ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ.ಹೊಸಹಳ್ಳಿ ಸರ್ಕಾರಿ ಶಾಲೆ: ಅಧಿಕಾರಿಗಳ ವಾಸ್ತವ್ಯ, ಸಂವಾದ

Last Updated 2 ಏಪ್ರಿಲ್ 2021, 3:10 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಪಿ.ಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು ಅವರು ಸಹ ಅಧಿಕಾರಿಗಳ ಜತೆಗೆ ಗುರುವಾರ ಶಾಲಾ ವಾಸ್ತವ್ಯ‌ ನಡೆಸಿದರು.

ಸಂಜೆ ಆರು ಗಂಟೆಗೆ ಶಾಲೆಗೆ ಬಂದ ಅಧಿಕಾರಿಗಳ ತಂಡ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿತು.

ವಿದ್ಯಾರ್ಥಿ ಪೋಷಕರು ಮತ್ತು ಶಾಲೆಯ ಶಿಕ್ಷಕರ ಜತೆಗೂ ಚರ್ಚೆ ನಡೆಯಿತು. ಶಾಲೆಯ ಪಡಸಾಲೆಯಲ್ಲಿ ಕುಳಿತು ಫಲಿತಾಂಶ ಉತ್ತಮಪಡಿಸುವಂತೆ‌ ಮಾರ್ಗದರ್ಶನ ಮಾಡಿದರು.

ಬಿಇಒ ಅನಂತರಾಜು ಅವರ‌ ಜತೆಗೆ ಶಿಕ್ಷಣ ಸಂಯೋಜಕಿ ಡಾ.ಬಿ.ಆರ್.ಪ್ರತಿಮಾ, ರಾಮಚಂದ್ರ, ಮಂಚೇಗೌಡ ಅವರು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.

ಮುಖ್ಯ ಶಿಕ್ಷಕ ಕೃಷ್ಣೇಗೌಡ, ಸಹ ಶಿಕ್ಷಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT