ಸೂರ್ಯೋದಯಕ್ಕೂ ಮುನ್ನ ದೇವಾಲಯದಲ್ಲಿ ಪಾರಾಯಣದೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಪಂಚಕಲ್ಯಾಣಿ, ಅಕ್ಕ ತಂಗಿಕೊಳ, ರಾಯಗೋಪುರ, ಧನುಷ್ಕೋಟಿ, ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲೂ ಪ್ರವಾಸಿಗರಿಂದ ತುಂಬಿ ಹೋಗಿದ್ದವು. ಮೇಲುಕೋಟೆ ಪ್ರಾಥಮಿಕ ಸರ್ಕಾರಿ ಆಸ್ವತ್ರೆಯ ಎದುರು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.