ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಬೇಲಿಯೇ ನಾಪತ್ತೆ!

ಕಬ್ಬಿಣದ ಪರಿಕರ, ಕೆಳಸೇತುವೆ ಬಲ್ಬ್‌ ಕಳ್ಳತನ, ಪ್ರಾಣಕ್ಕೆ ಸಂಚಾಕಾರ, ದೂರು ದಾಖಲು
Published : 2 ಜೂನ್ 2023, 1:00 IST
Last Updated : 2 ಜೂನ್ 2023, 1:00 IST
ಫಾಲೋ ಮಾಡಿ
Comments
ಬೇಲಿ ಕಬ್ಬಿಣ ಕದ್ದು ಗುಜರಿಯಲ್ಲಿ ಮಾರಾಟ ಮತ್ತೆ ಮತ್ತೆ ತೇಪೆ ಹಾಕುತ್ತಿರುವ ಪ್ರಾಧಿಕಾರ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲು
ಪಿಡಿ ವರ್ಗಾವಣೆ ಕಚೇರಿ ಸ್ಥಳಾಂತರ
ಬೆಂಗಳೂರು– ಮೈಸೂರು ದಶಪಥ ನಿರ್ಮಾಣ ಕಾಮಗಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್‌ ವರ್ಗಾವಣೆಗೊಂಡಿದ್ದಾರೆ. ಅವರ ಜಾಗಕ್ಕೆ ಉತ್ತರ ಭಾರತ ಮೂಲದ ರಾಹುಲ್‌ ಎಂಬುವವರು ನೇಮಕಗೊಂಡಿದ್ದಾರೆ ನೂತನ ಯೋಜನಾಧಿಕಾರಿ ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ ಈ ನಡುವೆ ರಾಮನಗರದಲ್ಲಿ ಇದ್ದ ಹೆದ್ದಾರಿ ಪ್ರಾಧಿಕಾರದ ಕಚೇರಿ ಮೈಸೂರಿಗೆ ಸ್ಥಳಾಂತರಗೊಳಿಸುವ ನಿರ್ಧಾರ ಹೊರಬಿದ್ದಿದೆ. ಕೆಂಗೇರಿಯಲ್ಲಿ ಶಾಖಾ ಕಚೇರಿ ಇರಲಿದ್ದು ಮುಖ್ಯ ಕಚೇರಿ ಮೈಸೂರು ನಗರಕ್ಕೆ ಸ್ಥಾಳಾಂತರಗೊಳ್ಳಲಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಕ್ಯಾಂಟೀನ್‌ ಬಳಿಯೇ ಬೇಲಿ ಕನ್ನ
ಬೇಲಿ ಕಬ್ಬಿಣ ಕಳ್ಳತನ ಒಂದೆಡೆಯಾದರೆ ಕ್ಯಾಂಟೀನ್‌ ಸಣ್ಣಪುಟ್ಟ ಹೋಟೆಗಳು ಇರುವೆಡೆ ಬೇಲಿಗೆ ಕನ್ನ ಹಾಕಿರುವ ಪ್ರಕರಣಗಳೂ ಇನ್ನೊಂದೆಡೆ ಬೆಳಕಿಗೆ ಬಂದಿವೆ. ಅಂಗಡಿ ಮಾಲೀಕರು ತಮ್ಮ ವ್ಯಾಪಾರ ವೃದ್ಧಿಸಿಕೊಳ್ಳಲು ಜನರು ಬರುವಂತೆ ಮಾಡಲು ಬೇಲಿಗಳಿಗೆ ಕನ್ನ ಹಾಕಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಗುತ್ತಿಗೆದಾರರು ನೀಡಿರುವ ದೂರಿನಲ್ಲಿ ಈ ಅಂಶವನ್ನೂ ಪ್ರಸ್ತಾಪ ಮಾಡಲಾಗಿದ್ದು ಅಂತಹ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT