರದಲ್ಲಿ ಅನುದಾನದ ಕೊರತೆ ಇರುವುದರಿಂದ ನಾವು ವಿವಿಧ ಇಲಾಖೆಗಳಿಂದ ಅನುದಾನವನ್ನು ತರಲು ಪ್ರಯತ್ನಿಸುತ್ತಿದ್ದೇವೆ. ತುಂಗಾನದಿಯ ನೀರಿನ ಶುದ್ಧತೆಯ ಬಗ್ಗೆ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ. ಸಾರ್ವಜನಿಕರು ನಮ್ಮ ಜತೆ ಕೈಜೋಡಿಸಬೇಕು.<br /> <strong>ಡಾ. ಲಕ್ಷ್ಮೀ ಎನ್ ಪ್ರಸಾದ್,</strong> ಅಧ್ಯಕ್ಷರು. ಪಟ್ಟಣ ಪಂಚಾಯಿತಿ</p>.<p><strong>ಪ್ರವಾಸಿಗರ ಚಟುವಟಿಕೆಗೆ ಕಡಿವಾಣ ಅಗತ್ಯ</strong></p>.<p>‘ಹೊಳೆಯಲ್ಲಿ ಈಜಿದರೆ ಅಪಾಯ’ ಎಂಬ ಎಚ್ಚರಿಕೆ ಫಲಕ ಹಾಕಿದ್ದರೂ ಪ್ರವಾಸಿಗರು ಈಜುತ್ತಾರೆ. ಹಲವು ಪ್ರವಾಸಿಗರು ತುಂಗಾನದಿಯಲ್ಲಿಯೇ ಸ್ನಾನವನ್ನು ಪೂರೈಸಿಕೊಂಡು ದೇವಸ್ಥಾನಕ್ಕೆ ತೆರಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶೃಂಗೇರಿ:</strong> ಇಲ್ಲಿನ ಪವಿತ್ರ ಧಾರ್ಮಿಕ ಕ್ಷೇತ್ರ ಶೃಂಗೇರಿಯ ಜೀವನದಿ ತುಂಗಾ ನದಿಗೆ ಪಟ್ಟಣದಿಂದ ತ್ಯಾಜ್ಯದ ನೀರು ಮಿಶ್ರಣಗೊಂಡು ಕಲುಷಿತವಾಗುತ್ತಿದೆ. ಕಸವನ್ನು ನದಿಯ ಬಳಿ ಬಿಸಾಡುತ್ತಿರುವುದರಿಂದ ಕಲುಷಿತಗೊಳ್ಳುತ್ತಿದೆ.</p>.<p>ವರ್ಷಕ್ಕೆ ಸುಮಾರು 30 ರಿಂದ 40 ಲಕ್ಷದಷ್ಟು ಪ್ರವಾಸಿಗರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು, ತುಂಗೆ ಹೊಳೆಯಲ್ಲಿ ಗಮನ ಸೆಳೆಯುವ ಮೀನುಗಳಿಗೆ ಮಂಡಕ್ಕಿ ಚೆಲ್ಲಿ ಅದರ ಪ್ಲಾಸ್ಟಿಕ್ ಕವರ್ ಅನ್ನು ಅಲ್ಲಿಯೇ ಬಿಟ್ಟು ಹೋಗುತ್ತಿರುವುದರಿಂದ ನದಿ ಮಲಿನಗೊಳ್ಳುತ್ತಿದೆ. ಈ ಕುರಿತು ಶಾರದ ಮಠ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದರೂ ಏನು ಪ್ರಯೋಜನವಾಗಿಲ್ಲ.</p>.<p>ಶಾರದ ಮಠದ ಹಾಗೂ ಪಟ್ಟಣ ಪಂಚಾಯಿತಿಯಿಂದ ₹5.75 ಲಕ್ಷ ವೆಚ್ಚದಲ್ಲಿ ಸುಲಭ ಶೌಚಾಲಯ ಹಾಗೂ ಸ್ನಾನಘಟ್ಟಗಳನ್ನು ನಿರ್ಮಿಸಿದ್ದರೂ ಭಾರತೀತೀರ್ಥ ಸೇತುವೆಯಲ್ಲಿ ಬಟ್ಟೆ ಒಣಗಿಸುವ, ತಲೆಬಾಚಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಆದರೆ ಸ್ಥಳೀಯ ಆಡಳಿತ ಇವುಗಳನ್ನು ನಿಯಂತ್ರಿಸುವ ಕೆಲಸ ಮಾಡಿಲ್ಲ. ಎಂಬುದು ಸ್ಥಳೀಯರ ಆರೋಪ.</p>.<p>ಗಾಂಧೀ ಮೈದಾನದಲ್ಲಿ ‘ಕಸವನ್ನು ಹಾಕಬೇಡಿ’ ಎಂದರೂ ಪ್ರತಿನಿತ್ಯ ಕಸ ಬೀಳುತ್ತಲೇ ಇದೆ. ಮಲೆನಾಡಿನಲ್ಲಿ ಕೂಲಿ ಕಾರ್ಮಿಕರ ಕೊರತೆ ಇದ್ದು, ಬಯಲು ಸೀಮೆಯಿಂದ ಶೃಂಗೇರಿಗೆ ಕಾರ್ಮಿಕರು ಬರುತ್ತಿದ್ದು, ಬಾಡಿಗೆ ಮನೆಯಲ್ಲಿ ಇಲ್ಲೆ ನೆರೆಯೂರಿದ್ದಾರೆ. ತುಂಗಾನದಿಯ ಸಮೀಪವಿರುವ ಬಯಲಿನಲ್ಲಿಯೇ ಮಲ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.</p>.<p>ಪಟ್ಟಣ ಪಂಚಾಯಿತಿ ಹಲವು ಬಾರಿ ಪೋಲಿಸರ ಸಹಾಯ ಪಡೆದು ಅವರಿಗೆ ಎಚ್ಚರಿಕೆ ನೀಡಿದರೂ ಪ್ರಯೋಜನವಿಲ್ಲ. ಬಾಡಿಗೆ ನೀಡಿದವರ ಮನೆಯಲ್ಲಿ ಶೌಚಾಲಯ ವ್ಯವಸ್ಥೆ ಇದ್ದರೂ ಅದನ್ನು ಬಳಸುತ್ತಿಲ್ಲ. ಗಾಂಧೀ ಮೈದಾನದಲ್ಲಿ ಸುಲಭ ಶೌಚಾಲಯವಿದ್ದರೂ ಯಾರೂ ಬರುವುದಿಲ್ಲ ಎಂಬುದು ಸ್ಥಳೀಯರ ದೂರು.</p>.<p>‘ಪಟ್ಟಣ ಪಂಚಾಯಿತಿ ವತಿಯಿಂದ ಇಂತಹವರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆಗ ತುಂಗೆ ಯಾವ ಗೊಂದಲವಿಲ್ಲದೇ ಪ್ರಶಾಂತಳಾಗಿ ಹರಿಯಬಲ್ಲಳು’ ಎಂಬುದು ಪ್ರಜ್ಞಾವಂತ ನಾಗರೀಕರ ಅನಿಸಿಕೆ.</p>.<p><strong>ಅಂಕಿ ಅಂಶ</strong></p>.<p>2.30 ಲಕ್ಷ ಗ್ಯಾಲನ್ ನೀರನ್ನು ಶೃಂಗೇರಿಗೆ ಪ್ರತಿನಿತ್ಯ ಪೂರೈಕೆ ಮಾಡಲಾಗುತ್ತಿದೆ.</p>.<p>135 ಲೀಟರ್</p>.<p>ಒಂದು ಮನೆಗೆ ಬೇಕಾಗುವ ನೀರಿನ ಪ್ರಮಾಣ.</p>.<p><em><strong>ರಾಘವೇಂದ್ರ</strong></em></p>.<p><strong>ರಾಜ್ಯ ಸರ್ಕಾರದಲ್ಲಿ ಅನುದಾನದ ಕೊರತೆ</strong></p>.<p>ತುಂಗಾನದಿಗೆ ಕೊಳಚೆ ನೀರು ಹೋಗದಂತೆ ಎಸ್.ಟಿ.ಪಿ ಮಾದರಿಯಲ್ಲಿ ನಾಲ್ಕಾರು ಸಣ್ಣ ಘಟಕವನ್ನು ನಿರ್ಮಿಸಿ ತುಂಗಾನದಿಯ ನೀರನ್ನು ಶುದ್ಧೀಕರಿಸುವ ಯೋಜನೆಗೆ ಅತೀ ಶೀಘ್ರದಲ್ಲಿ ಚಾಲನೆಗೆ ಸರ್ವೆ ಪೂರ್ಣಗೊಂಡಿದ್ದು , ರಾಜ್ಯ ಸರ್ಕಾರದಲ್ಲಿ ಅನುದಾನದ ಕೊರತೆ ಇರುವುದರಿಂದ ನಾವು ವಿವಿಧ ಇಲಾಖೆಗಳಿಂದ ಅನುದಾನವನ್ನು ತರಲು ಪ್ರಯತ್ನಿಸುತ್ತಿದ್ದೇವೆ. ತುಂಗಾನದಿಯ ನೀರಿನ ಶುದ್ಧತೆಯ ಬಗ್ಗೆ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ. ಸಾರ್ವಜನಿಕರು ನಮ್ಮ ಜತೆ ಕೈಜೋಡಿಸಬೇಕು.<br /> <strong>ಡಾ. ಲಕ್ಷ್ಮೀ ಎನ್ ಪ್ರಸಾದ್,</strong> ಅಧ್ಯಕ್ಷರು. ಪಟ್ಟಣ ಪಂಚಾಯಿತಿ</p>.<p><strong>ಪ್ರವಾಸಿಗರ ಚಟುವಟಿಕೆಗೆ ಕಡಿವಾಣ ಅಗತ್ಯ</strong></p>.<p>‘ಹೊಳೆಯಲ್ಲಿ ಈಜಿದರೆ ಅಪಾಯ’ ಎಂಬ ಎಚ್ಚರಿಕೆ ಫಲಕ ಹಾಕಿದ್ದರೂ ಪ್ರವಾಸಿಗರು ಈಜುತ್ತಾರೆ. ಹಲವು ಪ್ರವಾಸಿಗರು ತುಂಗಾನದಿಯಲ್ಲಿಯೇ ಸ್ನಾನವನ್ನು ಪೂರೈಸಿಕೊಂಡು ದೇವಸ್ಥಾನಕ್ಕೆ ತೆರಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>