‘ಹಳ್ಳಿಕಾರ್, ಕಾಡುಗೊಲ್ಲ ಜನಾಂಗ ಅನಾದಿ ಕಾಲದಿಂದಲೂ ಪಾರಂಪಾರಿಕವಾಗಿ ಹಳ್ಳಿಕಾರ್ ಗೋತಳಿಯನ್ನು ಸಂರಕ್ಷಿಸಿಕೊಂಡು ಬರುತ್ತಿದ್ದಾರೆ. ವಿಜಯನಗರ ಅರಸರಾಗಿದ್ದ ಶ್ರೀಕೃಷ್ಣದೇವರಾಯರು ಹಳ್ಳಿಕಾರ್ ತಳಿ ಪೋಷಣೆ ಮಾಡಿದ್ದರು. ಮೈಸೂರು ಅರಸರಾಗಿದ್ದ ಚಿಕ್ಕದೇವರಾಜ ಒಡೆಯರ್ ಅವರು ಹಳ್ಳಿಕಾರ್ ತಳಿ ರಕ್ಷಣೆಗಾಗಿಯೇ ಕಾವಲು ಪ್ರದೇಶ ಮೀಸಲಿಟ್ಟಿದ್ದರು. ಆದರೆ ವರ್ತೂರ್ ಸಂತೋಷ್ ಹಳ್ಳಿಕಾರ್ ಒಡೆಯ ಎಂದು ಕರೆದುಕೊಂಡು ಗೋವುಗಳಿಗೆ ಅವಮಾನ ಮಾಡುತ್ತಿದ್ದಾನೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.