ದೇವಸ್ಥಾನದ ಬಳಿ ಇದ್ದ ಕೋತಿ ಯನ್ನು ಗ್ರಾಮಸ್ಥರು ಹನುಮಂತನ ಪ್ರತಿರೂಪ ಎಂದು ಭಾವಿಸಿ ಹಿಂದೂ ಸಂಪ್ರದಾಯದಂತೆ ಪೂಜೆಯನ್ನು ಸಲ್ಲಿಸಿ ಮಣ್ಣುಮಾಡಿದ್ದರು. ಅಲ್ಲದೇ ಹನ್ನೊಂದನೇ ದಿನದ ಉತ್ತರ ಕ್ರೀಯಾದಿ ಭೂ ಶಾಂತಿ ಕಾರ್ಯವನ್ನು ಗ್ರಾಮಸ್ಥರುಗಳು ಸಾರಂಗಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ನಡೆಸಿದರು.