<p><strong>ಮಳವಳ್ಳಿ: </strong>ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಪಟ್ಟಣದ ಹೊರವಲಯ ದಲ್ಲಿರುವ ಮಾರೇಹಳ್ಳಿ ಬೀರೇಶ್ವರ ಸ್ವಾಮಿ ಜಾತ್ರೆಯು ಮಂಗಳವಾರ ವಿಜೃಂಭಣೆಯಿಂದ ನಡೆಯಿತು.<br /> <br /> ಸೋಮವಾರ ಸಂಜೆ ಕನಕಪುರ ತಾಲ್ಲೂಕು ಮೇಕೆದಾಟು ಸಂಗಮ ಬಳಿಯಿರುವ ಮಡಿವಾಳದಿಂದ ದೇವ ರನ್ನು ತಂದು ಇಲ್ಲಿ ಇಡಲಾಗುತ್ತದೆ. ಜತೆಗೆ ಚಂದಹಳ್ಳಿ, ಮಲೆಯೂರು, ತಲಕಾಡು, ಅಗಸನಪುರಕ್ಕೆ ಸೇರಿದ 24 ದೇವರುಗಳನ್ನು ಇಲ್ಲಿ ಶ್ರದ್ಧಾಭಕ್ತಿ ಯಿಂದ ಪೂಜಿಸಲಾಗುತ್ತದೆ.<br /> <br /> ಇದಕ್ಕಾಗಿ ಸೋಮವಾರ ಮಧ್ಯಾಹ್ನದಿಂದಲೇ ಕಮಾನು ಕಟ್ಟಿದ ನೂರಾರು ಎತ್ತಿನಗಾಡಿಗಳು ಸೇರಿದಂತೆ ವಾಹನಗಳ ಮೂಲಕ ಜನರು ಬಂದು ಟೆಂಟ್ ಹಾಕಿದ್ದಾರೆ. ದೇವರ ದರ್ಶನಕ್ಕೆ ಮಂಗಳವಾರ ಬೆಳಿಗ್ಗೆಯಿಂದ ಸರದಿಯಲ್ಲಿ ಭಕ್ತರು ನಿಂತಿದ್ದರು. ನಂತರ ಅನ್ನಸಂತರ್ಪಣೆ ನಡೆಯಿತು.<br /> <br /> ಈ ದೇವಾಲಯವು ರಾಷ್ಟ್ರೀಯ ಹೆದ್ದಾರಿ 209 ರಿಂದ ಒಂದು ಕಿ.ಮೀ. ದೂರದಲ್ಲಿದ್ದು ಮುಖ್ಯರಸ್ತೆಯಿಂದ ದೇವಾಲಯದವರೆಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ಇದ್ದದ್ದು ವಿಶೇಷವಾಗಿತ್ತು.<br /> <br /> ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ಡಾ.ಕೆನ್ನದಾನಿ, ಆದರ್ಶ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಮೂರ್ತಿ ಇತರ ಗಣ್ಯರು ಪೂಜೆ ಸಲ್ಲಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಳವಳ್ಳಿ: </strong>ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಪಟ್ಟಣದ ಹೊರವಲಯ ದಲ್ಲಿರುವ ಮಾರೇಹಳ್ಳಿ ಬೀರೇಶ್ವರ ಸ್ವಾಮಿ ಜಾತ್ರೆಯು ಮಂಗಳವಾರ ವಿಜೃಂಭಣೆಯಿಂದ ನಡೆಯಿತು.<br /> <br /> ಸೋಮವಾರ ಸಂಜೆ ಕನಕಪುರ ತಾಲ್ಲೂಕು ಮೇಕೆದಾಟು ಸಂಗಮ ಬಳಿಯಿರುವ ಮಡಿವಾಳದಿಂದ ದೇವ ರನ್ನು ತಂದು ಇಲ್ಲಿ ಇಡಲಾಗುತ್ತದೆ. ಜತೆಗೆ ಚಂದಹಳ್ಳಿ, ಮಲೆಯೂರು, ತಲಕಾಡು, ಅಗಸನಪುರಕ್ಕೆ ಸೇರಿದ 24 ದೇವರುಗಳನ್ನು ಇಲ್ಲಿ ಶ್ರದ್ಧಾಭಕ್ತಿ ಯಿಂದ ಪೂಜಿಸಲಾಗುತ್ತದೆ.<br /> <br /> ಇದಕ್ಕಾಗಿ ಸೋಮವಾರ ಮಧ್ಯಾಹ್ನದಿಂದಲೇ ಕಮಾನು ಕಟ್ಟಿದ ನೂರಾರು ಎತ್ತಿನಗಾಡಿಗಳು ಸೇರಿದಂತೆ ವಾಹನಗಳ ಮೂಲಕ ಜನರು ಬಂದು ಟೆಂಟ್ ಹಾಕಿದ್ದಾರೆ. ದೇವರ ದರ್ಶನಕ್ಕೆ ಮಂಗಳವಾರ ಬೆಳಿಗ್ಗೆಯಿಂದ ಸರದಿಯಲ್ಲಿ ಭಕ್ತರು ನಿಂತಿದ್ದರು. ನಂತರ ಅನ್ನಸಂತರ್ಪಣೆ ನಡೆಯಿತು.<br /> <br /> ಈ ದೇವಾಲಯವು ರಾಷ್ಟ್ರೀಯ ಹೆದ್ದಾರಿ 209 ರಿಂದ ಒಂದು ಕಿ.ಮೀ. ದೂರದಲ್ಲಿದ್ದು ಮುಖ್ಯರಸ್ತೆಯಿಂದ ದೇವಾಲಯದವರೆಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ಇದ್ದದ್ದು ವಿಶೇಷವಾಗಿತ್ತು.<br /> <br /> ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ಡಾ.ಕೆನ್ನದಾನಿ, ಆದರ್ಶ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಮೂರ್ತಿ ಇತರ ಗಣ್ಯರು ಪೂಜೆ ಸಲ್ಲಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>