ಶ್ರೀರಂಗಪಟ್ಟಣ: ತಾಲ್ಲೂಕಿನ ಪಿ.ಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು ಅವರು ಸಹ ಅಧಿಕಾರಿಗಳ ಜತೆಗೆ ಗುರುವಾರ ಶಾಲಾ ವಾಸ್ತವ್ಯ ನಡೆಸಿದರು.
ಸಂಜೆ ಆರು ಗಂಟೆಗೆ ಶಾಲೆಗೆ ಬಂದ ಅಧಿಕಾರಿಗಳ ತಂಡ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿತು.
ವಿದ್ಯಾರ್ಥಿ ಪೋಷಕರು ಮತ್ತು ಶಾಲೆಯ ಶಿಕ್ಷಕರ ಜತೆಗೂ ಚರ್ಚೆ ನಡೆಯಿತು. ಶಾಲೆಯ ಪಡಸಾಲೆಯಲ್ಲಿ ಕುಳಿತು ಫಲಿತಾಂಶ ಉತ್ತಮಪಡಿಸುವಂತೆ ಮಾರ್ಗದರ್ಶನ ಮಾಡಿದರು.
ಬಿಇಒ ಅನಂತರಾಜು ಅವರ ಜತೆಗೆ ಶಿಕ್ಷಣ ಸಂಯೋಜಕಿ ಡಾ.ಬಿ.ಆರ್.ಪ್ರತಿಮಾ, ರಾಮಚಂದ್ರ, ಮಂಚೇಗೌಡ ಅವರು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.