<p><strong>ಭಾರತೀನಗರ</strong>: ಮಂಡ್ಯ ಜಿಲ್ಲೆಯ ಜನರು ಕಳೆದ ಚುನಾವಣೆಯಲ್ಲಿ ನನ್ನನ್ನು ಒಪ್ಪಿಕೊಳ್ಳಲಿಲ್ಲ. ಮುಂದಿನ ಚುನಾವಣೆಯಲ್ಲಿ ಒಪ್ಪುತ್ತಾರೆಂದುಕೊಂಡಿದ್ದು ಜನರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಜೆಡಿಎಸ್ ಯವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.</p>.<p>ಸಮೀಪದ ಯಡಗನಹಳ್ಳಿ ಗ್ರಾಮದಲ್ಲಿ ಮಂಚಮ್ಮ, ಮಾಸ್ತಮ್ಮ ದೇವಿಯರ ದೇವಾಲಯಗಳ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಮಂಡ್ಯ ಜಿಲ್ಲೆಯಿಂದ ಚುನಾವಣೆಗೆ ನಿಲ್ಲಲೇಬೇಕೆಂದು ಜನತೆ ಒತ್ತಾಯ ಮಾಡಿದರೆ ಅದು ದೇವರ ನಿರ್ಣಯ. ನಾನು ಸ್ಪರ್ಧೆ ಮಾಡಬೇಕೆಂದು ಬಯಸುವುದಿಲ್ಲ. ಮುಂದೊಂದು ದಿನ ನಮ್ಮ ಸರ್ಕಾರ ಬಂದಂತಹ ಸಂದರ್ಭದಲ್ಲಿ ಅಭಿವೃದ್ಧಿಗೆ ಪೂರಕವಾದ ನನ್ನದೇ ಆದ ಆಲೋಚನೆಗಳಿವೆ. ಭವಿಷ್ಯದ ಅಕ್ಕ-ತಂಗಿಯರು, ಅಣ್ಣ,ತಮ್ಮಂದಿರ ಜೀವನವನ್ನು ರೂಪಿಸುವ ಕರ್ತವ್ಯ ನನ್ನಂತಹ ಒಬ್ಬ ಯುವಕನ ಮೇಲಿದೆ. ಅದನ್ನು ನಾನು ಎಂದಿಗೂ ಮರೆಯುವುದಿಲ್ಲ. ಜಿಲ್ಲೆಯಲ್ಲಿ ಅತೀ ಹೆಚ್ಚು ಉದ್ಯೋಗ ಸೃಷ್ಟಿಸಬೇಕೆಂಬ ಮಹದಾಸೆ ನನ್ನದು ಎಂದು ಹೇಳಿದರು.</p>.<p>‘ಕಳೆದ ಚುನಾವಣೆಯಲ್ಲಿ ನಿಮ್ಮ ನಿಖಿಲ್ಕುಮಾರಸ್ವಾಮಿ ಅನಿರೀಕ್ಷಿತವಾಗಿ ಸೋತಿರಬಹುದು. ಆದರೆ ನನ್ನದು ಸೋಲಲ್ಲ. ನೀವು ಕೊಟ್ಟಿರುವಂತಹ ಪ್ರೀತಿಯ ಮುಂದೆ ಈ ಸೋಲು ಲೆಕ್ಕಕ್ಕಿಲ್ಲ. ಮುಂದಿನ ದಿನಗಳಲ್ಲಿ ಒಳ್ಳೆಯ ದಿನ ನಮಗೂ ಬಂದೆ ಬರುತ್ತದೆಂಬ ನಂಬಿಕೆಯಿಂದಿದ್ದೇನೆ’ ಎಂದು ಹೇಳಿದರು.</p>.<p>ಯಾವುದೇ ಸಮಸ್ಯೆಗಳು ಎದುರಾದರು ಮೆಟ್ಟಿ ನಿಲ್ಲುವಂತಹ ಶಕ್ತಿ ಇದ್ದರೆ ಅದು ಯುವ ಸಮುದಾಯಕ್ಕೆ ಮಾತ್ರ. ಯುವಕರು ಮನಸ್ಸು ಮಾಡಿದರೆ ದೇಶ, ರಾಜ್ಯವನ್ನು ಒಳ್ಳೆಯ ದಿಕ್ಕಿಗೆ ಕೊಂಡೊಯ್ಯುವ ಸಾಮರ್ಥ್ಯ ಇದೆ. ಕಳೆದ 20 ವರ್ಷಗಳ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರು. ಅಂದಿನಿಂದ ಇಂದಿನವರೆಗೂ ನಮ್ಮ ತಂದೆಯವರನ್ನು ಕೈಹಿಡಿದು ನಡೆಸುತ್ತಾ ಬಂದಿದ್ದೀರಿ. ಮದ್ದೂರು ಕ್ಷೇತ್ರದಿಂದ ಅತೀ ಹೆಚ್ಚು ಬಹುಮತದಿಂದ ಆಯ್ಕೆಗೊಳಿಸಿ ಕೇಂದ್ರದಲ್ಲಿ ದೊಡ್ಡ ಮಂತ್ರಿಸ್ಥಾನವನ್ನು ದೊರಕಿಸಿಕೊಡುವಂತೆ ಮಾಡಿರುವ ನಿಮ್ಮೆಲ್ಲರಿಗೂ ಆಭಾರಿಯಾಗಿರುತ್ತೇನೆ ಎಂದರು.</p>.<p>ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಮಾತನಾಡಿ, ಪೂರ್ವಿಕರು ಗ್ರಾಮಕ್ಕೆ ಒಳಿತು ಉಂಟುಮಾಡಲಿ ಎಂದು ದೇವಸ್ಥಾನವನ್ನು ನಿರ್ಮಾಣ ಮಾಡುತ್ತಿದ್ದರು. ಅದನ್ನು ಉಳಿಸಿಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಪೂರ್ವಿಕರು ಕಾಣುತ್ತಿದ್ದಂತಹ ದೈವಭಕ್ತಿಯನ್ನು ನಾವು ಕಾಣಲು ಸಾಧ್ಯವಿಲ್ಲ. ನಮ್ಮಲ್ಲಿ ಆತ್ಮಾವಲೋಕನ, ಚಿಂತನೆ ಇಲ್ಲದಿರುವುದೇ ಅದಕ್ಕೆ ಕಾರಣವಾಗಿದೆ. ಹಾಗಾಗಿ ನಾವು ಮಾಡುವ ಪ್ರತಿಯೊಂದು ಕೆಲಸಗಳು ಮತ್ತು ಮಾತುಗಳು ಸರಿ ಇದೆಯೇ ಎಂಬುವುದನ್ನು ಅವಲೋಕನ ಮಾಡಿಕೊಳ್ಳಬೇಕಿದೆ ಎಂದರು.</p>.<p>ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ವಲಾನಂದನಾಥಸ್ವಾಮಿ ಅವರು ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಯುವಕರು ದೇವರನ್ನು, ಹಿರಿಯರನ್ನು, ಧರ್ಮವನ್ನು, ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು. ಭಾರತೀಯ ಸನಾತನ ಸಂಸ್ಕೃತಿಯನ್ನು ಅನೇಕರು ಟೀಕಿಸುತ್ತಾರೆ. ಅವರು ಅವಿವೇಕಿಗಳು ಎಂದು ಕಿಡಿಕಾರಿದರು.</p>.<p>ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಸಿದ್ದರಾಮಯ್ಯ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಮುಖಂಡರಾದ ಕರಡಕೆರೆ ಹನುಮಂತೇಗೌಡ, ಕೂಳಗೆರೆ ಶೇಖರ್, ಹೆಮ್ಮಿಗೆ ಕಾಳೇಗೌಡ, ಕೆಸ್ತೂರು ಕೆ.ಟಿ.ರಾಜಣ್ಣ, ಎಸ್.ಡಿ.ಹೊನ್ನೇಗೌಡ, ಗ್ರಾಮದ ಮುಖಂಡರಾದ ಕೆ.ಕೃಷ್ಣ, ವೈ.ಎಸ್.ನಾಗರಾಜು, ವೈ.ಇ.ರಮೇಶ್, ವೈ.ಜೆ.ನವೀನ್, ವೈ.ಎಸ್.ಶಶಿಧರ್, ವೈ.ಟಿ,ಅಶೋಕ, ಮನು, ವೈ.ಆರ್.ಅಶೋಕ್, ವೈ.ಇ.ಪ್ರವೀಣ್ಕುಮಾರ್, ಸಚಿನ್, ಶಂಕರ್, ಬಸವರಾಜು, ಈರೇಶ್, ಸುನೀಲ್ಕುಮಾರ್, ಕೆಂಪರಾಜು, ಸೊಸೈಟಿ ಅಧ್ಯಕ್ಷ ಮಧು, ಪುಟ್ಟಸ್ವಾಮಿ, ಹನುಮೇಗೌಡ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತೀನಗರ</strong>: ಮಂಡ್ಯ ಜಿಲ್ಲೆಯ ಜನರು ಕಳೆದ ಚುನಾವಣೆಯಲ್ಲಿ ನನ್ನನ್ನು ಒಪ್ಪಿಕೊಳ್ಳಲಿಲ್ಲ. ಮುಂದಿನ ಚುನಾವಣೆಯಲ್ಲಿ ಒಪ್ಪುತ್ತಾರೆಂದುಕೊಂಡಿದ್ದು ಜನರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಜೆಡಿಎಸ್ ಯವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.</p>.<p>ಸಮೀಪದ ಯಡಗನಹಳ್ಳಿ ಗ್ರಾಮದಲ್ಲಿ ಮಂಚಮ್ಮ, ಮಾಸ್ತಮ್ಮ ದೇವಿಯರ ದೇವಾಲಯಗಳ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಮಂಡ್ಯ ಜಿಲ್ಲೆಯಿಂದ ಚುನಾವಣೆಗೆ ನಿಲ್ಲಲೇಬೇಕೆಂದು ಜನತೆ ಒತ್ತಾಯ ಮಾಡಿದರೆ ಅದು ದೇವರ ನಿರ್ಣಯ. ನಾನು ಸ್ಪರ್ಧೆ ಮಾಡಬೇಕೆಂದು ಬಯಸುವುದಿಲ್ಲ. ಮುಂದೊಂದು ದಿನ ನಮ್ಮ ಸರ್ಕಾರ ಬಂದಂತಹ ಸಂದರ್ಭದಲ್ಲಿ ಅಭಿವೃದ್ಧಿಗೆ ಪೂರಕವಾದ ನನ್ನದೇ ಆದ ಆಲೋಚನೆಗಳಿವೆ. ಭವಿಷ್ಯದ ಅಕ್ಕ-ತಂಗಿಯರು, ಅಣ್ಣ,ತಮ್ಮಂದಿರ ಜೀವನವನ್ನು ರೂಪಿಸುವ ಕರ್ತವ್ಯ ನನ್ನಂತಹ ಒಬ್ಬ ಯುವಕನ ಮೇಲಿದೆ. ಅದನ್ನು ನಾನು ಎಂದಿಗೂ ಮರೆಯುವುದಿಲ್ಲ. ಜಿಲ್ಲೆಯಲ್ಲಿ ಅತೀ ಹೆಚ್ಚು ಉದ್ಯೋಗ ಸೃಷ್ಟಿಸಬೇಕೆಂಬ ಮಹದಾಸೆ ನನ್ನದು ಎಂದು ಹೇಳಿದರು.</p>.<p>‘ಕಳೆದ ಚುನಾವಣೆಯಲ್ಲಿ ನಿಮ್ಮ ನಿಖಿಲ್ಕುಮಾರಸ್ವಾಮಿ ಅನಿರೀಕ್ಷಿತವಾಗಿ ಸೋತಿರಬಹುದು. ಆದರೆ ನನ್ನದು ಸೋಲಲ್ಲ. ನೀವು ಕೊಟ್ಟಿರುವಂತಹ ಪ್ರೀತಿಯ ಮುಂದೆ ಈ ಸೋಲು ಲೆಕ್ಕಕ್ಕಿಲ್ಲ. ಮುಂದಿನ ದಿನಗಳಲ್ಲಿ ಒಳ್ಳೆಯ ದಿನ ನಮಗೂ ಬಂದೆ ಬರುತ್ತದೆಂಬ ನಂಬಿಕೆಯಿಂದಿದ್ದೇನೆ’ ಎಂದು ಹೇಳಿದರು.</p>.<p>ಯಾವುದೇ ಸಮಸ್ಯೆಗಳು ಎದುರಾದರು ಮೆಟ್ಟಿ ನಿಲ್ಲುವಂತಹ ಶಕ್ತಿ ಇದ್ದರೆ ಅದು ಯುವ ಸಮುದಾಯಕ್ಕೆ ಮಾತ್ರ. ಯುವಕರು ಮನಸ್ಸು ಮಾಡಿದರೆ ದೇಶ, ರಾಜ್ಯವನ್ನು ಒಳ್ಳೆಯ ದಿಕ್ಕಿಗೆ ಕೊಂಡೊಯ್ಯುವ ಸಾಮರ್ಥ್ಯ ಇದೆ. ಕಳೆದ 20 ವರ್ಷಗಳ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರು. ಅಂದಿನಿಂದ ಇಂದಿನವರೆಗೂ ನಮ್ಮ ತಂದೆಯವರನ್ನು ಕೈಹಿಡಿದು ನಡೆಸುತ್ತಾ ಬಂದಿದ್ದೀರಿ. ಮದ್ದೂರು ಕ್ಷೇತ್ರದಿಂದ ಅತೀ ಹೆಚ್ಚು ಬಹುಮತದಿಂದ ಆಯ್ಕೆಗೊಳಿಸಿ ಕೇಂದ್ರದಲ್ಲಿ ದೊಡ್ಡ ಮಂತ್ರಿಸ್ಥಾನವನ್ನು ದೊರಕಿಸಿಕೊಡುವಂತೆ ಮಾಡಿರುವ ನಿಮ್ಮೆಲ್ಲರಿಗೂ ಆಭಾರಿಯಾಗಿರುತ್ತೇನೆ ಎಂದರು.</p>.<p>ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಮಾತನಾಡಿ, ಪೂರ್ವಿಕರು ಗ್ರಾಮಕ್ಕೆ ಒಳಿತು ಉಂಟುಮಾಡಲಿ ಎಂದು ದೇವಸ್ಥಾನವನ್ನು ನಿರ್ಮಾಣ ಮಾಡುತ್ತಿದ್ದರು. ಅದನ್ನು ಉಳಿಸಿಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಪೂರ್ವಿಕರು ಕಾಣುತ್ತಿದ್ದಂತಹ ದೈವಭಕ್ತಿಯನ್ನು ನಾವು ಕಾಣಲು ಸಾಧ್ಯವಿಲ್ಲ. ನಮ್ಮಲ್ಲಿ ಆತ್ಮಾವಲೋಕನ, ಚಿಂತನೆ ಇಲ್ಲದಿರುವುದೇ ಅದಕ್ಕೆ ಕಾರಣವಾಗಿದೆ. ಹಾಗಾಗಿ ನಾವು ಮಾಡುವ ಪ್ರತಿಯೊಂದು ಕೆಲಸಗಳು ಮತ್ತು ಮಾತುಗಳು ಸರಿ ಇದೆಯೇ ಎಂಬುವುದನ್ನು ಅವಲೋಕನ ಮಾಡಿಕೊಳ್ಳಬೇಕಿದೆ ಎಂದರು.</p>.<p>ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ವಲಾನಂದನಾಥಸ್ವಾಮಿ ಅವರು ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಯುವಕರು ದೇವರನ್ನು, ಹಿರಿಯರನ್ನು, ಧರ್ಮವನ್ನು, ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು. ಭಾರತೀಯ ಸನಾತನ ಸಂಸ್ಕೃತಿಯನ್ನು ಅನೇಕರು ಟೀಕಿಸುತ್ತಾರೆ. ಅವರು ಅವಿವೇಕಿಗಳು ಎಂದು ಕಿಡಿಕಾರಿದರು.</p>.<p>ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಸಿದ್ದರಾಮಯ್ಯ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಮುಖಂಡರಾದ ಕರಡಕೆರೆ ಹನುಮಂತೇಗೌಡ, ಕೂಳಗೆರೆ ಶೇಖರ್, ಹೆಮ್ಮಿಗೆ ಕಾಳೇಗೌಡ, ಕೆಸ್ತೂರು ಕೆ.ಟಿ.ರಾಜಣ್ಣ, ಎಸ್.ಡಿ.ಹೊನ್ನೇಗೌಡ, ಗ್ರಾಮದ ಮುಖಂಡರಾದ ಕೆ.ಕೃಷ್ಣ, ವೈ.ಎಸ್.ನಾಗರಾಜು, ವೈ.ಇ.ರಮೇಶ್, ವೈ.ಜೆ.ನವೀನ್, ವೈ.ಎಸ್.ಶಶಿಧರ್, ವೈ.ಟಿ,ಅಶೋಕ, ಮನು, ವೈ.ಆರ್.ಅಶೋಕ್, ವೈ.ಇ.ಪ್ರವೀಣ್ಕುಮಾರ್, ಸಚಿನ್, ಶಂಕರ್, ಬಸವರಾಜು, ಈರೇಶ್, ಸುನೀಲ್ಕುಮಾರ್, ಕೆಂಪರಾಜು, ಸೊಸೈಟಿ ಅಧ್ಯಕ್ಷ ಮಧು, ಪುಟ್ಟಸ್ವಾಮಿ, ಹನುಮೇಗೌಡ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>