<p><strong>ಮಂಡ್ಯ</strong>: ಆರನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಏ. 7 ರಂದು ಕರೆ ನೀಡಿದ್ದ ಸಾರಿಗೆ ನೌಕರರ ಮುಷ್ಕರದ ಬಿಸಿ ಮಂಗಳವಾರವೇ ಪ್ರಯಾಣಿಕರಿಗೆ ತಟ್ಟಿದ್ದು, ಮಧ್ಯಾಹ್ನದ ನಂತರ ಬಸ್ಗಳ ಸಂಖ್ಯೆ ಕಡಿಮೆ ಇದ್ದುದರಿಂದ ಊರಿಗೆ ತೆರಳಲು<br />ಪರದಾಡಿದರು.</p>.<p>ಮಂಡ್ಯ ವಿಭಾಗದಲ್ಲಿ ಮಂಗಳವಾರ ಶೇ 60 ರಷ್ಟು ಬಸ್ಗಳು ಮಾತ್ರ ರಸ್ತೆಗಳಿದಿದ್ದು, ಮಧ್ಯಾಹ್ನದ ನಂತರದ ಎಬಿ ಮಾರ್ಗಗಳು, ಹಾಲ್ಟಿಂಗ್ ಬಸ್ಗಳು ಘಟಕಗಳಿಂದ ತೆರಳಲಿಲ್ಲ. ಮಧ್ಯಾಹ್ನದ ನಂತರ ಕರ್ತವ್ಯಕ್ಕೆ ಹಾಜರಾದರೆ ಬುಧವಾರವೂ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಮುಷ್ಕರಕ್ಕೆ ಹಿನ್ನೆಡೆಯಾಗುತ್ತದೆ ಎಂಬ ಕಾರಣಕ್ಕೆ<br />ಮಂಗಳವಾರವೇ ಕರ್ತವ್ಯಕ್ಕೆ ಗೈರಾಗುವ ಮೂಲಕ ಸಿಬ್ಬಂದಿ ಮುಷ್ಕರ ಆರಂಭಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.</p>.<p>ನಿತ್ಯ 345 ಬಸ್ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿದ್ದವು. ಆದರೆ, ಮಂಗಳವಾರ 262 ಬಸ್ಗಳಷ್ಟೇ ರಸ್ತೆಗಿಳಿದಿದ್ದು, ಎಲ್ಲಾ ಬಸ್ಗಳು ಮಂಗಳವಾರ ರಾತ್ರಿ ಘಟಕಗಳಿಗೆ ಹಿಂದಿರುಗಿದವು. ಸಂಜೆ ನಂತರ ಬಸ್ಗಳಿಲ್ಲದೆ ಪ್ರಯಾಣಿಕರು ಖಾಸಗಿ ಬಸ್, ಆಟೋಗಳನ್ನು ಹಿಡಿಯಬೇಕಾಯಿತು.</p>.<p>ಮಳವಳ್ಳಿಗೆ ಅರ್ಧ ಗಂಟೆಗೆ ಒಂದರಂತೆ ಬಸ್ಗಳು ಇದ್ದವು. ಆದರೆ ಸಂಜೆ 4.45ಕ್ಕೆ ಮಳವಳ್ಳಿಗೆ ಒಂದು ಬಸ್ ಹೋಯಿತು. ನಂತರ 6.15 ರವರೆಗೆ ಯಾವುದೇ ಬಸ್ಗಳಿಲ್ಲದೆ ಪರದಾಡಬೇಕಾಯಿತು ಎಂದು ಪ್ರಯಾಣಿಕರೊಬ್ಬರು<br />ದೂರಿದರು.</p>.<p>‘ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಸಿಬ್ಬಂದಿ ಜೊತೆಗೆ ನಿರಂತರವಾಗಿ ಮನವೊಲಿಕೆ ಮಾಡಲಾಗುತ್ತಿದೆ. ಎಷ್ಟು ಮಂದಿ ಸಿಬ್ಬಂದಿ ಹಾಜರಾಗುತ್ತಾರೋ ಅದರ ಮೇಲೆ ಸಂಚಾರ ನಿರ್ಧಾರವಾಗಲಿದೆ’ ಎಂದು ಕೆಎಸ್ಆರ್ಟಿಸಿ ಮಂಡ್ಯ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣ್ಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ಆರನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಏ. 7 ರಂದು ಕರೆ ನೀಡಿದ್ದ ಸಾರಿಗೆ ನೌಕರರ ಮುಷ್ಕರದ ಬಿಸಿ ಮಂಗಳವಾರವೇ ಪ್ರಯಾಣಿಕರಿಗೆ ತಟ್ಟಿದ್ದು, ಮಧ್ಯಾಹ್ನದ ನಂತರ ಬಸ್ಗಳ ಸಂಖ್ಯೆ ಕಡಿಮೆ ಇದ್ದುದರಿಂದ ಊರಿಗೆ ತೆರಳಲು<br />ಪರದಾಡಿದರು.</p>.<p>ಮಂಡ್ಯ ವಿಭಾಗದಲ್ಲಿ ಮಂಗಳವಾರ ಶೇ 60 ರಷ್ಟು ಬಸ್ಗಳು ಮಾತ್ರ ರಸ್ತೆಗಳಿದಿದ್ದು, ಮಧ್ಯಾಹ್ನದ ನಂತರದ ಎಬಿ ಮಾರ್ಗಗಳು, ಹಾಲ್ಟಿಂಗ್ ಬಸ್ಗಳು ಘಟಕಗಳಿಂದ ತೆರಳಲಿಲ್ಲ. ಮಧ್ಯಾಹ್ನದ ನಂತರ ಕರ್ತವ್ಯಕ್ಕೆ ಹಾಜರಾದರೆ ಬುಧವಾರವೂ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಮುಷ್ಕರಕ್ಕೆ ಹಿನ್ನೆಡೆಯಾಗುತ್ತದೆ ಎಂಬ ಕಾರಣಕ್ಕೆ<br />ಮಂಗಳವಾರವೇ ಕರ್ತವ್ಯಕ್ಕೆ ಗೈರಾಗುವ ಮೂಲಕ ಸಿಬ್ಬಂದಿ ಮುಷ್ಕರ ಆರಂಭಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.</p>.<p>ನಿತ್ಯ 345 ಬಸ್ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿದ್ದವು. ಆದರೆ, ಮಂಗಳವಾರ 262 ಬಸ್ಗಳಷ್ಟೇ ರಸ್ತೆಗಿಳಿದಿದ್ದು, ಎಲ್ಲಾ ಬಸ್ಗಳು ಮಂಗಳವಾರ ರಾತ್ರಿ ಘಟಕಗಳಿಗೆ ಹಿಂದಿರುಗಿದವು. ಸಂಜೆ ನಂತರ ಬಸ್ಗಳಿಲ್ಲದೆ ಪ್ರಯಾಣಿಕರು ಖಾಸಗಿ ಬಸ್, ಆಟೋಗಳನ್ನು ಹಿಡಿಯಬೇಕಾಯಿತು.</p>.<p>ಮಳವಳ್ಳಿಗೆ ಅರ್ಧ ಗಂಟೆಗೆ ಒಂದರಂತೆ ಬಸ್ಗಳು ಇದ್ದವು. ಆದರೆ ಸಂಜೆ 4.45ಕ್ಕೆ ಮಳವಳ್ಳಿಗೆ ಒಂದು ಬಸ್ ಹೋಯಿತು. ನಂತರ 6.15 ರವರೆಗೆ ಯಾವುದೇ ಬಸ್ಗಳಿಲ್ಲದೆ ಪರದಾಡಬೇಕಾಯಿತು ಎಂದು ಪ್ರಯಾಣಿಕರೊಬ್ಬರು<br />ದೂರಿದರು.</p>.<p>‘ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಸಿಬ್ಬಂದಿ ಜೊತೆಗೆ ನಿರಂತರವಾಗಿ ಮನವೊಲಿಕೆ ಮಾಡಲಾಗುತ್ತಿದೆ. ಎಷ್ಟು ಮಂದಿ ಸಿಬ್ಬಂದಿ ಹಾಜರಾಗುತ್ತಾರೋ ಅದರ ಮೇಲೆ ಸಂಚಾರ ನಿರ್ಧಾರವಾಗಲಿದೆ’ ಎಂದು ಕೆಎಸ್ಆರ್ಟಿಸಿ ಮಂಡ್ಯ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣ್ಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>