‘ಅಧ್ಯಕ್ಷ ಅಜಾತಶತ್ರು’
‘ಮಂಜಣ್ಣ ಕಾಂಗ್ರೆಸ್ಸಿಗ. ನಾನು ಅಪ್ಪಟ ಜೆಡಿಎಸ್ ಬೆಂಬಲಿಗ. ಆದರೆ, ಮಂಜಣ್ಣ ಅವರಂತೆ ಕೆಲಸ ಮಾಡುವ ಗ್ರಾಮಪಂಚಾಯಿತಿ ಅಧ್ಯಕ್ಷರನ್ನು ಇದುವರೆಗೆ ನೋಡಿಲ್ಲ. ಬೆಳಿಗ್ಗೆ 6 ಗಂಟೆ ಹೊತ್ತಿಗೆ ಪೌರಕಾರ್ಮಿಕರ ಜತೆ ತಾವೂ ಸ್ವಚ್ಛತೆ ಕಾರ್ಯದಲ್ಲಿ ತೊಡಗಿರುತ್ತಾರೆ. ಯಾರದೇ ಮನೆ, ಅಂಗಡಿ– ಮುಂಗಟ್ಟಾದರೂ ಪಕ್ಷ ಪರ ಎನ್ನದೆ ಕೆಲಸ ಮಾಡಿಸುತ್ತಾರೆ. ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾರೆ. ಲಂಚಕ್ಕೆ ಆಸೆ ಪಡುವವರಲ್ಲ. ಅರಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ವಿರೋಧಿಗಳೇ ಇಲ್ಲದ ಅಜಾತಶತ್ರು’ ಎಂದು ಜೆಡಿಎಸ್ ಮುಖಂಡ ಕಿಶೋರ್ ತಿಳಿಸಿದರು.