<p><strong>ಮಂಡ್ಯ: </strong>ಯುಗಾದಿ ‘ವರ್ಷದ ತೊಡಕು’ ಅಂಗವಾಗಿ ಭಾನುವಾರ ಜಿಲ್ಲೆಯಾದ್ಯಂತ ಜನರು ಮಾಂಸಕ್ಕಾಗಿ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ನಗರವೂ ಸೇರಿದಂತೆ ಗ್ರಾಮೀಣ ಭಾಗದಲ್ಲಿ ‘ಗುಡ್ಡೆ ಮಾಂಸ’ವನ್ನು ಮುಗಿಬಿದ್ದು ಖರೀದಿ ಮಾಡಿದರು.</p>.<p>ಉತ್ತಮ ಗುಣಮಟ್ಟದ ಮಾಂಸಕ್ಕೆ ಪ್ರಸಿದ್ಧಿ ಪಡೆದಿರುವ ಚಿಕ್ಕಮಂಡ್ಯ, ಸಾತನೂರು ಗ್ರಾಮಗಳ ಅಂಗಡಿಗಳ ಮುಂದೆ ಜನರು ನಸುಕಿನಿಂದಲೇ ಸಾಲುಗಟ್ಟಿ ನಿಂತಿದ್ದರು. ಜೊತೆಗೆ ಯಲಿಯೂರು ಸರ್ಕಲ್, ಉಮ್ಮಡಹಳ್ಳಿ ಗೇಟ್, ಕಾಳೇನಹಳ್ಳಯಲ್ಲೂ ಸಾವಿರಾರು ಜನರು ಮಾಂಸ ಖರೀದಿ ಮಾಡಿದರು.</p>.<p>ಗುಡ್ಡೆ ಮಾಂಸ ಖರೀದಿಗೂ ಜನರು ಸಾಲುಗಟ್ಟಿ ನಿಂತಿದ್ದರು. ಹಲವು ಮರಿಗಳನ್ನು ಕಡಿದು ಒಟ್ಟಾರೆ ಗುಡ್ಡೆಯಲ್ಲಿ ವಿಂಗಡಿಸಿ ಹಂಚಿಕೊಳ್ಳುವ ವಿಧಾನಕ್ಕೆ ಗುಡ್ಡೆ ಮಾಂಸ ಎಂದು ಪ್ರಸಿದ್ಧಿ ಪಡೆದಿದೆ. ಇದು ನಗರದ ಹೊಸಹಳ್ಳಿ, ಹಾಲಹಳ್ಳಿ, ಕಾವೇರಿ ನಗರ ಸೇರಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಮಾರಾಟವಾಯಿತು.</p>.<p>ಹಿಂದೂಗಳು ಹಲಾಲ್ ರೀತಿಯಲ್ಲಿ ಕತ್ತರಿಸಿದ ಮಾಂಸವನ್ನು ಖರೀದಿ ಮಾಡಬಾರದು ಎಂದು ಭಜರಂಗದಳ ಕಾರ್ಯಕರ್ತರು ಪ್ರಚಾರ ಮಾಡಿದ್ದರು. ಆದರೆ ಜನರು ಅದರ ಕಡೆ ಗಮನ ಕೊಡದೆ ಪ್ರತಿ ವರ್ಷದಂತೆ ತಮ್ಮಿಷ್ಟದ ಅಂಗಡಿಗಳಲ್ಲಿ ಮಾಂಸ ಖರೀದಿ ಮಾಡಿದರು.</p>.<p>‘ಯಾವ ರೀತಿಯಲ್ಲಿ ಕತ್ತರಿಸಿದ್ದಾರೆ ಎಂಬುದು ನಮಗೆ ಮುಖ್ಯವಲ್ಲ. ಉತ್ತಮ ಗುಣಮಟ್ಟದ ನಾಟಿ ಮಾಂಸಕ್ಕಾಗಿ ಖರೀದಿಗಾಗಿ ನಾವು ಚಿಕ್ಕಮಂಡ್ಯಕ್ಕೆ ಬಂದಿದ್ದೇವೆ. ನಮಗೆ ಹಲಾಲ್ ಕಟ್, ಜಟ್ಕಾ ಕಟ್ ಗಳು ಗೊತ್ತಿಲ್ಲ’ ಎಂದು ಮಾಂಸ ಖರೀದಿ ಮಾಡುತ್ತಿದ್ದ ಎಸ್.ಸತೀಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ: </strong>ಯುಗಾದಿ ‘ವರ್ಷದ ತೊಡಕು’ ಅಂಗವಾಗಿ ಭಾನುವಾರ ಜಿಲ್ಲೆಯಾದ್ಯಂತ ಜನರು ಮಾಂಸಕ್ಕಾಗಿ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ನಗರವೂ ಸೇರಿದಂತೆ ಗ್ರಾಮೀಣ ಭಾಗದಲ್ಲಿ ‘ಗುಡ್ಡೆ ಮಾಂಸ’ವನ್ನು ಮುಗಿಬಿದ್ದು ಖರೀದಿ ಮಾಡಿದರು.</p>.<p>ಉತ್ತಮ ಗುಣಮಟ್ಟದ ಮಾಂಸಕ್ಕೆ ಪ್ರಸಿದ್ಧಿ ಪಡೆದಿರುವ ಚಿಕ್ಕಮಂಡ್ಯ, ಸಾತನೂರು ಗ್ರಾಮಗಳ ಅಂಗಡಿಗಳ ಮುಂದೆ ಜನರು ನಸುಕಿನಿಂದಲೇ ಸಾಲುಗಟ್ಟಿ ನಿಂತಿದ್ದರು. ಜೊತೆಗೆ ಯಲಿಯೂರು ಸರ್ಕಲ್, ಉಮ್ಮಡಹಳ್ಳಿ ಗೇಟ್, ಕಾಳೇನಹಳ್ಳಯಲ್ಲೂ ಸಾವಿರಾರು ಜನರು ಮಾಂಸ ಖರೀದಿ ಮಾಡಿದರು.</p>.<p>ಗುಡ್ಡೆ ಮಾಂಸ ಖರೀದಿಗೂ ಜನರು ಸಾಲುಗಟ್ಟಿ ನಿಂತಿದ್ದರು. ಹಲವು ಮರಿಗಳನ್ನು ಕಡಿದು ಒಟ್ಟಾರೆ ಗುಡ್ಡೆಯಲ್ಲಿ ವಿಂಗಡಿಸಿ ಹಂಚಿಕೊಳ್ಳುವ ವಿಧಾನಕ್ಕೆ ಗುಡ್ಡೆ ಮಾಂಸ ಎಂದು ಪ್ರಸಿದ್ಧಿ ಪಡೆದಿದೆ. ಇದು ನಗರದ ಹೊಸಹಳ್ಳಿ, ಹಾಲಹಳ್ಳಿ, ಕಾವೇರಿ ನಗರ ಸೇರಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಮಾರಾಟವಾಯಿತು.</p>.<p>ಹಿಂದೂಗಳು ಹಲಾಲ್ ರೀತಿಯಲ್ಲಿ ಕತ್ತರಿಸಿದ ಮಾಂಸವನ್ನು ಖರೀದಿ ಮಾಡಬಾರದು ಎಂದು ಭಜರಂಗದಳ ಕಾರ್ಯಕರ್ತರು ಪ್ರಚಾರ ಮಾಡಿದ್ದರು. ಆದರೆ ಜನರು ಅದರ ಕಡೆ ಗಮನ ಕೊಡದೆ ಪ್ರತಿ ವರ್ಷದಂತೆ ತಮ್ಮಿಷ್ಟದ ಅಂಗಡಿಗಳಲ್ಲಿ ಮಾಂಸ ಖರೀದಿ ಮಾಡಿದರು.</p>.<p>‘ಯಾವ ರೀತಿಯಲ್ಲಿ ಕತ್ತರಿಸಿದ್ದಾರೆ ಎಂಬುದು ನಮಗೆ ಮುಖ್ಯವಲ್ಲ. ಉತ್ತಮ ಗುಣಮಟ್ಟದ ನಾಟಿ ಮಾಂಸಕ್ಕಾಗಿ ಖರೀದಿಗಾಗಿ ನಾವು ಚಿಕ್ಕಮಂಡ್ಯಕ್ಕೆ ಬಂದಿದ್ದೇವೆ. ನಮಗೆ ಹಲಾಲ್ ಕಟ್, ಜಟ್ಕಾ ಕಟ್ ಗಳು ಗೊತ್ತಿಲ್ಲ’ ಎಂದು ಮಾಂಸ ಖರೀದಿ ಮಾಡುತ್ತಿದ್ದ ಎಸ್.ಸತೀಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>