‘ಧಾರಾಕಾರ ಮಳೆಗೆ ಕೊಡಗು ಜಿಲ್ಲೆ ಕೊಚ್ಚಿ ಹೋಗಿದೆ. ಕೇರಳದಲ್ಲಿ ನೂರಾರು ಮಂದಿ ಮೃತಪಟ್ಟಿದ್ದಾರೆ. ಬನ್ನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಈ ವರ್ಷದ ಆರಂಭದಿಂದ ಇದುವರೆಗೆ ಒಂದು ಹನಿ ಮಳೆ ಬಿದ್ದಿಲ್ಲ. ಮಳೆಯನ್ನೇ ಆಶ್ರಯಿಸಿರುವ ಅರಕೆರೆ ಹೋಬಳಿ ಅಕ್ಷರಶಃ ಬೆಂಗಾಡಾಗಿದೆ. ರೈತರು ಕಂಗಾಲಾಗಿದ್ದು, ಹಿರಿಯರ ಸಲಹೆಯಂತೆ ಕತ್ತೆಗಳಿಗೆ ಮದುವೆ ಮಾಡಿಸಿ ಅನ್ನದಾನ ಮಾಡುತ್ತಿದ್ದೇವೆ’ ಎಂದು ಗ್ರಾಮದ ಸರ್ ಎಂ.ವಿಶ್ವೇಶ್ವರಯ್ಯ ಯುವಕರ ಬಳಗದ ಪ್ರತೀಪ್, ಅಂಗಡಿ ಕೃಷ್ಣ, ಮಹೇಶ್, ಶಂಕರೇಗೌಡ ಹೇಳಿದರು.