ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಪಂಚಾಯಿತಿ ಅಧ್ಯಕ್ಷ ಇಲ್ಲಿ ಗ್ರಾಮ ಸೇವಕ

ಕಸ ಎತ್ತುವ, ನೀರು ತುಂಬುವ ಸಮಸ್ಯೆ ಬಗೆಹರಿಸುವ ಮಂಜುನಾಥ್‌ ನಿಸ್ವಾರ್ಥ ಸೇವೆ
Published : 26 ಮೇ 2024, 8:17 IST
Last Updated : 26 ಮೇ 2024, 8:17 IST
ಫಾಲೋ ಮಾಡಿ
Comments
ಎಂ.ಕೆ.ಮಂಜುನಾಥ್‌

ಎಂ.ಕೆ.ಮಂಜುನಾಥ್‌

‘ಗ್ರಾ.ಪಂ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಇದು ಶಾಶ್ವತವಲ್ಲ. ಸಿಕ್ಕಿರುವ ಅವಕಾಶವನ್ನು ಜನ ಹಿತಕ್ಕೆ ಬಳಸಬೇಕು. ಗಾಂಧೀಜಿ ಆಶಯದಂತೆ ತ್ಯಾಜ್ಯಮುಕ್ತ ಪಂಚಾಯಿತಿ ಮಾಡುವುದು, ನಿವೇಶನ ರಹಿತರಿಗೆ ಸೂರು ಕಲ್ಪಿಸುವುದು ನನ್ನ ಮಹದಾಸೆ
-ಎಂ.ಕೆ. ಮಂಜುನಾಥ್‌, ಅರಕೆರೆ ಗ್ರಾ.ಪಂ ಅಧ್ಯಕ್ಷ
‘ಅಧ್ಯಕ್ಷ ಅಜಾತಶತ್ರು’
‘ಮಂಜಣ್ಣ ಕಾಂಗ್ರೆಸ್ಸಿಗ. ನಾನು ಅಪ್ಪಟ ಜೆಡಿಎಸ್‌ ಬೆಂಬಲಿಗ. ಆದರೆ, ಮಂಜಣ್ಣ ಅವರಂತೆ ಕೆಲಸ ಮಾಡುವ ಗ್ರಾಮಪಂಚಾಯಿತಿ ಅಧ್ಯಕ್ಷರನ್ನು ಇದುವರೆಗೆ ನೋಡಿಲ್ಲ. ಬೆಳಿಗ್ಗೆ 6 ಗಂಟೆ ಹೊತ್ತಿಗೆ ಪೌರಕಾರ್ಮಿಕರ ಜತೆ ತಾವೂ ಸ್ವಚ್ಛತೆ ಕಾರ್ಯದಲ್ಲಿ ತೊಡಗಿರುತ್ತಾರೆ. ಯಾರದೇ ಮನೆ, ಅಂಗಡಿ– ಮುಂಗಟ್ಟಾದರೂ ಪಕ್ಷ ಪರ ಎನ್ನದೆ ಕೆಲಸ ಮಾಡಿಸುತ್ತಾರೆ. ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾರೆ. ಲಂಚಕ್ಕೆ ಆಸೆ ಪಡುವವರಲ್ಲ. ಅರಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ವಿರೋಧಿಗಳೇ ಇಲ್ಲದ ಅಜಾತಶತ್ರು’ ಎಂದು ಜೆಡಿಎಸ್‌ ಮುಖಂಡ ಕಿಶೋರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT