<p><strong>ಮಂಡ್ಯ:</strong> ನಗರದ ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಮಿಲ್ಗೆ ಬಗಾಸ್ ಪೂರೈಸುವ ವ್ಯವಸ್ಥೆಯಲ್ಲಿ ಮಂಗಳವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ.<br /> <br /> ಬೆಳಗ್ಗೆ ಸುಮಾರು 5 ಗಂಟೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದೂ ಬಗಾಸ್ (ಉರುವಲು) ಪೂರೈಸುವ ವ್ಯವಸ್ಥೆಯು ಪೂರ್ಣ ಸುಟ್ಟು ಹೋಗಿದೆ. ತಕ್ಷಣಕ್ಕೆ ಮರು ಬಳಕೆ ಆಗದ ಸ್ಥಿತಿಗೆ ತಲುಪಿದೆ.<br /> <br /> ಬಗಾಸ್ ಸಾಗಣೆಗೆ ಅನುಗುಣವಾಗಿ ಅಳವಡಿಸಿದ್ದ ರಬ್ಬರಿನ ಷೀಟುಗಳು ಹೊತ್ತಿ ಉರಿದಿದ್ದು, ಅಗ್ನಿಶಾಮಕ ದಳದ ಎರಡು ವಾಹನಗಳು ಬಂದು ಬೆಂಕಿ ನಂದಿಸಲು ಶ್ರಮಿಸಿದವರು. ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಿಲ್ಲ.<br /> <br /> ಕಾರ್ಖಾನೆ ಅಧ್ಯಕ್ಷ ನಾಗರಾಜಪ್ಪ ಅವರು, ಈ ಘಟನೆಯಿಂದ ಸುಮಾರು 15 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಿದ್ದಾರೆ. ಘಟನೆಗೆ ಕಾರಣ ಗೊತ್ತಿಲ್ಲ. ಯಾರು, ಏನು ಕಾರಣ ಎಂಬುದು ಗೊತ್ತಿಲ್ಲ. ದೂರು ನೀಡಲಾಗಿದೆ. ತನಿಖೆಯ ನಂತರವೇ ಯಾರು ಕಾರಣ ಎಂಬುದು ತಿಳಿಯಲಿದೆ~ ಎಂದರು.<br /> <br /> ಈ ಸೌಲಭ್ಯಕ್ಕೆ ವಿಮೆ ಮಾಡಿಸಿದ್ದು, ಆತಂಕ ಪಡುವ ಅಗತ್ಯವಿಲ್ಲ. ಜೊತೆಗೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಪ್ರಕ್ರಿಯೆ ಸುಲಲಿತವಾಗಿ ನಡೆಯುವಂತೆಯೂ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.<br /> <br /> ಕಾರ್ಖಾನೆಯಲ್ಲಿ ಇನ್ನೂ ಸುಮಾರು 80 ಸಾವಿರ ಟನ್ ಕಬ್ಬು ಅರೆಯುವುದು ಉಳಿದಿರುವ ಅಂದಾಜಿದೆ. ಬಳಿಕ ಈ ತಿಂಗಳ 30ರ ವೇಳೆಗೆ ಕಬ್ಬು ಅರೆಯುವಿಕೆ ಸ್ಥಗತಿಗೊಳಿಸುವ ಉದ್ದೇಶವಿದೆ. ಮತ್ತೆ ಸಿದ್ಧತೆ ಮಾಡಿಕೊಂಡು ಜುಲೈ ಎರಡನೇ ವಾರ ಕಾರ್ಖಾನೆ ಪುನಾರಂಭಿಸುವ ಗುರಿ ಇದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ನಗರದ ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಮಿಲ್ಗೆ ಬಗಾಸ್ ಪೂರೈಸುವ ವ್ಯವಸ್ಥೆಯಲ್ಲಿ ಮಂಗಳವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ.<br /> <br /> ಬೆಳಗ್ಗೆ ಸುಮಾರು 5 ಗಂಟೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದೂ ಬಗಾಸ್ (ಉರುವಲು) ಪೂರೈಸುವ ವ್ಯವಸ್ಥೆಯು ಪೂರ್ಣ ಸುಟ್ಟು ಹೋಗಿದೆ. ತಕ್ಷಣಕ್ಕೆ ಮರು ಬಳಕೆ ಆಗದ ಸ್ಥಿತಿಗೆ ತಲುಪಿದೆ.<br /> <br /> ಬಗಾಸ್ ಸಾಗಣೆಗೆ ಅನುಗುಣವಾಗಿ ಅಳವಡಿಸಿದ್ದ ರಬ್ಬರಿನ ಷೀಟುಗಳು ಹೊತ್ತಿ ಉರಿದಿದ್ದು, ಅಗ್ನಿಶಾಮಕ ದಳದ ಎರಡು ವಾಹನಗಳು ಬಂದು ಬೆಂಕಿ ನಂದಿಸಲು ಶ್ರಮಿಸಿದವರು. ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಿಲ್ಲ.<br /> <br /> ಕಾರ್ಖಾನೆ ಅಧ್ಯಕ್ಷ ನಾಗರಾಜಪ್ಪ ಅವರು, ಈ ಘಟನೆಯಿಂದ ಸುಮಾರು 15 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಿದ್ದಾರೆ. ಘಟನೆಗೆ ಕಾರಣ ಗೊತ್ತಿಲ್ಲ. ಯಾರು, ಏನು ಕಾರಣ ಎಂಬುದು ಗೊತ್ತಿಲ್ಲ. ದೂರು ನೀಡಲಾಗಿದೆ. ತನಿಖೆಯ ನಂತರವೇ ಯಾರು ಕಾರಣ ಎಂಬುದು ತಿಳಿಯಲಿದೆ~ ಎಂದರು.<br /> <br /> ಈ ಸೌಲಭ್ಯಕ್ಕೆ ವಿಮೆ ಮಾಡಿಸಿದ್ದು, ಆತಂಕ ಪಡುವ ಅಗತ್ಯವಿಲ್ಲ. ಜೊತೆಗೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಪ್ರಕ್ರಿಯೆ ಸುಲಲಿತವಾಗಿ ನಡೆಯುವಂತೆಯೂ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.<br /> <br /> ಕಾರ್ಖಾನೆಯಲ್ಲಿ ಇನ್ನೂ ಸುಮಾರು 80 ಸಾವಿರ ಟನ್ ಕಬ್ಬು ಅರೆಯುವುದು ಉಳಿದಿರುವ ಅಂದಾಜಿದೆ. ಬಳಿಕ ಈ ತಿಂಗಳ 30ರ ವೇಳೆಗೆ ಕಬ್ಬು ಅರೆಯುವಿಕೆ ಸ್ಥಗತಿಗೊಳಿಸುವ ಉದ್ದೇಶವಿದೆ. ಮತ್ತೆ ಸಿದ್ಧತೆ ಮಾಡಿಕೊಂಡು ಜುಲೈ ಎರಡನೇ ವಾರ ಕಾರ್ಖಾನೆ ಪುನಾರಂಭಿಸುವ ಗುರಿ ಇದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>