<p>ಮಂಡ್ಯ: ‘ಗಾಂಧಿ ಹಾಗೂ ಅಂಬೇಡ್ಕರ್ ಜಯಂತಿಯಂದು ಮಾಂಸಾಹಾರ ನಿಷೇಧಿಸುವುದು ಏಕೆ? ಜಯಂತಿಗಳಿಗೂ ನಮ್ಮ ಆಹಾರದ ಹಕ್ಕಿಗೂ ಏನು ಸಂಬಂಧ? ನಿಷೇಧಿಸಲು ಇವರು ಯಾರು’ ಎಂದು ಅಂಕಣಕಾರ ಶಿವಸುಂದರ್ ಪ್ರಶ್ನಿಸಿದರು.</p>.<p>ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ‘ಬಾಡೂಟ ಬಳಗ’ ವತಿಯಿಂದ ‘ಬಾಡೂಟ ಹೋರಾಟಕ್ಕೆ ಒಂದು ವರ್ಷ’ದ ಅಂಗವಾಗಿ ಮಂಗಳವಾರ ನಡೆದ ‘ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಮುನ್ನುಡಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಮಹನೀಯರ ಜಯಂತಿಗಳಲ್ಲಿ ಮಾಂಸಾಹಾರ ತಿನ್ನುಬಾರದು ಎಂದು ಸರ್ಕಾರ ಆದೇಶಿಸುತ್ತದೆ. ದೇಶದ ಇತಿಹಾಸದಲ್ಲಿ ಶ್ರಮಣ ಸಂಸ್ಕೃತಿಗೂ ಬ್ರಾಹ್ಮಣ್ಯ ಸಂಸ್ಕೃತಿಗೂ ನಡೆದಿರುವ ದೊಡ್ಡ ಯುದ್ಧವೇ ಇತಿಹಾಸ ಎಂದು ಅಂಬೇಡ್ಕರ್ ಹೇಳಿರುವ ಮಾತನ್ನು ನೆನಪಿಸಿಕೊಳ್ಳಬೇಕು. ಯಾವುದೇ ಕಾರ್ಯಕ್ರಮವಿರಲಿ, ಸಸ್ಯಾಹಾರ, ಮಾಂಸಾಹಾರವೆರಡೂ ಇರಬೇಕು’ ಎಂದರು.</p>.<p>‘ಪ್ರಜಾವಾಣಿ– ಅಭಿಮತ’ ಸಂಪಾದಕ ರಘುನಾಥ ಚ.ಹ. ಮಾತನಾಡಿ, ‘ಮೊಟ್ಟೆ ಎನ್ನುವ ಹೋರಾಟ ಸಮ್ಮೇಳನಕ್ಕಷ್ಟೇ ಮೀಸಲಾಗುವುದು ಬೇಡ. ಮಾಂಸಹಾರ ತಿನ್ನುವುವವರು ಅಪವಿತ್ರರು ಎಂದೂ ಬಿಂಬಿಸಬಾರದು’ ಎಂದರು.</p>.<p>‘ಕೇರಳದಲ್ಲಿ ‘ಬೀಫ್’ ಎಂಬ ಹೆಸರಿದ್ದ ಕಾರಣಕ್ಕೇ ಸಿನಿಮಾವನ್ನು ನಿಷೇಧಿಸಲಾಯಿತು. ಆದರೆ ಸಿನಿಮಾದಲ್ಲಿ ಬೀಫ್ ಬಗ್ಗೆ ಏನೂ ಹೇಳಿರಲಿಲ್ಲ’ ಎಂದು ವಿಷಾದಿಸಿದರು.</p>.<p>ಲೇಖಕರಾದ ಸಂತೋಷ್ ಗುಡ್ಡಿಯಂಗಡಿ, ಗುರುಪ್ರಸಾದ್ ಕಂಟಲಗೆರೆ, ಉ್ರಗನರಸಿಂಹೇಗೌಡ, ಲೋಕೇಶ್ ಮೊಸಳೆ ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ: ‘ಗಾಂಧಿ ಹಾಗೂ ಅಂಬೇಡ್ಕರ್ ಜಯಂತಿಯಂದು ಮಾಂಸಾಹಾರ ನಿಷೇಧಿಸುವುದು ಏಕೆ? ಜಯಂತಿಗಳಿಗೂ ನಮ್ಮ ಆಹಾರದ ಹಕ್ಕಿಗೂ ಏನು ಸಂಬಂಧ? ನಿಷೇಧಿಸಲು ಇವರು ಯಾರು’ ಎಂದು ಅಂಕಣಕಾರ ಶಿವಸುಂದರ್ ಪ್ರಶ್ನಿಸಿದರು.</p>.<p>ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ‘ಬಾಡೂಟ ಬಳಗ’ ವತಿಯಿಂದ ‘ಬಾಡೂಟ ಹೋರಾಟಕ್ಕೆ ಒಂದು ವರ್ಷ’ದ ಅಂಗವಾಗಿ ಮಂಗಳವಾರ ನಡೆದ ‘ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಮುನ್ನುಡಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಮಹನೀಯರ ಜಯಂತಿಗಳಲ್ಲಿ ಮಾಂಸಾಹಾರ ತಿನ್ನುಬಾರದು ಎಂದು ಸರ್ಕಾರ ಆದೇಶಿಸುತ್ತದೆ. ದೇಶದ ಇತಿಹಾಸದಲ್ಲಿ ಶ್ರಮಣ ಸಂಸ್ಕೃತಿಗೂ ಬ್ರಾಹ್ಮಣ್ಯ ಸಂಸ್ಕೃತಿಗೂ ನಡೆದಿರುವ ದೊಡ್ಡ ಯುದ್ಧವೇ ಇತಿಹಾಸ ಎಂದು ಅಂಬೇಡ್ಕರ್ ಹೇಳಿರುವ ಮಾತನ್ನು ನೆನಪಿಸಿಕೊಳ್ಳಬೇಕು. ಯಾವುದೇ ಕಾರ್ಯಕ್ರಮವಿರಲಿ, ಸಸ್ಯಾಹಾರ, ಮಾಂಸಾಹಾರವೆರಡೂ ಇರಬೇಕು’ ಎಂದರು.</p>.<p>‘ಪ್ರಜಾವಾಣಿ– ಅಭಿಮತ’ ಸಂಪಾದಕ ರಘುನಾಥ ಚ.ಹ. ಮಾತನಾಡಿ, ‘ಮೊಟ್ಟೆ ಎನ್ನುವ ಹೋರಾಟ ಸಮ್ಮೇಳನಕ್ಕಷ್ಟೇ ಮೀಸಲಾಗುವುದು ಬೇಡ. ಮಾಂಸಹಾರ ತಿನ್ನುವುವವರು ಅಪವಿತ್ರರು ಎಂದೂ ಬಿಂಬಿಸಬಾರದು’ ಎಂದರು.</p>.<p>‘ಕೇರಳದಲ್ಲಿ ‘ಬೀಫ್’ ಎಂಬ ಹೆಸರಿದ್ದ ಕಾರಣಕ್ಕೇ ಸಿನಿಮಾವನ್ನು ನಿಷೇಧಿಸಲಾಯಿತು. ಆದರೆ ಸಿನಿಮಾದಲ್ಲಿ ಬೀಫ್ ಬಗ್ಗೆ ಏನೂ ಹೇಳಿರಲಿಲ್ಲ’ ಎಂದು ವಿಷಾದಿಸಿದರು.</p>.<p>ಲೇಖಕರಾದ ಸಂತೋಷ್ ಗುಡ್ಡಿಯಂಗಡಿ, ಗುರುಪ್ರಸಾದ್ ಕಂಟಲಗೆರೆ, ಉ್ರಗನರಸಿಂಹೇಗೌಡ, ಲೋಕೇಶ್ ಮೊಸಳೆ ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>