ಚೆಲುವನಾರಾಯಣಸ್ವಾಮಿ ಬ್ರಹ್ಮಲೋಕದಿಂದ ಭೂಲೋಕಕ್ಕೆ ಅವಿರ್ಭವಿಸಿದ ದಿನವಾದ ಮೀನ ಮಾಸದ ಹಸ್ತನಕ್ಷತ್ರ ಹಿಂದಿನ ಎಂಟು ದಿನ ವೈರಮುಡಿ ಜಾತ್ರೆ ನಡೆಯುತ್ತಾ ಬಂದಿದೆ. ನವಾಹ ಉತ್ಸವದ ಕೊನೆ, 9ನೇ ತಿರುನಾಳ್ ಅವಭೃತ ಅಂಗವಾಗಿ ಬೆಳಿಗ್ಗೆ ಹತ್ತು ಗಂಟೆಯವೇಳೆಗೆ ರಾಜಮುಡಿ ಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವವನ್ನು ಗಜೇಂದ್ರವರದನಸನ್ನಿಧಿಗೆ ನೆರವೇರಿಸಲಾಯಿತು. ಅಲ್ಲಿ ಬೆಳ್ಳಿಯ ಸ್ನಪನಶೆಲ್ವರ್ಗೆ ವೇದಮಂತ್ರಗಳೊಂದಿಗೆ ಅಭಿಷೇಕ ನೆರವೇರಿಸಿ ತೀರ್ಥಸ್ನಾನ ನೆರವೇರಿಸಲಾಯಿತು.