ನಿರಂತರ ಮಳೆಯಿಂದಾಗಿ ರಸ್ತೆಗಳ ತುಂಬೆಲ್ಲಾ ನೀರು ಹರಿಯಿತು. ನಗರದ ಅಂಚೆ ಕಚೇರಿ, ನಗರಸಭೆ ಕಚೇರಿ ಬಳಿ ಅಪಾರ ಪ್ರಮಾಣದ ನೀರು ನಿಂತಿತ್ತು. ವಿವಿಧೆಡೆ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಕೆರೆಯಂತಾಗಿತ್ತು. ವಾಹನಗಳಲ್ಲಿ ಓಡಾಡುವ ಜನರು ಹರಸಾಹಸಪಟ್ಟರು. ಕಾರ್ಖಾನೆ ವೃತ್ತ, ನಂದಾ ವೃತ್ತ, ಮಹಾವೀರ ವೃತ್ತ, ಜಯಚಾಮರಾಜ ವೃತ್ತಗಳು ಕೆರೆಯಂತಾಗಿದ್ದವು. ಮದ್ದೂರು, ನಾಗಮಂಗಲ, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲೂ ಧಾರಾಕಾರ ಮಳೆ ಸುರಿದಿದೆ.