ಈ ನಡುವೆ ಅವರ ತಂದೆ ಭೀಮು ಪ್ರಸಾದ ಅನಾರೋಗ್ಯದಿಂದ ಆಸ್ಪತ್ರೆ ಸೇರಿ ಚಿಂತಾಜನಕ ಸ್ಥಿತಿಯಲ್ಲಿರುವ ಸುದ್ದಿ ತಿಳಿದು, ಗಾಬರಿಯಾಗಿದ್ದರು. ವಿಷಯ ತಿಳಿದ ಕಾಲೇಜು ಪ್ರಾಚಾರ್ಯ ಡಾ.ಅರವಿಂದ ಪಾಟೀಲ್ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಮೂಲಕ ಜಿಲ್ಲಾಡಳಿತದ ಗಮನಕ್ಕೆ ತಂದು, ಪಾಸ್ ಕಲ್ಪಿಸಿದರು. ಇದರಿಂದ ವಿದ್ಯಾರ್ಥಿನಿ ಶುಕ್ರವಾರ ತಮ್ಮ ಊರಿಗೆ ಸುರಕ್ಷಿತವಾಗಿ ತೆರಳಿದ್ದಾರೆ.