<p><strong>ಮಂಡ್ಯ:</strong> ನಗರದಲ್ಲಿನ ಕೆಲವು ಸಾರ್ವಜನಿಕ ಉದ್ಯಾನಗಳು, ಸರ್ಕಾರದ ಮೈದಾನಗಳು ಖಾಸಗಿ ಶಾಲೆಗಳ ಆಟದ ಮೈದಾನಗಳಾಗಿವೆ. ಅದಕ್ಕಾ ಗಿಯೇ ಉದ್ಯಾನದ ಸುತ್ತ ಹಾಕಿದ್ದ ಬೇಲಿಯನ್ನು ಕೆಲವು ಕಡೆ ಕಿತ್ತಿ ಹಾಕಲಾಗಿದೆ. <br /> <br /> ಜಿಲ್ಲಾಧಿಕಾರಿ ಕಚೇರಿ ಹಿಂಭಾಗ, ವಿದ್ಯಾ ನಗರದ ಉದ್ಯಾನ ಹಾಗೂ ಅಶೋಕ ನಗರದ ಬಾಲಭವನ ಸೇರಿದಂತೆ ಮುಂತಾದ ಉದ್ಯಾನದ ಜಾಗಗಳು ಆಟಕ್ಕೆ ಸೀಮಿತವಾಗಿವೆ. ಇಲ್ಲಿ ನೋಡಲು ಒಂದೇ ಒಂದು ಹೂ ಗಿಡವೂ ಸಿಗುವುದಿಲ್ಲ. <br /> <br /> ನಗರದ ಪ್ರಮುಖ ಪ್ರದೇಶ ಗಳಲ್ಲಿರುವ ಉದ್ಯಾನಗಳಲ್ಲಿ ಫುಟ್ಪಾತ್ ನಿರ್ಮಿಸಲಾಗಿದೆ. ಸುತ್ತಲೂ ತಂತಿ ಬೇಲಿ ಹಾಕಲಾಗಿದೆ. ಆದರೆ ಹುಲ್ಲುಗಾವಲು ಬೆಳೆಸಲಿಕ್ಕಾಗಲಿ, ಸಸಿಗಳನ್ನು ನೆಡುವ ಗೋಜಿಗಾಗಲಿ ನಗರಸಸಭೆ ಹೋಗಿಲ್ಲ.<br /> <br /> ಪ್ರತಿ ಶಾಲೆಯೂ ಕಡ್ಡಾಯವಾಗಿ ಆಟದ ಮೈದಾನವನ್ನು ಹೊಂದಿರಬೇಕು ಎಂದು ಶಾಲಾ ಆರಂಭಿಸುವವರಿಗೆ ನಿಯಮವೇ ಇದೆ. ಶಾಲೆ ಆರಂಭದ ಸಂದರ್ಭದಲ್ಲಿ, ಶಾಲೆಯನ್ನು ಇಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿದೆ. <br /> <br /> ಮುಂದಿನ ವರ್ಷದಿಂದ ಮೈದಾನ ಒದಗಿಸಲಾಗುವುದು ಎಂದು ಶಾಲಾ ಆಡಳಿತ ಮಂಡಳಿಯವರು ಹೇಳು ತ್ತಾರೆ. ಮುಂದಿನ ವರ್ಷಗಳಲ್ಲಿ ಅಧಿಕಾರಿಗಳು `ಜಾಣ~ ಕುರುಡರಂತೆ ಮತ್ತೆ ಅದನ್ನು ಪರಿಶೀಲಿಸಲು ಹೋಗುವುದೇ ಇಲ್ಲ.<br /> <br /> ಶಾಲೆಗಳ ಆಸು-ಪಾಸಿನಲ್ಲಿರುವ ಸಾರ್ವಜನಿಕ ಉದ್ಯಾನಗಳನ್ನೇ ಇವರು, ಆಟದ ಮೈದಾನವಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಇಲ್ಲಿಯೇ ತಂದು ಆಟಕ್ಕೆ ಬಿಡುತ್ತಾರೆ. ಇದರಿಂದ ಅಕ್ಕ-ಪಕ್ಕದ ನಿವಾಸಿಗಳಿಗೂ ತೊಂದರೆ ಯಾಗುತ್ತಿದೆ.<br /> <br /> ಜಿಲ್ಲಾಧಿಕಾರಿ ಕಚೇರಿಯ ಹಿಂದಿರುವ ಖಾಸಗಿ ಶಾಲೆಯೊಂದರ ವಿದ್ಯಾರ್ಥಿ ಗಳು ಕಚೇರಿಗೆ ಹೊಂದಿಕೊಂಡಿರುವ ಉದ್ಯಾನವನ್ನೇ ಆಟದ ಮೈದಾನ ವಾಗಿಸಿಕೊಂಡಿದ್ದಾರೆ. ಮಕ್ಕಳೆಂದ ಮೇಲೆ ಕೂಗಾಟ ಇದ್ದದ್ದೆ. ಇದರ ಸುತ್ತಮುತ್ತಲ ಸರ್ಕಾರಿ ಕಚೇರಿಗಳಿವೆ. ಅವರಿಗೂ ತೊಂದರೆಯಾಗುತ್ತದೆ.<br /> <br /> ಸುಭಾಷ ನಗರದ ಉದ್ಯಾನವೂ ಶಾಲೆ ವಿದ್ಯಾರ್ಥಿಗಳ ಆಟದ ಮೈದಾನವಾಗಿದ್ದು, ಸುತ್ತ- ಮುತ್ತಲಿನ ್ಲಲಿರುವ ಮನೆಗಳ ನಿವಾಸಿಗಳಿಗೂ ತೊಂದರೆಯಾಗುತ್ತಿದೆ. ಬಾಲ ಭವನದ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ.<br /> <br /> ಉದ್ಯಾನಗಳ ಪ್ರವೇಶಕ್ಕೆ ವಿದ್ಯಾರ್ಥಿಗಳು ಸರಳ ಮಾರ್ಗ ಕಂಡುಕೊಳ್ಳಲು, ಉದ್ಯಾನ ಸುತ್ತಲು ಹಾಕಲಾಗಿರುವ ಬೇಲಿಯನ್ನೇ ಕಿತ್ತು ಹಾಕಿದ್ದಾರೆ. ಇದನ್ನು ಪರಿಶೀಲಿಸುವ ಗೋಜಿಗೆ ನಗರಸಭೆಯ ಅಧಿಕಾರಿಗಳು ಹೋಗುತ್ತಿಲ್ಲ. ಪರಿಣಾಮ ಇವುಗಳನ್ನು ಸ್ವಂತ ಆಸ್ತಿ ಎಂಬಂತೆ ಬಳಸಿಕೊಳ್ಳಲಾಗುತ್ತಿದೆ.<br /> <br /> ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಆಟದ ಮೈದಾನ ಒದಗಿಸಿಕೊಡಬೇಕು. ಉದ್ಯಾನಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಉದ್ಯಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾರೆ ಚಾಮುಂಡೇಶ್ವರಿ ನಗರದ ಬೈರೇಗೌಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ನಗರದಲ್ಲಿನ ಕೆಲವು ಸಾರ್ವಜನಿಕ ಉದ್ಯಾನಗಳು, ಸರ್ಕಾರದ ಮೈದಾನಗಳು ಖಾಸಗಿ ಶಾಲೆಗಳ ಆಟದ ಮೈದಾನಗಳಾಗಿವೆ. ಅದಕ್ಕಾ ಗಿಯೇ ಉದ್ಯಾನದ ಸುತ್ತ ಹಾಕಿದ್ದ ಬೇಲಿಯನ್ನು ಕೆಲವು ಕಡೆ ಕಿತ್ತಿ ಹಾಕಲಾಗಿದೆ. <br /> <br /> ಜಿಲ್ಲಾಧಿಕಾರಿ ಕಚೇರಿ ಹಿಂಭಾಗ, ವಿದ್ಯಾ ನಗರದ ಉದ್ಯಾನ ಹಾಗೂ ಅಶೋಕ ನಗರದ ಬಾಲಭವನ ಸೇರಿದಂತೆ ಮುಂತಾದ ಉದ್ಯಾನದ ಜಾಗಗಳು ಆಟಕ್ಕೆ ಸೀಮಿತವಾಗಿವೆ. ಇಲ್ಲಿ ನೋಡಲು ಒಂದೇ ಒಂದು ಹೂ ಗಿಡವೂ ಸಿಗುವುದಿಲ್ಲ. <br /> <br /> ನಗರದ ಪ್ರಮುಖ ಪ್ರದೇಶ ಗಳಲ್ಲಿರುವ ಉದ್ಯಾನಗಳಲ್ಲಿ ಫುಟ್ಪಾತ್ ನಿರ್ಮಿಸಲಾಗಿದೆ. ಸುತ್ತಲೂ ತಂತಿ ಬೇಲಿ ಹಾಕಲಾಗಿದೆ. ಆದರೆ ಹುಲ್ಲುಗಾವಲು ಬೆಳೆಸಲಿಕ್ಕಾಗಲಿ, ಸಸಿಗಳನ್ನು ನೆಡುವ ಗೋಜಿಗಾಗಲಿ ನಗರಸಸಭೆ ಹೋಗಿಲ್ಲ.<br /> <br /> ಪ್ರತಿ ಶಾಲೆಯೂ ಕಡ್ಡಾಯವಾಗಿ ಆಟದ ಮೈದಾನವನ್ನು ಹೊಂದಿರಬೇಕು ಎಂದು ಶಾಲಾ ಆರಂಭಿಸುವವರಿಗೆ ನಿಯಮವೇ ಇದೆ. ಶಾಲೆ ಆರಂಭದ ಸಂದರ್ಭದಲ್ಲಿ, ಶಾಲೆಯನ್ನು ಇಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿದೆ. <br /> <br /> ಮುಂದಿನ ವರ್ಷದಿಂದ ಮೈದಾನ ಒದಗಿಸಲಾಗುವುದು ಎಂದು ಶಾಲಾ ಆಡಳಿತ ಮಂಡಳಿಯವರು ಹೇಳು ತ್ತಾರೆ. ಮುಂದಿನ ವರ್ಷಗಳಲ್ಲಿ ಅಧಿಕಾರಿಗಳು `ಜಾಣ~ ಕುರುಡರಂತೆ ಮತ್ತೆ ಅದನ್ನು ಪರಿಶೀಲಿಸಲು ಹೋಗುವುದೇ ಇಲ್ಲ.<br /> <br /> ಶಾಲೆಗಳ ಆಸು-ಪಾಸಿನಲ್ಲಿರುವ ಸಾರ್ವಜನಿಕ ಉದ್ಯಾನಗಳನ್ನೇ ಇವರು, ಆಟದ ಮೈದಾನವಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಇಲ್ಲಿಯೇ ತಂದು ಆಟಕ್ಕೆ ಬಿಡುತ್ತಾರೆ. ಇದರಿಂದ ಅಕ್ಕ-ಪಕ್ಕದ ನಿವಾಸಿಗಳಿಗೂ ತೊಂದರೆ ಯಾಗುತ್ತಿದೆ.<br /> <br /> ಜಿಲ್ಲಾಧಿಕಾರಿ ಕಚೇರಿಯ ಹಿಂದಿರುವ ಖಾಸಗಿ ಶಾಲೆಯೊಂದರ ವಿದ್ಯಾರ್ಥಿ ಗಳು ಕಚೇರಿಗೆ ಹೊಂದಿಕೊಂಡಿರುವ ಉದ್ಯಾನವನ್ನೇ ಆಟದ ಮೈದಾನ ವಾಗಿಸಿಕೊಂಡಿದ್ದಾರೆ. ಮಕ್ಕಳೆಂದ ಮೇಲೆ ಕೂಗಾಟ ಇದ್ದದ್ದೆ. ಇದರ ಸುತ್ತಮುತ್ತಲ ಸರ್ಕಾರಿ ಕಚೇರಿಗಳಿವೆ. ಅವರಿಗೂ ತೊಂದರೆಯಾಗುತ್ತದೆ.<br /> <br /> ಸುಭಾಷ ನಗರದ ಉದ್ಯಾನವೂ ಶಾಲೆ ವಿದ್ಯಾರ್ಥಿಗಳ ಆಟದ ಮೈದಾನವಾಗಿದ್ದು, ಸುತ್ತ- ಮುತ್ತಲಿನ ್ಲಲಿರುವ ಮನೆಗಳ ನಿವಾಸಿಗಳಿಗೂ ತೊಂದರೆಯಾಗುತ್ತಿದೆ. ಬಾಲ ಭವನದ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ.<br /> <br /> ಉದ್ಯಾನಗಳ ಪ್ರವೇಶಕ್ಕೆ ವಿದ್ಯಾರ್ಥಿಗಳು ಸರಳ ಮಾರ್ಗ ಕಂಡುಕೊಳ್ಳಲು, ಉದ್ಯಾನ ಸುತ್ತಲು ಹಾಕಲಾಗಿರುವ ಬೇಲಿಯನ್ನೇ ಕಿತ್ತು ಹಾಕಿದ್ದಾರೆ. ಇದನ್ನು ಪರಿಶೀಲಿಸುವ ಗೋಜಿಗೆ ನಗರಸಭೆಯ ಅಧಿಕಾರಿಗಳು ಹೋಗುತ್ತಿಲ್ಲ. ಪರಿಣಾಮ ಇವುಗಳನ್ನು ಸ್ವಂತ ಆಸ್ತಿ ಎಂಬಂತೆ ಬಳಸಿಕೊಳ್ಳಲಾಗುತ್ತಿದೆ.<br /> <br /> ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಆಟದ ಮೈದಾನ ಒದಗಿಸಿಕೊಡಬೇಕು. ಉದ್ಯಾನಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಉದ್ಯಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾರೆ ಚಾಮುಂಡೇಶ್ವರಿ ನಗರದ ಬೈರೇಗೌಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>