ಸೋಮವಾರ ಸಂಜೆ ಕಾವೇರಿ ನದಿಯ ಸೋಪಾನ ಕಟ್ಟೆಯಿಂದ ಕರಗ ಮಹೋತ್ಸವ ಆರಂಭವಾಗಲಿದೆ. ಮುತ್ತುಲಕ್ಷ್ಮಿ ಮಾರಮ್ಮ ದೇಗುಲದ ಗುಡ್ಡಪ್ಪ ಕುಮಾರ್ ಕರಗವನ್ನು ಹೊರಲಿದ್ದಾರೆ. ಮಂಗಳವಾರ ಮುಂಜಾನೆ ವರೆಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರಗದ ಉತ್ಸವ ನಡೆಯಲಿದೆ. ಮುಂಜಾನೆ ವೇಳೆಗೆ ಪಟ್ಟಣದ ರೈಲ್ವೆ ನಿಲ್ದಾಣದ ಬಳಿಯ ಮುತ್ತುಲಕ್ಷ್ಮಿ ಮಾರಮ್ಮ ದೇವಾಲಯಕ್ಕೆ ಕರಗ ತಲುಪಲಿದೆ. ದೇವಾಲಯದ ಮುಂದೆ ಕೊಂಡವನ್ನು ಸಿದ್ದಪಡಿಸಿದ್ದು, ಗುಡ್ಡಪ್ಪ ಮತ್ತು ಭಕ್ತರು ಕೊಂಡ ಹಾಯಲಿದ್ದಾರೆ.